ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಗ, ಜ೧] ಅಯೋಧ್ಯಾಕಾಂಡವು. ೪ ತಿದ್ದನು. ಆಗಲೇ ಆತನು ಮನಸ್ಸಿನಲ್ಲಿ ( ಈತನು ತನಗೆ ಅರ್ಥಶರೀರ ಭೂತೆಯಾದ ಸೀತಾದೇವಿಯನ್ನೇ ಕರೆದುಕೊಂಡು ಹೋಗುವುದಕ್ಕೆ ಸಮ್ಮ ತಿಸದೆ, ಕೊನೆಗೆ ಬಹುನಿರ್ಬಂಧಕ್ಕಾಗಿ ಒಪ್ಪಿಕೊಂಡಿರುವನಲ್ಲಾ! ಇನ್ನು ನನ್ನ ಗತಿಯೇನು ?” ಎಂದು ದುಃಖದಿಂದ ಕಣ್ಣೀರನ್ನು ಸುರಿಸುತ್ತಿದ್ದನು. ಕೊನೆಗೆ ವ್ಯಸನವನ್ನು ತಡೆಯಲಾರದೆ * ರಾಮನ ಪಾದಗಳಮೇಲೆ ಬಿದ್ದು

  • ಇದಕ್ಕೆ 'ಗಭ್ರಾತಶ್ಚರಣೆ ಗಾಢ ನಿಪೀಣ್ಯ ರಘುನಂದನಃ | ಸೀತಾಮುವಾ ಚಾತಿಯಶಾ ರಾಘವಂ ಚ ಮಹಾವ್ರತಂ |” ಎಂಬುದೇ ಮೂಲಶ್ಲೋಕವು, ಇಷ್ಟಾಕ್ಷ ಸಿದ್ದಿಗಾಗಿ ಇಷ್ಟದೇವತೆಯಲ್ಲಿ ಶರಣಾಗತಿಯನ್ನು ಮಾಡಬೇಕು. ಅದಕ್ಕೆ ತಕ್ಕ ಶರು ವಕಾರವೂ ಇರಬೇಕು, ಇಲ್ಲಿ ಲಕ್ಷಣನು ತನಗೆ ರಾಮಾನುವನವೆಂಬ ಇಷ್ಟಾರನ ಸಿದ್ದಿಸುವುದಕ್ಕಾಗಿ, ಸೀತಾದೇವಿಯ ಪುರುಷಕರ ಮುಖದಿಂದ ರಾಮನಲ್ಲಿ ಶರಣಾಗು ಯನ್ನು ಮಾಡುವನು. (ಸ:) ಬೇರೆ ಯಾವುದೆಂದುಪಾಯವೂ ತೋರದೆಹೋದುದ ರಿಂದ ಹಾಗೆ ಅನನ್ಯಗತಿಕನಾದವನೆಂದು ಭಾವವು. ಇಂತಹ ಲಕ್ಷಕನು (ಭ್ರಾತಶ್ರಕ ಗಾಢಂ ನಿಪೀಡ) ಅಕ್ಕನ ಕಾಲುಗಳನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಂಡು, ಇದ ರಿಂದ ದೃಢವಿಶ್ವಾಸಪೂರಕವಾದ ಶರಣಾಗತಿಯು ಹೇಳಲ್ಪಡುವುದು (ಸೀತಾಂ ಮೊದ ಲು ಸೀತೆಯನ್ನು ನೋಡಿ, ಎಂದರೆ, ಮೊದಲು ಪುರುಷಕಾರಕ್ಕಾಗಿ ನಿಂತೆಯನ್ನಾಶ್ರಯಿಸಿ (ಉವಾಚ ಪ್ರಾರಿಸಿದನು. ಅಮೇಲೆ (ಮಹಾವ್ರತಂ) ಶರಣಾಗತಪರಿಪಾಲವೆಂಬ ವ್ರತ ನಿಷ್ಠನಾದ, ನ ತ್ಯಜೇಯಂ ಕ ವಾಚನ”.“ಏತದ್ವತಂ ಮಮ” ಎಂಬುದಾಗಿ, ಆಶ್ರಿತ ರಕ್ಷಣವೆಂಬ ಮಹಾವ್ರತವನ್ನು ಕೈಗೊಂಡಿರುವ ಮತ್ತು (ರಾಘವ೦) ರಘುವಂಶೋತ್ರ

ನಾದವನನ್ನು, ರಘುರಾಕ್ಷಸಸಂವಾದಾದಿಗಳಲ್ಲಿ ಶರಣಾಗತರಕ್ಷಣವೇ ರಘುವಂಶದ ಮುಖ್ಯಧರ ವೆಂದು ಸಿದ್ದವಾಗುವುದರಿಂದ, ಅಂತಹ ವಂಶದಲ್ಲಿ ಹುಟ್ಟಿದ ರಾಮನೂ ಡನೆ, (ಉವಾಚ) ಪ್ರಾಸಿ ಹೇಳಿದನೆಂದು ಭಾವ. ಶರಣಾಗತಿಯಿಂದ ಸಫಲಗಳು ಸಿದ್ದಿಸುವುವಾದುದದಿಂದ, ಶರಣಾಗತಿಯನ್ನು ಮಾಡಿ ತನ್ನ ಕೋರಿಕೆಯನ್ನು ತಿಳಿಸಿದ. ದಾಗಿ ಗ್ರಹಿಸಬೇಕು, 'ಸಭಾತುಶ್ಚರಣೆ ಗಾಢಂ ನಿಪೀಡ” ಎಂಬುದರಿಂದ “ದ್ವಯ” ವೆಂಬ ಮಂತ್ರವಾಕ್ಯದಲ್ಲಿ, ಪೂಖಂಡದಲ್ಲಿ ಹೇಳಲ್ಪಡುವ ಶರಣಾಗತಿಯ ರಾಘವಮುವಾಚ' ಎಂಬುದರಿಂದ ಉತ್ತರಖಂಡದಲ್ಲಿ ಹೇಳಲ್ಪಡುವ ಫಲಾರ: ಯೂ, “ಸೀತಾಮುವಾಚ” ಎಂಬ'ದರಿಂದ ಈ ಶರೋತ್ತರಖಂಡಗಳೆರಡರಲ್ಲಿಯೂ ನಿಪಿಸಲ್ಪಡುವ ಪರುಷಕರಪರಿಗ್ರಹವೂ ಪ್ರತಿಪಾದಿತವೆಂದು ತಿಳಿಯಬೇಕು (ವಿಂದರಾಜೀಯವು.)