ಪುಟ:Khinnate banni nivarisoona.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
  • ವ್ಯಕ್ತಿಯನ್ನು ಒಂಟಿಯಾಗಿರಲು ಬಿಡಬೇಡಿ, ಯಾರಾದರೂ ವ್ಯಕ್ತಿಯ ಜೊತೆಯಲ್ಲಿರುವಂತೆ ವ್ಯವಸ್ಥೆ ಮಾಡಿ, ವ್ಯಕ್ತಿ ಸ್ನಾನದ ಮನೆ ಶೌಚಾಲಯಕ್ಕೆ ಹೋದಾಗ ಚಿಲುಕ ಹಾಕಿಕೊಳ್ಳದಿರಲಿ, ತಡವಾದರೆ ಏಕೆ ತಡ ಎಂದು ಕೇಳಿ.
  • ವ್ಯಕ್ತಿ ತನ್ನ ನಿರಾಶೆ ಬವಣೆಗಳ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಿ, ನಿಮ್ಮ ಸಹಾಯ ಹಸ್ತವನ್ನು ನೀಡಿ, ಆತನ ಆಕೆಯ ಸಮಸ್ಯೆಗಳಿಗೆ ಪರಿಹಾರವಿದೆ ಎನ್ನಿ, ನೋವಿಗೆ ಭಾವನಾತ್ಮಕವಾಗಿ ಸ್ಪಂದಿಸಿ.
  • ಅಪಾಯಕಾರಿ ವಸ್ತುಗಳು ವ್ಯಕ್ತಿಗೆ ಸಿಗದಂತೆ ನೋಡಿಕೊಳ್ಳಿ. ಚಾಕು, ಬ್ಲಡ್, ರೇಜರ್, ಸೀಮೆಎಣ್ಣೆ, ಟಿಕ್ ಟ್ವೆಂಟಿ, ಔಷಧಿ ಮಾತ್ರೆಗಳು ಇತ್ಯಾದಿ.
  • ವ್ಯಕ್ತಿಯ ಊಟ-ತಿಂಡಿ-ನಿದ್ರೆಯನ್ನು ಗಮನಿಸಿ.
  • ವ್ಯಕ್ತಿಯ ಯಾವುದಾದರೂ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ, ಸಂಗೀತ, ಧ್ಯಾನ, ಪೂಜೆ, ಆಟಗಳಲ್ಲಿ ತೊಡಗಿಸಿ.
  • ವೈದ್ಯರಿಂದ ಖಿನ್ನತೆ ಶಮನಕ್ಕಾಗಿ ಮಾತ್ರೆ ಕೊಡಿಸಿ. ಅದನ್ನು ವ್ಯಕ್ತಿಯ ಕೈಗೆ ಕೊಡದೆ, ಆಯಾ ಹೊತ್ತಿನ ಮಾತ್ರೆಯನ್ನು ಯಾರಾದರೂ ನುಂಗಿಸುವಂತೆ ಮಾಡಿ. ಅಗತ್ಯ ಬಂದರೆ ಆಸ್ಪತ್ರೆಗೆ ಅಡ್ಮಿಟ್ ಮಾಡಿ.

ಆಸೆಗಳ ಕೆಣಕದಿರು, ಪಾಶಗಳ ಬಿಗಿಯದಿರು |
ಕೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಕೃತಿಯ ಚುಚ್ಚದಿರು |
ಎನ್ನುತೀಶನ ಬೇಡುತಿರೋ ||

ಆಸೆಗಳನ್ನು ಪ್ರಚೋದಿಸಬೇಡ, ಬಂಧನಗಳ ಬಿಗಿಯನ್ನು ಹೆಚ್ಚಿಸಬೇಡ. ಕಷ್ಟಕರವಾದ ಪರೀಕ್ಷೆಗಳನ್ನು ಎದುರಿಸಲು ನನ್ನನ್ನು ಕರೆಯಬೇಡ, ಬೇಸರ ತರುವಂತಹ ಪಾಪ-ತಪ್ಪುಗಳ ನೆನಪುಗಳಿಂದ ಚುಚ್ಚಬೇಡ ಎಂದು ದೇವರಲ್ಲಿ ಬೇಡಿಕೊ ಎನ್ನುತ್ತಾರೆ ಡಿ.ವಿ.ಜಿ.

38 / ಖಿನ್ನತೆ: ಬನ್ನಿ ನಿವಾರಿಸೋಣ