ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೭೫

ವಾದ ಕಲಗಾನ, ಎಲ್ಲದರ ಮೇಲೂ ಇರುವ ಸುನೀಲವಾದ ಅ೦ತರಿಕ್ಷ, ಮತ್ತು ಅದರ ಮಧ್ಯದಲ್ಲಿ ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುವ ಮೇಘರಾಶಿಯ ಮಾಯಾರಾಜ್ಯ ಮುಂತಾದ ಸೃಷ್ಟಿ ನೌಂ ದರ್ಯ ವಿಶೇಷಗಳು ಅವನನ್ನು ಭಾವರಾಜ್ಯದಲ್ಲಿ ಎಲ್ಲಿಗೋ ತೆಗೆದು ಕೊಂಡು ಹೋಗಿ ಬಿಡುತ್ತಿದ್ದವು. ಮುಂದೆ ಹೇಳುವ ವೃತ್ತಾಂತವೂ ಅವನ ಇಂಥ “ಭಾವಸೃಸನತ್ತೆ" ಯಿಂದಲೇ ನಡೆದದ್ದು. ಒಂದು ದಿನ ಮೈದಾನದಲ್ಲಿ ಓಡಾಡುತ್ತಿರುವಾಗ ಗದಾಧರನು ಶುಭ್ರನಾದ ರೆಕ್ಕೆಗಳನ್ನು ಬಿಚ್ಚಿ ನಿರಾತಂಕವಾಗಿ ಅಂತರಿಕ್ಷದಲ್ಲಿ ಹಾರಾಡುತ್ತಿದ ಕೆಲವು ಸುಂದರವಾದ ಒಲಾಕಾ ಪಕ್ಷಿಗಳನ್ನು ನೋಡಿ ಆನಂದಲ್ಲಿ ತನ್ಮಯನಾಗಿಹೋದನು. ದೇಹದ ಮೇಲಣ ಪ್ರಜ್ಞೆಯೇ ತಪ್ಪಿ ಕೆಳಗೆ ಬೀಳಲು ಜೊತೆಯಲ್ಲಿದ್ದ ಹುಡುಗರು ಅವನನ್ನು ಹೊತ್ತು ಕೊಂಡು ಹೋಗಿ ಅವನ ತಾಯಿತಂದೆಗಳಿಗೆ ಈ ವರ್ತಮಾನವನ್ನು ತಿಳಿಸಿದರು. ಖುದಿರಾಮನೂ ಚಂದ್ರಾದೇವಿಯೂ ಇದನ್ನು ಕೇಳಿ ವಿಧವಿಧವಾಗಿ ಚಿಂತಿಸಿ ಕೊನೆಗೆ ನೂರ್ಭೆಹೋಗಿರಬೇಕೆಂದು ನಿಶ್ಚಯಮಾಡಿ ಅದಕ್ಕೆ ತಕ್ಕ ಔಷಧವನ್ನು ಕೊಡಿಸಿದ್ದಲ್ಲದೆ ಶಾ೦ತಿ ಜಸ ಮುಂತಾದ್ದನ್ನು ಮಾಡಿಸಿದರು. ಗದಾಧರನು ಮಾತ್ರ ಈ ವಿಷಯ ವನ್ನು ಆಗಾಗ್ಗೆ ನೆನೆಸಿಕೊಂಡು ತನ್ನ ಮನಸ್ಸು ಆಗ ಒಂದು ವಿಚಿತ್ರವಾದ ಭಾವದಲ್ಲಿ ಲೀನವಾಗಿಹೋಗಿತ್ತೆಂದೂ ತಾನು ಹೊರಗಿನ ನದಾರ್ಥಗಳನ್ನು ನೋಡುತ್ತಿರಲಿಲ್ಲದಿದ್ದರೂ ಒಳಗೆ ಪ್ರಜ್ಞೆ ಇತ್ತೆಂದೂ ಒಂದು ವಿಧವಾದ ಅಪೂರ್ವವಾದ ಆನಂದಉಂಟಾಗಿತ್ತೆಂದೂ ಹೇಳುತ್ತಿದ್ದನು.

ಇಷ್ಟು ಹೊತ್ತಿಗೆ ಗದಾಧರಸಿಗೆ ಆರುವರ್ಷತುಂಬಿ ಏಳನೆಯ ವರ್ಷ ನಡೆಯುತ್ತಿತ್ತು. ರಾಮಚ೦ದ್ರನು ಸೋದರಮಾವನಾದ ಖುದಿರಾಮನನ್ನು ದುರ್ಗೋತ್ಸವಕ್ಕೆ (ನವರಾತ್ರಿಯಪೂಜೆ) ಬರ ಬೇಕೆಂದು ಹೇಳಿಕಳುಹಿಸಿದನು. ಪ್ರತಿವರ್ಷವೂ ಖುದಿರಾಮನು ಅಲ್ಲಿಗೆ ಹೋಗಿಬರುವ ಸದ್ಧತಿಯತ್ತು. ಈಸಾರಿ ಆತನಿಗೆ ದೇಹ