ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ. ೧೪.] ಏಕಾದಶಸ್ಕಂಧವು, ೨೫೨೧ ಕ್ಕಾಗಿಯೇ ನಾನು ಬಂದವನು! ನನ್ನನ್ನು ನೋಡಿದಾಗ ನೀವು ( ನೀನು ಯಾರೆಂದು ಕೇಳಿದಿರಲ್ಲವೆ ? ಯಜ್ಞಸ್ವರೂಪನಾದ ಸಾಕ್ಷಾತ್ವಿಷ್ಣುವೇ ನಾನೆಂದು ತಿಳಿಯಿರಿ ? ಆತ್ಮ ಪರಮಾಪಾಸನರೂಪಗಳಾದ ಸ೦ ಖ್ಯಯೋಗಗಳಿಗೂ, ಸತ್ವಭೂತಹಿತಾಚರಣವೆಂಬ ಸತ್ಯಕ್ಕ, ಪುಣ್ಯ ಕರಗಳೆಂಬ ಮತಕ್ಕೂ, ತೇಜಸ್ಸು, ಕೀರ್ತಿ, ಲಕ್ಷ್ಮಿ, ಮುಂತಾದ ಸಾ ಸಿಗೂ, ಶಮಕ್ಕೂ ನಾನೇ ಮುಖ್ಯಾಶ್ರಯನೆಂದೂ, ನಾನೇ ಪ್ರವ ರ್ತಕನೆಂದೂ ತಿಳಿಯಿರಿ. ನಾನು ಹೇಯಗುಣವಿಲ್ಲದವನು ಪೂರ್ಣ ಕಾಮನು. ಸಮಸಜೀವಗಳಿಗೂ, ಪ್ರಿಯನೂ, ಸುಹೃತ್ಯ, ಅಂತರಾತ್ಮನೂ ಆಗಿರು ವೆನು. ವೈಷಮ್ಯವಿಲ್ಲದ ಸಾಮ್ರಬುದ್ಧಿ, ನಿತ್ಯಾನಂದಾನುಭವ, ಮುಂತಾದ ಸಮಸ್ತ ಕಲ್ಯಾಣಗುಣಗಳೂ ನನ್ನನ್ನು ಸೇವಿಸುತ್ತಿರುವುವು.” ಎಂದನು. ಉದ್ಯವಾ ! ಹೀಗೆ ನಾನು, ಹಂಸರೂಪದಿಂದ ಬಂದ ಆ ಸನಕಾದಿಗಳಿಗೆ ತತ್ರೋಪದೇಶವನ್ನು ಮಾಡಿದಮೇಲೆ, ಅವರಿಗಿದ ಸಂದೇಹಗಳೆಲ್ಲವೂ ನೀಗಿ ದುವು. ಅವರೆಲ್ಲರೂ ಪರಮಭಕ್ತಿಯಿಂದ ನನ ನ್ನು ಪೂಜಿಸಿ ಸ್ತುತಿಸಿದರು. ಅವರ ಸತಾರಗಳೆಲ್ಲವನ್ನೂ ನಾನು ಸಂತೋಷಂದ ಸ್ವೀಕರಿಸಿ, ಚತುರು ಖನು ನೋಡುತಿದ್ದ ಹಾಗೆಯೇ ಅದೇರೂಪದಿಂದ ಇಲ್ಲಿಂದ ಹಾರಿ, ನನ್ನ ಸಾ. ನಕ್ಕೆ ಬಂದು ಸೇರಿದೆನು” ಎಂದನು. ಇದು ಹದಿಮೂರನೆಯ ಅಧ್ಯಾಯವ.


* ಪುರುಷಾರ್ಥಗಳಲ್ಲಿ ಮೋಕ್ಷವೇ ಪ್ರಧಾನವೆಂ )

ದೂ, ಆ ಮೋಕ್ಷವೆಂಬುದು ತನ್ನನ್ನು ಹೊ 1) ರತು ಬೇರೆueಂದನ್ನು ಉದ್ದೇಶಿಸಿದುದಲ್ಲವೆಂ ( ದೂ, ಕೃಷ್ಣನು ಉದ್ದವನಿಗೆ ತಿಳಿಸಿದುದು. ಉದ್ಯವನ್ನು ತಿರುಗಿ ಪ್ರಶ್ನೆ ಮಾಡುವನು (ಕೃಷ್ಣಾ! ವೇದಪಿತ್ತ ಗಳು, ಧ, ಅರ್ಥ, ಕಾಮ, ಮೋಕ್ಷಗಳೆಂಬ ನಾನಾಬಗೆಯ ಶ್ರೇಯಸ್ಸು ಗಳನ್ನೂ, ಅದಕ್ಕೆ ಬೇರೆಬೇರೆ ಸಾಧನಗಳನ್ನೂ ಹೇಳಿರುವರು. ಸೇನಾ ದರೋ ಈಗ ಫಲಾಪೇಕ್ಷೆಯಿಲ್ಲದ ಭಕ್ತಿಯೋಗವೊಂದೇ ಪುರುಷರ ಸಾಧ ನವೆಂದು ನಿರೂಪಿಸಿರುವೆ ಹೀಗೆ ನಾನಾವಿಧಗಳಾದ ಶ್ರೇಯಸ್ಸುಗಳಲ್ಲಿ ಮನುಷ್ಯನು ಅವನವನಿಗೆ ಇಷ್ಟಬಂದ ಯಾವುದಾದರೂ ಒಂದನ್ನು ಹಿಡಿಯ