ಪುಟ:Daaminii.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

8(b)

ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ.

'ಅಮ್ಮಾ” ಎಂದು ಅಳುವುದಕ್ಕೆ ಅಭ್ಯಾಸವಾಯಿತು. ದಾಮಿನಿಯು ದಿಂಬಿನಲ್ಲಿ ಮುಖವನ್ನಿಟ್ಟುಕೊಂಡು, ಅತ್ತು ಬಿಟ್ಟಳು.

ತೃತೀಯ ಪರಿಚ್ಛೇದ

ಆವ ಗ್ರಾಮದಲ್ಲಿ ರಮೇಶನು ವಾಸವಾಗಿದ್ದನೋ ಅದರ ತೆಂಕಣ ದಿಕ್ಕಿನಲ್ಲಿ, ನದಿಯ ತೀರದಲ್ಲಿ ಮುರಿದುಹೋದ ಮಹಡಿಯ ಮನೆಯೊಂದ್ದಿತು. ವದಂತಿ ಯೂ ಇದ್ದಿತು; ಏನೆಂದರೆ, ಆರೋ ರಾಜನೊಬ್ಬನು ಎಷ್ಟೋ ಮೊದಲು ತನ್ನ ತಾಯ ಗಂಗಾವಾಸದ ನಿಮಿತ್ತದಿಂದ ಆ ಭವ್ಯಭವನವನ್ನು ಕಟ್ಟಿಸಿದನು; ಆದರೆ, ದೈವವಶಾತ್ತಾಗಿಯೊ ನೋ - ಅದರಲ್ಲಿಯೇ ಒಂದು ಸ್ನೇಹತ್ಯೆಯುಂಟಾಗಲು, ರಾಜಮಾತೃವು ಅದನ್ನು ಪರಿತ್ಯಾಗಮಾಡಿದಳು; ಅಂದಿನಿಂದ, ಆರೂ ಅದರಲ್ಲಿ ವಾಸಮಾಡಿದುದಿಲ್ಲ
. ಅತಏವ, ಆ ಮಂದಿರವ ಪ್ರೇತಮಂದಿರವೆಂದು ಹೆಸರ್ಗೊಂಡಿತು. ಭೌತಿ
ಕಾಪವಾದವಂತಾದುದರಿಂದ, ಕೊನೆಕೊನೆಗೆ ಹಗಲುಹೊತ್ತಿನಲ್ಲಿ ಯೂ ಆಫ್ ಅದರ ಹತ್ತಿರದಿಂದ ಹಾಯ್ದು ಹೋಗುವುದಕ್ಕೆ ಕೂಡ ಸಾಹಸಪಡುತ್ತಿರಲಿಲ್ಲ.
ಉನ್ಮಾದಿನಿ ನೋಡಿದಳು, ವಸತಿಯಿಲ್ಲಗ ಆ ಭಯಾನಕವಾದ ಭಗ್ನ ಮಂದಿ
ರವೇ ತನ್ನ ವಾಸಕ್ಕೆ ಯೋಗ್ಯವೆಂದುಕೊಂಡಳು. ಹಾಗೆಯೆ, ಅದರಲ್ಲಿ ಗೋಷ್ಯ ವಾಗಿ ವಾಸಮಾಡಲಾರಂಭಿಸಿದಳು. ದಾಮಿನಿಯನ್ನು ನೋಡಿದ ಮೊದಲು, ಎಷ್ಟೋ, ಮನಸ್ಸು ಸುಸ್ಥವಾಗಿದ್ದಿತಾದರೂ, ಒಂದು ಬಾರಿಗೆ ಹೇಗಾದರೂ ಅವ ಳನ್ನು ಕದ್ದುಕೊಂಡು ಬಂದು, ರಹಸ್ಯವಾದ ಈ ಸ್ಥಳದಲ್ಲಿಟ್ಟು ತಾನೊಬ್ಬಳೆ ಮನ ದಣಿಯೆ ತನ್ನ ಆ ದಾಮಿನಿಯನ್ನು ನೋಡಿಬಿಡುವೆನೆಂದು ಅವಳನ್ನು ಒಮ್ಮೆಯೊಮ್ಮೆ ತನ್ನ ಮನಸ್ಸಿನಲ್ಲಿಯೇ ಸ್ಥಿರವಾಡುವಳು. ಆದರೆ, ಉತ್ತರಕ್ಷಣದಲ್ಲಿಯೆ, ಆ ಕಾ ರ್ಯದ ಕರ್ತವ್ಯತೆಯನ್ನು ತಿಳಿದು, ಅದನ್ನು ತನ್ನ ಹೃದಯದಿಂದ ದೂರಮಾಡಿ ಬಿಡುವಳು ಮನಸ್ಸಿನ ಚಾಂಚಲ ಕಾ ವಿಶೇಷವಾಗಿ ಅಲ್ಲಿಗೆ ಹೋಗಿ ಬಂದು ಮಾಡಿದರೆ, ಅಳಿಯನಿಗೆ ಸಂದೇಹವುಂಟಾಗುವುದೆಂದೂ, ಕಳಂಕವು ಸಂಭವಿಸುವು ದೆಂದೂ ಭಯದಿಂದ, ಪುನಃ ಆ ಕಡೆಗೆ ಹೋಗಲೇ ಇಲ್ಲ. ಭಗ್ನಮಂದಿರದಲ್ಲಿ ಒಬ್ಬ ಛೇ ಕುಳಿತು ತನ್ನಷ್ಟಕ್ಕೆ ತಾನೇ ದಾಮಿನಿಯನ್ನು ಆದರಮಾಡುವಳು. ದಾಮಿನಿ ಯನ್ನು ಆವ ಬಗೆಯಾಗಿ ರಮೇಶನು ಆದರಮಾಡುವನೋ, ಆದರ ವಿಚಾರವನ್ನು ಕುಳಿತಲ್ಲಿಯೆ ಭಾವಿಸಿಕೊಳ್ಳುವಳು.