ಪುಟ:Rangammana Vathara.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

27

ಕಡಮೆ ಬಾಡಿಗೆಗೆ ಮನೆ ಹುಡುಕಿ ಹುಡುಕಿ ಸಿಗದೆ ಇದ್ದ ಹಸ್ತಸಾಮುದ್ರಿಕದ
ಪದ್ಮನಾಭನ ಹೆಂಡತಿಯೆಂದಳು:
"ಕಮ್ಮಿ ಬಾಡಿಗೆಗೆ ಅವರಿಗೆ ಬೇರೆ ಮನೆ ಸಿಗ್ತೋ ಏನೋ."

ರಂಗಮ್ಮ ಒಣ ನಗೆ ನಕ್ಕರು.ಮಾತನಾಡಲಿಲ್ಲ."ಮೂರು ತಿಂಗಳ ಬಾಡಿಗೆ
ಬಿಟ್ಟುಕೊಟ್ಟಿದ್ದೀನಿ" ಎಂದು ವಠಾರಕ್ಕೆಲ್ಲ ಸಾರಿ ಹೇಳುವ ಅಪೇಕ್ಷೆ ಅವರಿಗಾಯಿತು.
ಆದರೆ ಅದನ್ನು ಅವರು ಅದುಮಿ ಹಿಡಿದರು. ಹಾಗೆ ಇತರರೆದುರು ಜಾಹೀರು ಮಾಡು
ವುದರಿಂದ, ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚೆಂಬುದು ಅವರಿಗೆ ಸ್ಪಷ್ಟವಾಗದಿರಲಿಲ್ಲ.
ಆದರೆ ತಿಳಿದವರಿಗೆ ತಿಳಿದೇ ಇತ್ತು.
ಮೀನಾಕ್ಷಮ್ಮನ ಮಗ ತನ್ನ ತಾಯಿಯ ಎದುರಿನಲ್ಲೇ ನಾರಾಯಣಿಯ ಮಗ
ನನ್ನು ಕೇಳಿದ:
"ನೀವೆಲ್ಲ ಹೊರಟ್ಹೋಗ್ತೀರೇನೋ ಪುಟ್ಟೂ?"
"ಏನೋ. ಅಪ್ಪ ಹೇಳೇ ಇಲ್ಲ."
"ನಮ್ಮ ಸ್ಕೂಲಿಗೆ ಇನ್ನು ಬರಲ್ವೇನು ಹಾಗಾದ್ರೆ?"
ಶಾಲೆಯ ಪ್ರಸ್ತಾಪದಿಂದ ಪುಟ್ಟನ ಕಣ್ಣುಗಳು ಹನಿಗೂಡಿದುವು.
ಮಗನಿಗೆಂದು ತಿಂಡಿ ಮಾಡುತ್ತಿದ್ದ ಮೀನಾಕ್ಷಮ್ಮ ಹೆಚ್ಚಾಗಿಯೇ ತಯಾರಿಸಿ
ನಾರಾಯಣಿಯ ಮಕ್ಕಳಿಗೂ ಕೊಟ್ಟಳು.
ರಾತ್ರೆ ತಂದೆ ಬರುವವರೆಗೂ ಪುಟ್ಟ ನಿದ್ದೆ ಹೋಗಲಿಲ್ಲ. ತಂದೆಯನ್ನು ಕಾಣು
ತ್ತಲೇ ಆತ ಕೇಳಿದ:
"ಅಪ್ಪ, ನಾವೆಲ್ಲಿಗೆ ಹೋಗ್ತೀವಪ್ಪ?"
"ಸುಡುಗಾಡಿಗೆ!"
ಸೋತು ಬಂದಿದ್ದ ತಂದೆಯ ಧ್ವನಿ ಕರ್ಕಶವಾಗಿತ್ತು. ಪುಟ್ಟ ಮತ್ತೊಂದು
ಪ್ರಶ್ನೆ ಕೇಳದೆ, ಮಾತನಾಡದೆ, ಉಳಿದ ಮೂವರ ಜತೆಯಲ್ಲಿ ತಾನೂ ಮಲಗಿ ನಿದ್ದೆ
ಹೋದ.
ಆ ತಂದೆಗೆ ರಾತ್ರೆ ಸರಿಯಾಗಿ ನಿದ್ದೆ ಬರಲಿಲ್ಲ. ಆ ರಾತ್ರೆ ಕಳೆದು ಬರುವ
ದಿನವೇ ಶನಿವಾರ. "...ಶನಿವಾರ ಸಾಯಂಕಾಲದ ಹೊತ್ತಗೆ ಮನೆ ಖಾಲಿ ಮಾಡೇ
ತೀರ್ಬೇಕು..." ನಾರಾಯಣಿ ಸತ್ತಳೆಂದು ಸಾರುತ್ತಿದ್ದ ಹಣತೆ ಆರಿ ಹೋಗಿತ್ತಲ್ಲ?
ಅದನ್ನು ಮತ್ತೆ ಬೆಳಗುವ ಗೋಜಿಗೆ ಆತ ಹೋಗಲಿಲ್ಲ. ಆ ಯಾವ ಕಟ್ಟು ಕಟ್ಟಳೆಗೂ
ಆಗ ಅರ್ಥವಿದ್ದಂತೆ ಅವನಿಗೆ ತೋರಲಿಲ್ಲ....ಬಗೆಹರಿಯದ ಯೋಚನೆಗಳ ಸಹವಾಸ
ದಲ್ಲಿ ಆ ಇರುಳು ನಿಧಾನವಾಗಿ ಕರಗಿತು.
ಕಿರ್ರ್ ಎಂದು ರಾಮಚಂದ್ರಯ್ಯನ ಮನೆಬಾಗಿಲ ಸದ್ದು. ಅನಂತರ ಅದರೆದುರು
ಮನೆ. ಅಷ್ಟರಲ್ಲಿ ನಾರಾಯಣನ ಗಡಿಯಾರದ ಅಲಾರಂ...
ನಾರಾಯಣಿಯ ಗಂಡ ಬೇಗನೆದ್ದ. ದೀಪ ಹಚ್ಚಲಿಲ್ಲ. ಕತ್ತಲೆಯಲ್ಲೆ ಪಾತ್ರೆ