ಪುಟ:Khinnate banni nivarisoona.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡುವ ನೀಡುವ ಭಾವ ಶಿವ (ದೈವ) ಕೃತ್ಯವೆಂದಡೆ ಜ್ಞಾನವಯ್ಯ
ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ
ಕಪಿಲಸಿದ್ದ ಮಲ್ಲಿಕಾರ್ಜುನಾ.


ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು, ಆಶಾವಾದಗಳು, ಸರಿನಿರ್ಧಾರಗಳನ್ನು ಮಾಡುವುದು. ವಿಷಯ ವಸ್ತು-ಸಂದರ್ಭ ಘಟನೆಗಳ ವಾಸ್ತವಿಕ-ಸತ್ಯದ ವಿಶ್ಲೇಷಣೆ ಮಾಡುವುದು. ಪ್ರೀತಿ ವಿಶ್ವಾಸ ಸ್ನೇಹ, ದಯೆ- ಅನುಕಂಪ ಸಹಾನುಭೂತಿ, ಸ್ವಾಭಿಮಾನ, ಧೈರ್ಯದಂತಹ ಸಕಾರಾತ್ಮಕ ಭಾವನೆಗಳ ಪ್ರಕಟಣೆ, ಜೀವನದ ಬೇಕುಬೇಡಗಳನ್ನು, ಸಮಾಜ ವಿಧಿಸುವ ಕಟ್ಟುಕಟ್ಟಳೆಗಳೊಳಗೆ ಪೂರೈಸಿಕೊಂಡು ತೃಪ್ತಿಪಡುವುದು. ಇತರರಿಗೆ ನೋವು ತೊಂದರೆ ಕೊಡದೆ ಋಜು ಮಾರ್ಗದಲ್ಲಿ ನಡೆಯುವುದು. ಸಕಲರಿಗೆ ಲೇಸನ್ನು ಬಯಸುವುದು, ಯಾವುದೇ ಸಂದರ್ಭ ಸನ್ನಿವೇಶಕ್ಕೆ ಹೊಂದಿಕೊಳ್ಳು ವುದು. ಏನಾದರೂ ಉತ್ತಮವಾದ ಗುರಿ ಇಟ್ಟುಕೊಂಡು, ಅದನ್ನು ಧರ್ಮಮಾರ್ಗದಲ್ಲಿ ಮುಟ್ಟಲು ಪ್ರಯತ್ನಿಸುವುದು, ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ದೀನ-ದಲಿತ-ಅಂಗವಿಕಲರಿಗೆ ನೆರವಾಗುವುದು, ಪರೋಪಕಾರ ಮಾಡುವುದು ಮಾನಸಿಕ ಆರೋಗ್ಯದ ಲಕ್ಷಣಗಳು.

ನಕಾರಾತ್ಮಕ ಆಲೋಚನೆಗಳು, ನಿರಾಶಾವಾದ, ದುಡುಕಿ ತಪ್ಪು ನಿರ್ಧಾರಗಳನ್ನು ಮಾಡುವುದು, ಸದಾ ಕಲ್ಪನಾಲೋಕದಲ್ಲಿ ವಿಹರಿಸುವುದು. ಸತ್ಯವಾಸ್ತವಿಕತೆಯನ್ನು ಒಪ್ಪಲು ನಿರಾಕರಿಸುವುದು, ಇತರರು ಹೇಳಿದ್ದನ್ನೆಲ್ಲಾ, ನೋಡಿದ್ದು ಕೇಳಿದ್ದನ್ನೆಲ್ಲಾ ಸುಲಭವಾಗಿ ನಂಬುವುದು, ಮೂಢನಂಬಿಕೆಗಳು ಕಂದಾಚಾರಗಳನ್ನು ಪ್ರೋತ್ಸಾಹಿಸುವುದು, ಮನಸ್ಸಿನೊಳಗೆ ಆಸೆ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳನ್ನು ತುಂಬಿಕೊಳ್ಳುವುದು, ಪರಹಿತಕ್ಕಿಂತ ಸ್ವಾರ್ಥಕ್ಕೇ ಹೆಚ್ಚು ಆದ್ಯತೆ ನೀಡುವುದು, ಭೂತ-ಭವಿಷ್ಯಗಳ ಬಗ್ಗೆ ಇಲ್ಲದುದರ ಬಗ್ಗೆ ಆಗಿಹೋದ ತಪ್ಪು ಕಹಿಘಟನೆಗಳ ಬಗ್ಗೆ ಚಿಂತಿಸಿ ಕೊರಗುವುದು, ಅಲ್ಪ ಕಾರಣಗಳೇ ದುಃಖ, ಭಯ, ಕೋಪಗಳನ್ನು ಪಕಟಿಸುವುದು, ಗುರಿ ಇಲ್ಲದೇ ಜೀವನಮಾಡುವುದು, ಗುರಿ ಇಟ್ಟುಕೊಂಡರೂ, ಮಾರ್ಗದ ಬಗ್ಗೆ ವಿವೇಚನೆ ಇಲ್ಲದಿರುವುದು, ಅಕ್ರಮ ಅನ್ಯಾಯ, ಅಧರ್ಮದ


ಖಿನ್ನತೆ: ಬನ್ನಿ ನಿವಾರಿಸೋಣ / 47