ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬of ಮಾಡಿದ್ದು ಸ್ಟೋ ಮಹಾರಾಯ. ಏನು ಅರಿಕೆ ಮಾಡುವುದಕ್ಕೂ ನಮಗೆ ಶಕ್ತಿ ಸಾಲದು. ಆದರೂ ತಾವು ಎರಡು ಮಾತನ್ನು ನಡೆಸಿಕೊಡಬೇಕು. ಈ ಉಡುಗರೆ ಮೊದಲದ್ದನ್ನು ನಾವು ಹಿಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಬ್ರಾಹ್ಮಣರ ವಿನಿಯೋಗಕ್ಕಾಗಿ ಎಂದು ಉದ್ದೇಶಮಾಡಿ ತಂದ ಕಾರಣ ಅದು ಬ್ರಾಹ್ಮಣರಿಗೆ ದತ್ತ ವಾದಂತಾಯಿತು. ಇದಕ್ಕೆ ವಿನಿಯೋಗ ಹೇಗೆ ಆಗಬೇಕು ? ತಮ್ಮ ಅನುಜ್ಞೆಯಾದ ಹಾಗೆ ಅದನ್ನು ವಿನಿಯೋಗಿಸ ಬೇಕಾ ಗಿದೆ. ತಾವುಗಳು ವಸಿಷ್ಟ ವಾಮದೇವರಂತೆ ದಯಮಾಡಿಸಿ ನಿಜವಾಗಿಯೂ ಪ್ರಾಣದಾನವನ್ನು ಮಾಡಿ ನಮ್ಮನ್ನು ಉದ್ಯಾ ರಮಡಿದಿರಿ. ಈ ಭಾಗದಲ್ಲಿ ನಮ್ಮ ವಂಶವಿರುವವರೆಗೂ ತಮ್ಮ ಪ್ರತಿಮೆಯನ್ನಿಟ್ಟು ಪೂಮಾಶತಕ್ಕದ್ದಾಗಿದೆ. ಈ ದೇಹವನ್ನೆ ತನಗೆ ತೆಯಿದು ಕೊಟ್ಟರೂ ಸಾಲದು. ಇ೦ ಧವರಲ್ಲಿ ನಾವು ಹೆಚ್ಚಾಗಿ ಅರಿಕೇ ಮಾಡಲಾರೆವು, ಎಂದರು. ಆಗ ಭವಯು- ಗಿರಿಯಂಣ, ಅವರು ಮಾಡಿದ ಮರಾ ದೆಯನ್ನು ನೀನು ಸ್ವೀಕರಿಸು, ಅವರ ಮನೆಗೆ ಬಂದು ಅವ ರಿಗೆ ಅಸಮಾಧಾನವನ್ನು ಯಾಕೆ ಉಂಟುಮಾಡಬೇಕು ? ಎಂ ದನು. ಅದಕ್ಕೆ ಗಿರಿಯಂಣನು ಭಟಜಿಯ ಮಾತಿನಂತೆ ಒಂದು ಧೋತ್ರವನ್ನು ತೆಗೆದುಕೊಂಡನು. ಪುನಃ ಪಶುಪತಿ ಸಾಂಬಶಾಸ್ಮಿಯು ನಾವು ಅರಿಕೆ ಮಾಡಿಕೊಂಡಿದ್ದ ಒಂದು ಅಂಶವೇನೊ ಪೂರ್ತಿಯಾಗಿ ಚಿತ್ರಕ್ಕೆ ಬಾರದೇ ಹೋಯಿತು. ತಾವೇನೋ ಮಹಾತ್ಮರು, ವಿಶೇಷವಾಗಿ ನಿಸ್ಸಹರು, ತಾವು ಮಾಡಿದ ಪ್ರಾಣದಾನಕ್ಕೆ ನನ್ನ ಕೃತಜ್ಞತೆಯನ್ನು ತೋರಿಸಲು ಆಸ್ಪದವನ್ನು ಕೊಡದಿದ್ದರೆ ನನ್ನನ್ನು ಕೃತ