ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹನ್ನೊಂದನೆಯ ಅಧ್ಯಾಯ.

ಶ್ರೀ ಶ್ರೀರಾಮಕೃಷ್ಣ ಪರಮಹಂಸರ
ಗುರುಭಾವ.

ಅವಜಾನ೦ತಿಮಾಂ ಮೂಢಾ ಮಾನುಷೀಂತನು ಮಾಶ್ರಿತಂ |
ಪರ೦ಭಾವ ಮಜಾನ೦ತೋ ಮನಭೂತ ಮಹೇಶ್ವರಂ ||
ಗೀತಾ ೯-೧೧.

ಹೂ ಅರಳಿತು. ಅರಳಿ ಮಕರಂದದಿಂದ ತುಂಬಿ ತುಳುಕಾಡುತ್ತದುಂಬಿಗಳ ಆಗಮನವನ್ನು ಎದುರುನೋಡುತ್ತ ಕಾದುಕೊಂಡುಕುಳಿತಿದು ಅವು ಬಂದಹಾಗೆಲ್ಲ ವಿಶ್ವಾಸದಿಂದ ಬರಮಾಡಿಕೊಂಡು,ತಾಯಿಯ ಮಕ್ಕಳನ್ನು ಆದರಿಸುವಂತೆ ಅವುಗಳಿಗೆ ಮಕರಂದವನ್ನು ಊಡಿ ತೃಪ್ತಿಗೊಳಿಸಿತು. ಅವೂ ಮಕರಂದಪಾನಮಾಡಿಆನ೦ದದಿ೦ದ ಝೇಂಕರಿಸುತ್ತ ನಾನಾ ಕಡೆಗೆ ಹಾರಿಹೋಗಿ ಆಮಧುಮಾಹಾತ್ಮೆಯನ್ನು ವಿವರಿಸಿದುವು.

ಹೂ ಎಷ್ಟು ದೊಡ್ಡದಾದರೆ ಅರಳುವುದಕ್ಕೆ ಅಷ್ಟು ಹೆಚ್ಚುಕಾಲಬೇಕು. ಆದ್ದರಿಂದ ರಾಮಕೃಷ್ಣ ಮಹಾಕುಸುಮವು ಚೆನ್ನಾಗಿಅರಳುವುದಕ್ಕೆ ಹನ್ನೆರಡು ವರ್ಷಕಾಲ ಹಿಡಿಯಿತು. ಈಗ ಅರಳಿ,ಕಳಿತ ಆ ಕುಸುಮವು ಹೊರಲಾರದಷ್ಟು, ಹಿಡಿಸಲಾರದಷ್ಟು ಜ್ಞಾನಮಕರಂದವು, ಅದರಲ್ಲಿ ಶೇಖರಿಸಲ್ಪಟ್ಟಿದ್ದಿತು. ಶಿಷ್ಯ ಭೃಂಗಗಳೂವಾಸನೆಯನ್ನು ಹಿಡಿದು ಒಂದೊಂದಾಗಿ, ನಾಲ್ಕುನಾಲ್ಕಾಗಿ ಗುಂಪುಗುಂಪಾಗಿ ಬರಲು ಮೊದಲುಮಾಡಿದುವು. ಸ್ತನ್ಯವುಸೇರಿ ಅದನ್ನುಇನ್ನೂ ಶಿಶುವು ಕುಡಿಯದೇ ಇದ್ದದ್ದರಿಂದ ಉತ್ಪನ್ನವಾಗುವ ಒಂದು