ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂಬತ್ತನೆಯ ಅಧ್ಯಾಯ.

ಕಾಮಾರಪುಕುರಕ್ಕೆ ಹೋಗಿ ಬಂದಿದ್ದು; ತೀರ್ಥಯಾತ್ರೆ.

ಆರುತಿಂಗಳಕಾಲ ಸರಿಯಾದ ಅನ್ನಾಹಾರಗಳಿಲ್ಲದೆ ನಿರ್ವಿಕಲ್ಪ ಸಮಾಧಿಯಲ್ಲಿ ಇದ್ದದ್ದರಿಂದಲೋ ಏನೋ ಪರಮಹಂಸರಿಗೆ ಈ ಸಮಯದಲ್ಲಿ ಒಂದು ಭಯಂಕರವಾದ ಹೊಟ್ಟೆಯನೋವು ಪ್ರಾಪ್ತ ವಾಯಿತು. ಏನೇನೋ ಚಿಕಿತ್ಸೆ ಮಾಡಿದರು. ರೋಗವು ಯಾವು ದಕ್ಕೂ ಜಗ್ಗದೆ ಸುಮಾರು ಆರು ತಿಂಗಳ ಕಾಲ ಅದನ್ನು ಅನುಭವಿಸ ಬೇಕಾಯಿತು. ಈಗ ಸ್ವಲ್ಪ ಶಮನವಾಯಿತು. ಮನಸ್ಸು ಭಾವಮುಖದಲ್ಲಿ ದ್ವ್ಯೆತಾದ್ವೆತ ಭೂಮಿಯಲ್ಲಿರುವುದಕ್ಕೆ ಅಭ್ಯಾಸವಾ ಗುತ್ತ ಬಂತು. ಆದರೆ ದೇಹಸ್ಥಿತಿ ಮಾತ್ರ ಮೊದಲಿನಂತೆ ಇರಲಿಲ್ಲ. ಮಳೆಗಾಲ ಬಂದು ಗಂಗಾನದಿಯ ನೀರೆಲ್ಲ ಕದಡಿಹೋಗಿ ಆ ನೀರನ್ನು ಕುಡಿದರೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಳ್ಳ ಬಹು ದೆಂಬ ಹೆದರಿಕೆಯಾಯಿತು. ಆದ್ದರಿಂದ 1867 ನೇ ಇಸವಿಯಲ್ಲಿ ಇನ್ನೂ ವರ್ಷಾಕಾಲ ಹುಟ್ಟುವುದಕ್ಕೆ ಸ್ವಲ್ಪ ಮುಂಚೆಯೇ ಪರಮ ಹಂಸರು ಜೊತೆಯಲ್ಲಿ ಹೃದಯನನ್ನೂ ಭೈರವಿ ಬ್ರಾಹ್ಮಣಿ[೧]ಯನ್ನೂ ಕರೆದುಕೊಂಡು ಕಾಮಾರಪುಕುರಕ್ಕೆ ಹೋದರು.

  1. ಭೈರವಿಬ್ರಾಹ್ಮಣಿಯು ಪರಮಹಂಸರನ್ನು ಇನ್ನೂ ಬಿಟ್ಟು ಹೋ ಗಿರಲಿಲ್ಲ ವೇದಾಂತ ಸಾಧನೆಯ ಕಾಲದಲ್ಲಿಯೂ ಆಕೆ ದಕ್ಷಿಣೇಶ್ವರ ದಲ್ಲಿಯೇ ಇದ್ದಳು; ಆದರೆ ವೇದಾಂತ ಮಾರ್ಗವು ಶುಷ್ಕಮಾರ್ಗ ವೆಂದೂ ಅದನ್ನು ಅಭ್ಯಾಸ ಮಾಡಲು ತೋತಾಪುರಿಯ ಹತ್ತಿರಕ್ಕೆ ಹೋಗಕೂಡದೆಂದೂ ಪರಮಹಂಸರಿಗೆ ಹೇಳುತ್ತಿದ್ದಳು. ಅವರು ಶ್ರೀ ಶಾರದಾ ದೇವಿಗೆ ಶ್ರದ್ಧೆ ವಹಿಸಿ ಶಿಕ್ಷಣವನ್ನು ಕೊಡುತ್ತಿದ್ದರೆ ಅದನ್ನು ಕಂಡು ಅವರ ಬ್ರಹ್ಮಚರ್ಯದಲ್ಲಿ ಸಂಶಯ ಹುಟ್ಟಿತಂತೆ. ಇದು ತನ್ನ ದೋಷವೆ೦ದು ಕೆಲವು ದಿನದ ಮೇಲೆ ಬ್ರಾಹ್ಮಣಿಯ ಮನಸ್ಸಿಗೆ ಬಂದು ಅವರ ಕ್ಷಮಾಪಣೆಯನ್ನು ಕೇಳಿಕೊಂಡಳು. ಮತ್ತು ಪರಮಹಂಸರ ಅನುಗ್ರಹದಿಂದ ವೇದಾ೦ತ ಮಾರ್ಗದ ಮೇಲಿದ್ದ ದುರಭಿಪ್ರಾಯವನ್ನು ಬಿಟ್ಟು ಎಲ್ಲಾ ಮಾರ್ಗಗಳ ಲಕ್ಷವೂ ಒ೦ದೇ ಎಂಬ ಅನುಭವವನ್ನು ತ೦ದುಕೊಳ್ಳಲು ತಪಸ್ಸು ಮಾಡುವುದಕ್ಕಾಗಿ ಕಾಶಿಗೆ ಹೊರಟು ಹೋದಳು. ಅ೦ತು ಆಕೆಯು ದಕ್ಷಿಣೇಶ್ವರದಲ್ಲಿ ಸುಮಾರು ಆರು ವರ್ಷವಿದ್ದಳು.