ಪುಟ:Chirasmarane-Niranjana.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೨೬೬ ಚಿರಸ್ಮರಣೆ
ಅಲ್ಲೇ ಇದ್ದ ಪಹರೆಯವನು ಗಟ್ಟಿಯಾಗಿ ಹೇಳಿದ:
"ಹೊತ್ತಾಯ್ತು.ಹೊರಡಿ!"
ಆ ಸೂಚನೆ ಕೇಳಿ, ಎಲ್ಲರ ಕಸಿವಿಸಿಯೂ ಹೆಚ್ಚಿತು. ಆವರೆಗಿನ ಗಾಂಭೀರ್‍ಯ‍ವೆಲ್ಲ

ಕರಗಿ ಜಾನಕಿಯ ಕತ್ತಿನ ಸೆರೆಗಳು ಬಿಗಿದು ಬಂದವು.ತುಟಿಗಳು ಕಂಪಿಸಿದುವು.

ಅಪ್ಪುವೆಂದ
"ಪಕ್ಕದ ಕೊಠಡೀಲೇ ಚಿರುಕಂಡ ಇದ್ದಾನಮ್ಮಾ. ನಾವು ಚಿಕ್ಕೋರಾಗಿದ್ದಾಗ

ನೀನು ನೇಂದ್ರ ಬಾಳೆಹಣ್ಣು ಕೊಟ್ಟಿದ್ದನ್ನ ಯಾವಾಗಲೂ ನೆನಸ್ಕೊಳ್ತಾನೆ. ಮಾತಾಡಿಸಿ
ಹೋಗಮ್ಮಾ."
ತಾಯಿಯೂ ತಂದೆಯೂ ಚಿರುಕಂಡನತ್ತ ಚಲಿಸಿದರು.

ಅಪ್ಪು ಎರಡು ಕೈಗಳನ್ನೂ ಹೊರ ಹಾಕಿ ಜಾನಕಿಯ ತೋಳುಗಳನ್ನು
ಹಿಡಿದುಕೊಂಡ.
ಬಲು ಪ್ರಯಾಸಪಡುತ್ತ ಆಕೆ ಕೇಳಿದಳು:
"ಯಾವಾಗ?"
"ಗೊತ್ತಿಲ್ಲ ಜಾನೂ... ಭೇಟಿ ಪ್ರಾಯಶಃ ಇದೇ ಕೊನೇದು."
"ಅಯ್ಯೋ!"
"ಅಳಬೇಡ ಜಾನೂ."
ಆಕೆಯ ಕೈಗಳನ್ನು ಬಿಟ್ಟು ಮಗುವಿನ ಮುಖವನ್ನು ಬರಸೆಳೆದು ಅಪ್ಪು

ಮುದ್ದಿಸಿದ.

"ಮಗೂನ ನೋಡ್ಕೊ ಜಾನೂ."
"ಹೂಂ...."
ಹೇಳಬೇಕೆಂದಿದ್ದ ಒಂದು ವಿಷಯವನ್ನು ಹೇಳಲಾಗದೆ ಸಂಕಟಪಡುತ್ತ
ಅಪ್ಪುವೆಂದ:
"ಒಂದು ವಿಷಯ ಜಾನೂ__"
ಪಹರೆಯವನ ಸ್ವರ ಮತ್ತೂ ಜೋರಾಗಿ ಕೇಳಿಸಿತು:
"ಹೊರಡ್ರಿ. ಹೊತ್ತಾಯ್ತು!ಬೇರೆಯವರ ಹತ್ತಿರ ಯಾಕ್ರಿ ಮಾತಾಡ್ತೀರಾ
ಅಲ್ಲಿ?"
ಜಾನಕಿಯೆಂದಳು:
"ಹೇಳಿ_ಹೇಳಿ!"
"ನೀನು ಮುಂದೆ ಬೇರೆ ಯಾರನ್ನಾದರೂ_"