ಮಿತ್ರ ದುಖಃ/iv

ವಿಕಿಸೋರ್ಸ್ದಿಂದ

ಈ ಪ್ರಕಾರ ಆರುಣನ ಭಾಷಣವು ನಡೆದಿರಲು, ಸೂ ರ್ಯನಿಗೆ ತುಸು ತುಸು ಜಾಗ್ರತೆಯಾಗಹತ್ತಿತ್ತು; ಅರುಣನು ನಡೆಸಿದ ಜಲವರ್ಣನೆಯು ಕೇಳಿಸುತ್ತಿದ ಬಳಿಕಂತ ಅವನು ಸಂಪೂರ್ಣವಾಗಿ ಎಚ್ಚತ್ರನು. ಸೂರ್ಯನು ಹೀಗೆ ಬಾಗ್ರತ ನಾದದ್ದು ಆರುಣನಿಗೆ ತಿಳಿಯಲು ಅವನು ತನ್ನ ಭಾಷಣವನ್ನು ಅಲ್ಲಿಗೇ ನಿಲ್ಲಿಸಿಬಿಟ್ಟನು.

iv

ಬಳಿಕ ಸೂರ್ಯನು ಪನಃ ಚಂದ್ರನನ್ನು ಕುರಿತು, ------ ಚಂದ್ರಮಾ, ಅರುಣನು ಇದೀಗ ವರ್ಣಿಸಿದ ಪ್ರಸಂಗವು ಪ್ರ ತ್ಯಕ್ಷ ಒದಗಿರುವ ಕಾಲಕ್ಕೆ ಅಪ್ಪಿ ತಪ್ಪಿ ನಮ್ಮ ಹಾದಿಯಲ್ಲಿ ತಡಹಾಯು, ಆ ಪೀಫರ ಸಮಾಗಮದಿಂದ ನನ್ನ ರಥದ ಕುದುರೆಗಳು ಅದರ ಜಲ ಸಂಯದಲ್ಲಿ ನುಸಿದು, ವಿಶೇಷ ವಾದ ಆನಂದ ಸಾಮ್ರಾಜ್ಯದಲ್ಲಿ ಅಕಸ್ಮಾತ್ತಾಗಿ ಪ್ರವೇಶಿಸಿ ದಾಗ-ನನ್ನ ಮನಸ್ಸು ಆ ಸುಖಸಾಮ್ರಾಜ್ಯದ ಪಾಲುಗಾ ರಾಗಕ್ಕೆ ಹಾತೊರೆಯುತ್ತದೆ; ಹಾಗು ಆ ಜಲಸಮುದ್ಧ ಯದಲ್ಲಿಯ ಒಂದು ಕಣವಾದರೂ ನನಗೆ ಲಭಿಸೀತೇನೆಂಬ ಉತ್ಕಟೇಚ್ಛೆಯ ಲೋಭದಿಂದ ನಾನು ನನ್ನ ಕರಗಳನ್ನು ಮು೦ ದಕ್ಕೆ ಚಾಚುತ್ತೇನೆ; ಆದರೆ ಆಗ ನನ್ನ ಅಖಂಡ ದುರ್ದೈ ವವು ದೂತ್ತೆಂದು ನನ್ನ ಎದುರಿಗೆ ಬಂದು ನಿಲ್ಲುವದರಿಂದ ನಾನು ನನ್ನ ಕೈಗಳನ್ನು ಮುಂದೆ ಚಾಚುವೆನೋ ಇಲ್ಲವೋ, ಇಷ್ಟರಲ್ಲಿಯೇ ಆ ತುಪಾರಗಳು, ಅದೇಕೆ ಆ ಸಂಪೂರ್ಣ ಜಲ ಸಮುಚ್ಚಯವು ಹೇಳಹೆಸರಿಲ್ಲದಾಗುವದು! ಆಗ ನನ್ನಿ ಕುದುರೆಗಳು ತಮ್ಮ ಗೋಣುಗಳನ್ನು ಹಿಂದಕ್ಕೆ ಬೊಗ್ಗಿಸಿ, ನನ್ನನ್ನು ಒಳ್ಳೇ ಸಿಟ್ಟಿನಿಂದ ನೋಡತೊಡಗುತ್ತವೆ. ಈ ಪ್ರಕಾ ರದ ಅನುಭವವು ನನಗೆ ಎಷ್ಟೋ ಸಾರೆ ಬಂದಿದೆ. ಆದರಿಂದ ನನಗೆ ಆ ಸುಖವು ಲಭಿಸುವ ಯೋಗವೇ ಇಲ್ಲದಿದ್ದರೂ ನನ್ನ ಕುದುರೆಗಳಿಗಾದರೂ ಆ ಶೀತ ಜಲಸ್ವರ್ಶದ ಸುಖವು ಲಭಿಸ ಲೆಂದು ನನ್ನ ರಥವನ್ನು ಮೇಘಗಳು ತಡೆಹಾಯುವ ಆ ಪ್ರಸಂ ಗಳಲ್ಲಿ ನಾನು ಬೇಕಂತಲೇ ಲಕ್ಷವಿಲ್ಲದವನಂತೆ ನಟಿಸುತ್ತಿರು ತೇನೆ.”

"ಆದರೆ ಚಂದ್ರಾ, ಇದುಂದ ನನ್ನ ಸಂತಾಪವು ಕಡಿಮೆ

ಯಾಗುತ್ತದೆಂದು ಮಾತ್ರ ತಿಳಿಯುವ ಹಾಗಿಲ್ಲ! ನನಗೆ' ಶೀತ ಜಲಸ್ಪರ್ಶದ ಸುಖದ ಅನುಭವವು ಇಲ್ಲವೆಂಬದಿಷ್ಟೇ ಅಲ್ಲ, ಸಂತಾಪ ಪರಿಹಾರಕ ಬೇರೆ ಯಾವ ಸಾಧನವೂ ನನಗೆ ಈ ವರೆಗೆ ಉಪಲಬ್ದವಾಗಿರುವದಿಲ್ಲ. ಭೂಮಂಡಲದ ಜನರಿಗೆ ಮಧ್ಯಾಹ್ನ ಹೊತ್ತಿನಲ್ಲಿ ಬಹಳ ಸೆಕೆಯೆನಿಸಿದರೆ, ಅವರು ಯಾವ ದೊಂದು ಕತ್ತಲೆ ಕೋಣೆಯಲ್ಲಿ ಹೋಗಿ ಕುಳಿತು ಆ ಸೆಕೆಯ ತಾಪವು ತಮಗಾಗದಂತೆ ಮಾಡಿಕೊಳ್ಳುತ್ತಾರೆ; ಮತ್ತು ಆ ಸ್ಥಲಾಂತರದ ತೀರ ಸುಲಭ ಉಪಾಯದಿಂದಲೇ ಅವರಿಗೆ ಎಷ್ಟೊ ಆರಾಮವೆನಿಸುತ್ತದೆ. ಆದರೆ ಮಿತ್ರಾ, ಹಿರಣ್ಯ ಗರ್ಭನೆಂಬ ಹೆಸರಿನಿಂದ ಪ್ರಖ್ಯಾತನಾಗಿರುವ ಈ ನಿನ್ನ ಪ್ರಿಯ ದೀನ ಮಿತ್ರನಿಗೆ ಈ ಜಗತ್ತಿನಲ್ಲಿ ಯಾವದೊಂದು ಕತ್ತಲೆಕೋ ಣೆಯು ಸಹ ಸಿಗುವದು ಶಕ್ಯವಿಲ್ಲ. ನನ್ನ ಮೈಯಲ್ಲಿ ಉರಿ ಉರಿಯಾಗಹತ್ತಿದಾಗ ನಾನು---- "ಎಲ್ಲಿಯಾದರೊಂದು ಕತ್ತಲೆ ಕೋಣೆಯಿದ್ದರೆ, ಯಾರಾದರೂ ತೋರಿಸುವಿರಾ ಎಂದು ವಿಹ್ನ ಲನಾಗಿ ಒದು ಕೇಳಿಕೊಂಡಾಗ ಯಾವನೊಬ್ಬ ಹುಂಬನು----

“ಅಕೋ, ಅಲ್ಲಿ ಆ ಪರ್ವತಗಳ ದರಿಗಳಲ್ಲಿ ಹಾಗು ಆ ವಿಶಾ ಲವಾದ ವೃಕ್ಷಗಳ ಹೊದರುಗಳಲ್ಲಿ ಬೇಕಾದಷ್ಟು ಕತ್ತಲು ಗವಿದದೆ ಎಂದು ಹೇಳುತ್ತಾನೆ! ಆದರೆ ಅವನು ತೋರಿ ಸಿದ ಆ ಪ್ರದೇಶಗಳ ಹತ್ತಿರ ಹೋಗಿ ನೋಡಲು, ನನಗೆ ಎಲ್ಲಿ
ಯೂ ಒಂದು ಕೂದಲೆಳೆಯಷ್ಟು ಕತ್ತಲು ಸಹ ಕಾಣಿಸುವ ಗಿಲ್ಲ! ಇದೆಂಧ ನನ್ನ ದುರ್ಭಾಗ್ಯವು? ಬೆಳಗಿನ ಜಾವದಲ್ಲಿ ಕು, ಅರುಣನು ಸಹದೂರದಲ್ಲಿ ಕತ್ತಲೆಯಿರುವದೆಂದು ನನಗೆ Vುತ್ತಿರುತ್ತಾನೆ. ಆಗ ಕತ್ತಲೆಯು ಮುಂದೆ ಮುಂದೆ ಓಡು ತಿರುತ್ತದೆ; ಮತ್ತು ಬೆನ್ನಟ್ಟಿ ಅದನ್ನು ಒಮ್ಮೆಯಾದರೂ ಹಿಡಿಯುವದಕ್ಕಾಗಿ ನನ್ನ ರಥವನ್ನು ಬಹಳ ಒತ್ತರದಿಂದ ಬಿಡಲಿಕ್ಕೆ ನಾನು ಆರುಣನಿಗೆ ಆಗಾಗ್ಗೆ ಸೂಚಿಸುತ್ತಿರುತ್ತೇನೆ. ಆದರೆ ಆ ಕತ್ತಲೆಯು ಇದು ವರೆಗೂ ನನ್ನ ಹಸ್ತಗತವಾಗಿ ದ್ದರೆ ಆಣೆ. ನನ್ನ ರಥದ ವೇಗದಷ್ಟು ಬೇರೆ ಯಾರ ವೇಗವೂ ಇಲ್ಲೆಂದು ನಾನು ಮನಸ್ಸಿನಲ್ಲಿ ಅಭಿಮಾನವನ್ನು ವಹಿಸಿರುತ್ತೇನೆ; ಆದರೆ ನನಗಿಂತಲೂ ಹೆಚ್ಚು ವೇಗದಿಂದ ಓಡುವ ಈ ಕತ್ತಲೆ ಯೊಂದು ಬಂದಿದೆ. ಕತ್ತಲೆಯು ನನ್ನ ಶತ್ರುವಿರುತ್ತದೆ; ಅಂತೇ ಅದು ನನ್ನ ಎಡಬಲಗಳಲ್ಲಿ ಸಹ ಸುಳಿಯುವದಿಲ್ಲ, ಎಂದು ಎಷ್ಟೋ ಜನರು ಅನ್ನುತ್ತಾರೆ. ಆದರೆ ನಾನಂತೂ ಅದನ್ನು ನನ್ನ ಪರಮ ಮಿತ್ರನೆಂದು ಭಾವಿಸುತ್ತೇನೆ. ಅದಕ್ಕೆ ಭೆಟ್ಟಿ ಯಾಗಬೇಕೆಂದು ನಾನು ಉತ್ಕಟೇಚ್ಛೆಯುಳ್ಳವನಾಗಿದ್ದೇನೆ. ಎಂದಾದರೊಮ್ಮೆ ಅದು ನನಗೆ ಗಂಟು ಬಿದ್ದರೆ, ವಿಶ್ರಾಂತಿ ಗಾಗಿ ಅದರ ಬಳಿಯಲ್ಲಿ ಯಾವದೊಂದು ಕತ್ತಲೆ ಕೋಣೆ ಯನ್ನಷ್ಟು ನನಗೋಸ್ಕರವಾಗಿ ಕೇಳಿಕೊಳ್ಳುವವನಿದ್ದೇನೆ. ಆದರೆ ಇದೆಲ್ಲ ಆ ಕಗ್ಗತ್ತಲೆಯು ನನಗೆ ಗಂಟು ಬಿದ್ದಾಗ ಮಾತ್ರ ಆಗತಕ್ಕ ವಿಚಾರವು. ನನಗಾಗದ ಯಾವನೊಬ್ಬನು ನನ್ನ ಸಂಬಂ ಧದ ಇಲ್ಲದ ಸುಳ್ಳು-ಸೊಡರುಗಳನ್ನು ಅದರ ಮನಸ್ಸಿನಲ್ಲಿ ತಂಬಿರುವಂತೆ ನನಗೆ ಕಾಣುತ್ತದೆ, ಮಿತ್ರಾ ಸುಧಾಕರಾ, ನಿನಗೆಂ ಧಾ ದರೂ ಆ ಕತ್ತಲೆಯು ಗಂಟು ಬಿದ್ದರೆ, ನೀನು ನನ್ನ ಮನ 'ನ ನಿಜವಾದ ಅಭಿಲಾಷೆಯನ್ನು ಅದಕ್ಕೆ ತಿಳಿಸಿ, ಒಮ್ಮೆ ನನ್ನ ಅದರ ಗಂಟು ಹಾಕಿಕೊಡು.”

ಸೂರ್ಯನ ಈ ಭಾಷಣವನ್ನು ಕೇಳಿ, ಚಂದ್ರನು ಮನ ಸ್ಸಿನಲ್ಲಿ ಅಸ್ಪುಟವಾಗಿ ಬಹಳ ಹೊತ್ತಿನ ವರೆಗೆ ನಕ್ಕನು. ಆದರೆ ಆ ನಗೆಯು ಕೊಂಚವೂ ಬೈಲಿಗೆ ಬೀಳದಂತೆ ಅವನು ಎಚ್ಚರಿಕೆ ಯನ್ನು ತಾಳಿದ್ದನು. ಯಾಕಂದರೆ, ಸೂರ್ಯನು ತನಗಿಂತ ಲು ಶ್ರೇಷ್ಠನ, ತನ್ನ ಪರಿಪೋಷಕನೂ ಆಗಿರುವದರಿಂದ ಅವನ ಅವಮಾನವಾಗಬಾರದೆಂದು ಅವನ ಸನ್ನಿಧಿಯಲ್ಲಿರುವ ವರೆಗಾದರೂ, ಅಂದರೆ ಅಮಾವಾಸ್ಯೆಯ ದಿವಸ ಸ್ವಲ್ಪವೂ ನಗಬಾರದೆಂದು ಚಂದ್ರನು ನಿಶ್ಚಯಿಸಿದ್ದನು; ಮತ್ತು ಅವನು ಆ ನಿಯಮವನ್ನು ಈ ವರೆಗೂ ತಪ್ಪದೆ ಪಾಲಿಸುತ್ತ ಬಂದಿರು ವನು. ಆದ್ದರಿಂದ ಮೇಲೆ ಹೇಳಿದಂತೆ ಚಂದ್ರನು ಸೂರ್ಯನ ಮಾತನ್ನು ಕೇಳಿ ಮನಸ್ಸಿನಲ್ಲಿ ಹೊಟ್ಟೆ ತುಂಬ ನಕ್ಕರೂ, ಆ ನಗೆಯು ಹೊರಗೆ ಸ್ವಲ್ಪವೂ ಕಾಣದಂತೆ ಎಚ್ಚರಪಟ್ಟಿದ್ದನು. ಬಳಿಕ ಅವನು ತನ್ನ ನಗೆಯನ್ನು ಅಲ್ಲಿಂದಲೇ ಬಚ್ಚಿಟ್ಟು ಸೂ ರ್ಯನೊಡನೆ ಕೆಲವು ಸುಖ-ಸಲ್ಲಾಪಗಳನ್ನಾಡಬೇಕೆಂದಿದ್ದನು. ಆದರೆ ಅಷ್ಟರಲ್ಲಿ ತನ್ನ ದುಃಖದ ಜ್ವಾಲೆಗಳನ್ನು ತಡೆಯಲಸ ಮರ್ಥನಾದ ಸೂರ್ಯನು ವ ಅತ್ತೆ ಮಾತಾಡಲುಪಕ್ರಮಿಸಿ ದನು:- "ಚಂದ್ರಾ ನನಗೆ ಸುಖವಿಲ್ಲ-ಸಮಧಾನವಿಲ್ಲ, ಗೆಳೆಯರೂ ಇಲ್ಲ, ಬೇಕಾದವರೂ ಇಲ್ಲ, ನಿದ್ದೆಯ ಇಲ್ಲ, ಶಾಂತತೆಯ ಇಲ್ಲ, ಶೀತಲವೂ ಇಲ್ಲ. ನೀರಿನ ತಂಪಿನಿಂದಾ ಗುವ ಸುಖವು, ಇಲ್ಲವೆ ಕತ್ತಲೆಯೊಳಗೆ ಆರಾಮಿಗಾಗಿ ಕುಳಿ ತರೆ ಆಗುವ ಸಮಾಧಾನವು ಹೇಗಿರುತ್ತದೆಂಬದು ನನಗೆ ಗೊ ಇಲ್ಲ. ಈ ದುಃಖದಿಂದ ನಾನುಹಗಲಿರುಳು ಒಂದೇ ಸವನೆ ಸುಟ್ಟು ಬೆಯ್ಯುತ್ತಿರುತ್ತೇನೆ. ನಾನು ಇಷ್ಟು ದುಃಖಪಡು ತಿದ್ದರೂ, ಸುಮ್ಮನೆ ಮಾತಾಡಿಸಲಿಕ್ಕೆಂದು ನನ್ನೆಡೆಗೆ ಯಾರೂ
ಹಣಿಕಿ ಸಹ ಹಾಕುವದಿಲ್ಲ. ಭೂಮಂಡಲದಲ್ಲಿ ಯಾವನಿಗಾದ ಹರೂ ತುಸ ದುಃಖವಾದರೆ, ಅವನ ಆಪ್ತರು, ಇಷ್ಟರು, ಬಂಧು-ಬಾಂಧವರು, ನೆರೆಹೊರೆಯವರು ಅವನನ್ನು ಮಾತಾಡಿ ಸಲಕ್ಕೆಂದು ತಿಂಗಳ ಗಟ್ಟಲೆ ಅವನ ಮನೆಗೆ ಬಂದು, ತೋರಿಕೆ ಯಲ್ಲಿಯೇ ಯಾಕಾಗಲೊಲ್ಲದು, ಅವನ ದುಃಖದ ಸಮಭಾಗಿಗ ೪ಾಗುತ್ತಾರೆ. ಆದರೆ ನನ್ನ ವಿಪರೀತ ಭೋಗದ ಮೂಲಕ ನನ್ನೆ ಡೆಗೆ ಯಾವನೂ ಒಂದು ಕ್ಷಣ ಹೊತ್ತಿನ ಮಟ್ಟಿಗೆ ಸಹ ಬರ ಲಿಕ್ಕೆ ಮನಸ್ಸು ಮಾಡುವದಿಲ್ಲ. ಇಲ್ಲೆನ್ನಲಿಕ್ಕೆ ಕೆಲವು ಜನ ಯಕ್ಷ-ಗಂಧರ್ವ-ಕಿನ್ನರ ದಂಪತಿಗಳು ತಮ್ಮ ವಿಮಾನಗ ಇನ್ನಾರೋಹಣ ಮಾಡಿ ಮೇಲೆ ಆಕಾಶದಲ್ಲಿ ಬರುತ್ತಿರುವದನ್ನು ನಾನು ಎಷ್ಟೋ ಸಾರೆ ನೋಡುತ್ತೇನೆ. ಅವರಲ್ಲಿಯ ಯಾವ ನೊಬ್ಬನು ನನ್ನ ಬಳಿಗೆ ಬಂದರೆ ಅವನೊಡನೆ ಕ್ಷೇಮಸಮಾ ಚಾರದ ನಾಲ್ಕು ಮಾತು-ಕಥೆಗಳನ್ನಾಡುವದರಲ್ಲಿ ಎಷ್ಟೋ ಮನೋರಂಜನವಾದೀತೆಂದು ಬಗೆದು, ನಾನು ಅವರ ಗತಿಯ ಕಡೆಗೆ ಟಕಮಕ ದೃಷ್ಟಿಯಿಂದ ನೋಡುತ್ತಿರುತ್ತೇನೆ; ಹಾಗು ಅವರ ಸ್ವಾಗತ ಮಾಡುವದಕ್ಕಾಗಿ ನಾನು ನನ್ನ ಸ್ಥಾನದಿಂದ ತುಸು ಕೆಳಗಿಳಿದು ಅವರ ಬಳಿಗೆ ಹೋಗಬೇಕೆಂದು ಸಹ ಪ್ರ ಯತ್ನ ಪಡುತ್ತಿರುತ್ತೇನೆ. ಆದರೆ ನಾನು ತಮ್ಮ ಕಡೆಗೆ ಬರುತ್ತೆ ನೆಂಬದು ಅವರಿಗೆ ತಿಳಿದ ಕೂಡಲೆ ಅವರು ದೂರಿಂದಲೇ ನನಗೆ ಶರಣುಹೊಡೆದು, ತಮ್ಮ ವಿಮಾನದ ಚುಕ್ಕಾಣಿಯನ್ನು ಕೆಳ ಗಡೆ ತಿರುಗಿಸಿ, ಹಿಮಾಲಯ ಪರ್ವತದೊಳಗಿನ ಬರ್ಫ ಮಯ ವಾದ ಗುಹೆಗಳಲ್ಲಿ ಪ್ರವೇಶಿಸಿ ಬಿಡುವರು. ಮಿತ್ರಾ, ಹಿಂದ ಕೈ ಒಬ್ಬಾನೊಬ್ಬ ಶಿಖಾಮಣಿಯು ಮೇಣದ ರೆಕ್ಕೆಗಳನ್ನು ಧರಿಸಿಕೊಂಡು ಆಕಾಶದಲ್ಲಿ ಉದ್ಘಾಣ ಮಾಡುತ್ತ ನನ್ನೆಡೆಗೆ ಬರಲಿಕ್ಕೆ ಹೊರಟಿದ್ದನಂತೆ; ಆದರೆ ನನ್ನ ಸಮೀಪಕ್ಕೆ ಬಂದ
ಬಂದ ಹಾಗೆ ಅವನ ಆ ಮೇಣದ ರೆಕ್ಕೆಗಳು ಕರಗಿ ನೀರಾಗಿ ಹೋಗಲು, ಆ ಬಡವನು ತನ್ನ ಇಚ್ಛೆಯ ವಿರುದ್ದವಾಗಿ ನೈಸ ರ್ಗಿಕ ಗುರುತ್ವಾಕರ್ಷಣದಿಂದ ಆ ಮಧ್ಯ ಪ್ರದೇಶದಿಂದಲೇ ಭೂಮಿಗೆ ಜಗ್ಗಲ್ಪಟ್ಟನು. ನನ್ನ ಮಿತ್ರರ ಹಾಗು ನನ್ನ ಸಮ ಗಮಕ್ಕೆ ಪ್ರತಿಬಂಧ ಮಾಡುವ ಗುರುತ್ವಾಕರ್ಷಣವೆಂಬ ಇದಾ ವ ಶತ್ರುವು ಹೊಸದಾಗಿ ಜನಿಸಿರುವದೋ ಯಾರಿಗೆ ಗೊತ್ತು? ಬ್ರಾಹ್ಮಣರೆಂಬುವವರು ನನ್ನ ಪರಮ ಭಕ್ತರಿರುತ್ತಾರೆಂದು ನಾನು ಕೇಳಿರುತ್ತೇನೆ; ಆದರೆ ಅವರು ಯಾವಾಗ ತಮ್ಮ ಉ ಪಾಸನಾ ಕಾರ್ಯವನ್ನು ಮಾಡುವರೋ ಆವಾಗ ತಮ್ಮ ಕೈ ಗಳನ್ನು ನನ್ನ ಕಡೆಗೆ ತೋರಿಸುವರು. ಅವರು ಅಫಲ್ಯ ಪ್ರದಾ ನದ ಮಿಷದಿಂದ ಬೊಗಸೆಯೊಳಗೆ ನೀರು ಹಿಡಿದಿದ್ದ ತಮ್ಮ ಕೈಗಳನ್ನು ನನ್ನ ಕಡೆಗೆ ಮಾಡುವದನ್ನು ನೋಡಿದರೆ, ನನ್ನ ಕಡೆಗೆ ಮಾಡಿದ ತಮ್ಮ ಹಸ್ತಗಳಿಗೆ ಆಕಸ್ಮಿಕವಾಗಿಯಾದರೂ ನನ್ನ ಉಷ್ಣತೆಯ ಬಾಧೆಯಾಗಿ ಅವು ಕಮರಿ ಹೋಗದಿರವದ ಕ್ಕಾಗಿಯೇ ಅವರು ತಮ್ಮ ಬೊಗಸೆಯಲ್ಲಿ ನೀರು ಹಿಡಿಯುತ್ತಿ ರಬಹುದೆಂದು ನನಗನಿಸುತ್ತದೆ. ತಾವರೆಗಳನ್ನು (ಸೂರ್ಯನಿಂದ ಅರಳುವ ಕಮಲಗಳನ್ನು ನನ್ನ ಭಕ್ತಕೋಟಿಯಲ್ಲಿ ಎಷ್ಟೋ ಮಂದಿ ಕವಿಗಳು ಸೇರಿಸಿರುತ್ತಾರೆ. ಆದರೆ ನನ್ನನ್ನು ಪ್ರೀತಿ ಸುವ ತಾವರೆಗಳಾದರೂ ನನ್ನೊಡನೆ ಎಷ್ಟು ಸಂಕೋಚದಿಂದ ನಡಕೊಳ್ಳುತ್ತವೆಂದು ನನಗರಿಯದ ಸಂಗತಿಯಾಗಿರುವದಿಲ್ಲ. ತಮ್ಮ ಶರೀರವನ್ನೆಲ್ಲ ಯಾವದೊಂದು ಪುಷ್ಕರಣಿಯ ಜಲಾಶ ಯದಲ್ಲಿ ಮುಳುಗಿಸಿಟ್ಟು, ಅವು ಕೇವಲ ತಮ್ಮ ಮುಗುಳುನಗೆ ಯ ಪ್ರಫುಲ್ಲಿತ ಮುಖದಿಂದ ಕೆಲಹೊತ್ತಿನ ವರೆಗೆ ಮಾತ್ರ ನನ್ನ ಕಡೆಗೆ ನೋಡುತ್ತಿರುತ್ತವೆ! ನನಗೆ ಇಷ್ಟು ನಾಚಿ ತಮ್ಮ ಶರೀ ರವನ್ನೆಲ್ಲ ಮುಚ್ಚಿಕೊಂಡು ನನ್ನನ್ನು ಪ್ರೀತಿಸುವ ಆ ತಾವರೆಗೆ
ಳನ್ನು ನಾನೂ ವಿಶೇಷವಾಗಿ ಆದರಿಸುವದಿಲ್ಲ. ಈ ಪ್ರಕಾರ ನನ್ನ ನಿಸ್ಸಿಮ ಭಕ್ತರೇ ನನ್ನನ್ನು ಹೀಗೆ ಸ್ಪಷ್ಟವಾಗಿ ಉದಾ ಸೀನ ಮಾಡುತ್ತಿರುವಂಬದು ನನಗೆ ಆಗಾಗ್ಗೆ ಕಂಡು ಬರುತ್ತಿ ರುವದರಿಂದ ನನ್ನ ಮನಸ್ಸು ಬಹತಿ ಉದ್ವಿಗ್ನ ವಾಗುತ್ತ ಹೋಗುತ್ತದೆ. ಆದರೆ ನಾನಾದರೂ ನನ್ನ ಆ ಭಕ್ತರಿಗೇಕೆ ಹೆಸರಿಡಬೇಕು? ಪ್ರತ್ಯಕ್ಷ ನನ್ನ ಹೆಂಡತಿಯಾದ ಸಂಜ್ಞಾ ದೇವಿ ಯು ಸಹ ನನ್ನ ತಾಪಕ್ಕೆ ಬೇಸತ್ತು ನನ್ನನ್ನು ತೊರೆದು ಹೋ ದದ್ದು ನನಗೆ ಗೊತ್ತಿಲ್ಲೇನು? ಮತ್ತು ಅದಕ್ಕಾಗಿ ಅವಳ ತಂದೆಯು ನನ್ನನ್ನು ಒಂದು ಗಾಲಿಯ ಮೇಲೆ ಚಲ್ಲಿ ಕೊಟ್ಟು, ಗಾಣದ ಎತ್ತಿನಂತೆ ಗರಗರ ತಿರುಗಲಿಕ್ಕೆ ಹಚ್ಚಿರುವನು; ಹಾಗು ಅವನು ತನ್ನಲ್ಲಿಯ ಅರ್ನದಿಂದ ನನ್ನ ಶರೀರದ ತುಂಡು ತುಂ ಡುಗಳನ್ನಾ ಗಮಾಡಿರುವನು! ಹೀಗೆ ನನ್ನ ಗೃಹ ಸೌಖ್ಯವೇ ಆಗಿ ರಲಿಕ್ಕೆ ಹೆರವರು ನನ್ನ ಬಳಿಗೆ ಬಂದು ಹೋಗದಿದ್ದರೆ, ನಾನು ದುಃಪಿಸುವದಾದರೂ ಏಕೆ? ನನ್ನ ಕಡೆಗೆ ಯಾರೂ ಬರುವದಿ ಲೈಂಬ ಕೂಗಾಟವು ಸತ್ಯಕ್ಕೆ ಸ್ಮರಿಸಿರುವದಿಲ್ಲೆಂದು ಕೆಲವರಿಗನಿ ಸಬಹುದಾಗಿದೆ; ಯಾಕಂದರೆ, ಕೆಳಗೆ ವರ್ಣಿಸಿದ ಎರಡು ವಿಧದ ಜನರು ನನ್ನ ಬಳಿಗೆ ಬರುತ್ತಿರುವದಕ್ಕೆ ನಾನೂ ಸುಳ್ಳ ನ್ನು ವಂತಿಲ್ಲ, “ದ್ಯಾ ವಿಮೆ ಇರುವೌ ಲೋಕೇ ಸೂರ್ಯಮಂಡಲ ಛೇದಿನ್‌ ಪರಿವಾಡ ಯೋಗಯುಕ್ತ ರಣೇಚಾಭಿಮುಖೇಹತಃ||

ಯೋಗಿಗಳು, ರಣಾಂಗಣದಲ್ಲಿ ನುಡಿದಂಥ ವೀರರು,

ಇವರಿಬ್ಬರೇ ಸೂರ್ಯಮಂಡಲವನ್ನು ಭೇದಿಸತಕ್ಕವರು ಆದರೆ ಚಂದ್ರಾ, ಅವರ ಬರುವಿಕೆಯಿಂದ ನನಗಾವ ಸುಖವಾ ಗುತ್ತಿರಬಹುದೆಂಬದನ್ನು ನೀನೇ ಹೇಳು, ನನ್ನೊಡನೆ ಮಾತು ಕಥೆಗಳನ್ನಾಡುವವರೂ, ನಗೆಯಾಡಿ-ಕೆಲೆದಾಡ್ತಿ ಮನೋರಂ
ಜನವನ್ನು ೦ಟು ಮಾಡುವ ಸಂಗಡಿಗರೂ ನನಗೆ ಬೇಕಾಗಿರು ತ್ತಾರೆ. ಆದರೆ ಆ ಹೆಣಗಳಿಂದ ನನಗೇನಾಗಬೇಕಾಗಿದೆ. ಇತ್ತಿತ್ತಲಾಗಿ ಅಂಧ ಜನರೂ ನನ್ನೆಡೆಗೆ ಒರದಂತಾಗಿದ್ದಾರೆ. ಯಾಕಂದರೆ ಪ್ರಚಲಿತ ಯುದ್ಧ -ಮಹಾಯುದ್ಧಗಳಲ್ಲಿ ಎದುರಾ ಎದುರ ನಿಂತು ಕಾದುವ ಪದ್ಧತಿಯೇ ನಾಮಶೇಷವಾಗಿ ಬಿಟ್ಟಿದೆ! ಮತ್ತು ಯೋಗಿಗಳ ಬಗ್ಗೆ ಮಾತಾಡುವವೆಂದರೆ, ಈಗ ವೇಷಧಾರಿಗಳೆ ಎಲ್ಲೆಲ್ಲಿಯೂ ಕಾಣತ್ತಾರೆಯೇ ಹೊರ ತು ನಿಜವಾದ ಯೋಗಿಯೆಂಬುವವನೊಬ್ಬನೂ ದೃಗ್ಗೋಚರವಾ ಗುವದಿಲ್ಲ. ಇಂಥ ಸ್ಥಿತಿಯಲ್ಲಿಯ ಯಾವನೊಬ್ಬ ಮಹಾ ಶೂರನಾಗಲಿ, ಶ್ರೇಷ್ಟ ಯೋಗಿಯಾಗಲಿ ತನ್ನ ಸಾಮರ್ಥ್ಯದಿಂದ ನನ್ನೆಡೆಗೆ ಬಂದರೂ ಅವರಿಂದ ನನಗಾವ ಸುಖವಾಗುವಂತಿದೆ? ಅವರಲ್ಲಿ ಯಾವನು ಬಂದರೂ ಮೇಲಿನ ಶ್ಲೋಕದಲ್ಲಿ ವಿವರಿಸಿ ದಂತೆ ಅವನು ನನ್ನ ಹೃದಯವನ್ನು ವಿದಾರಣ ಮಾಡಿಯೇ ರೋಗತಕ್ಕವನು! ಸುಧಾಕರಾ, ಇಂಧನ ಕೃತಿಯಿಂದ ನನಗೆ ಎಂಥ ಸುಖವಾದೀತು? ಮೊದಮೊದಲು ಇಂಧ ಅನೇಕ ಜನರು ನನ್ನ ಕಡೆಗೆ ಬರುತ್ತಿದ್ದರು; ಹಾಗು ಅವರು ತಮ್ಮ ಬಿರುದನ್ನು ಕಾಯ್ದುಕೊಳ್ಳು ವದಕ್ಕಾಗಿ ನನ್ನ ಹೃದ ಯದಲ್ಲಿ ಹಲವು ಛಿದ್ರಗಳನ್ನುಂಟು ಮಾಡಿರುತ್ತಾರೆ. ನನ್ನ ಮೈಮೇಲೆ ಎಂಥವೋ ಕಪ್ಪು ಕಲೆಗಳಿರುತ್ತವೆಂದು ಎಷ್ಟೋ
ಜನರು ಭಾವಿಸುತ್ತಾರೆ. ಆದರೆ ಅವು ನಿಜವಾಗಿ ಕಲೆಗಳಿ ರದೆ, ಆ ಮಹಾತ್ಮರು ಕೆಡವಿದ ತೂತುಗಳೇ ಆಗಿರುತ್ತ ವೆಂಬದು ಪಾಪ, ಆ ದೋಷೋಕ ದೃಷ್ಟಿಯವರಿಗೇನು ಗೊತ್ತು? ಮಿತ್ರಾ, ಈ ದುಃಖದಿಂದ ನಾನು ದಿನೇ ದಿನೇ ಕ್ಷೀಣವಾ ಗುತ್ತ ನಡೆದಿದ್ದೇನೆ. ಮತ್ತು ಈ ಶಕ್ತಿಪಾತದಿಂದ ನನ್ನ ಅಂತವು ಯಾವಾಗಾದೀತೆಂಬದು ಕೂಡ ಊಹಿಸಲಶಕ್ಯವಾ ಟಿ!
ಗಿರುತ್ತದೆ. ಎಷ್ಟು ತೀವ್ರವಾಗಿ ನನ್ನ ಮರಣವು ಸಮೀಪಿ ಸುವರೋ, ಅಷ್ಟು ತೀವ್ರ ಅದು ನನಗೆ ಬೇಕಾಗಿರುತ್ತದೆ. ಚಂದ್ರಾ, ಸಿಂಹಿಕ ಪುತ್ರನಾದ - ರಾಹುವೆಂಬ ರಾಕ್ಷಸನು ಬಾಲ್ಯದಿಂದಲೇ ನಮ್ಮ ಕಡು ವೈರಿಯಾಗಿರುವನೆಂಬದು ನಿನಗೆ ಗೊತ್ತೇ ಇದೆ. ಮತ್ತು ಅವನನ್ನು ಮಹಾಶತ್ರುವೆಂದು ನಿನ್ನಂ ತೆಯೇ ನಾನೂ ಮೊದಮೊದಲು ತಿಳಿಯುತ್ತಿದ್ದನು. ಆದರೆ ಈಚೆಗೆ ಎಂದಿನಿಂದ ನಾನು ಜೀವಕ್ಕೆರವಾಗಬೇಕೆನ್ನ ಹತ್ತಿರುವೆ ನೋ, ಅಂದಿನಿಂದ ಆ ತೀಕ್ಷ್ಯ ಹಗೆಯಾದ ರಾಹುವನ್ನು ಕೂಡ ನಾನು ನನ್ನ ಪರಮ ಮಿತ್ರ ವರ್ಗದಲ್ಲಿ ಸೇರಿಸಿಕೊಂಡಿರು ತೇನೆ. ಈ ಶತ್ರುವು ನನ್ನನ್ನು ಕಾಯಮವಾಗಿ ನುಂಗಿಬಿ ಜ್ಞಾನೇನೆಂದು ನಾನು ಅಭಿಲಾಷೆಪಡುತ್ತಿದ್ದೆವು. ಆದರೆ ತನ್ನ ವೈರಿಯು ತನಗೆ ದುಃಖ ಕೊಡಲಿಕ್ಕೆ ಸಿದ್ಧನಾಗಿರುತ್ತಾ ನೆಯೇ ಹೊರತು, ದುಃಖದಿಂದ ತನ್ನನ್ನು ಮುಕ್ತ ಮಾಡಲಿಕ್ಕೆ ತತ್ಪರನಾಗಿರುವದಿಲ್ಲೆಂಬ ತತ್ವವು ಇತ್ತಿತ್ತಲಾಗಿ ನನ್ನ ಮನ ದಟ್ಟಾಗಹತ್ತಿರುತ್ತದೆ. ಆ ದುಷ್ಟ ರಾಹುವು ಒಮ್ಮೊಮ್ಮೆ ನನ್ನನ್ನು ಅರ್ಧಮರ್ಧ ನುಂಗಿ ಉಗುಳಿ ಬಿಟ್ಟರೆ, ಕೆಲಕೆಲವು ಪ್ರಸಂಗದಲ್ಲಿ ಅವನು ನನ್ನನ್ನು ಸಂಪೂರ್ಣವಾಗಿ ನುಂಗಲಿಕ್ಕೆ ಪ್ರಯತ್ನಿಸಿದರೂ, ಅಷ್ಟೊತ್ತಿನಲ್ಲಿ ನನಗೆ ಕೊಡತಕ್ಕಷ್ಟು ಕೈ ಶವನ್ನೆಲ್ಲ ಕೊಟ್ಟು ಪುನಃ ಅವನು ನನ್ನನ್ನು ಕಾರಿಕೊಂಡು ಬಿಡುತ್ತಿರುತ್ತಾನೆ. ನನ್ನನ್ನು ನುಂಗುವದಕ್ಕಾಗಿ ರಾಹುವು ನನ್ನ ಸವಿಸಮೀಪಕ್ಕೆ ಬಂದ ಹಾಗೆ ಅವನನ್ನು ನೋಡಿ ನನಗೆ ಪರಮಾನಂದವೆನಿಸುವದು; ಮತ್ತು ನನ್ನ ಕುತ್ತಿಗೆಯು ಅವನ ದವಡೆಯೊಳಗೆ ಸಿಕ್ಕು ಜಿಬ್ಬಿ ಜಿಬ್ಬಿಯಾಗುವ ಹಾಗೆ ನಾನು ಅದನ್ನು ಮುಂದಕ್ಕೆ ಬೊಗ್ಗಿಸಿ ನಿಲ್ಲುತ್ತೇನೆ. ಹಾಗು ನಾನು ಇನ್ನು ನನ್ನಿ ಅಖಂಡ ಸಂತಾಪದಿಂದೊಮ್ಮೆ ಪಾರಾಗುವೆ
ನೆಂದು ತಿಳಿಯುತ್ತಿರುತ್ತೇನೆ. ಆದರೆ ಒಂದೆರಡು ಗಳಿಗೆಯಾದ ಬಳಿಕ ನೋಡುವಷ್ಟರಲ್ಲಿ ಕೇವಲ ದುಃಖದಿಂದ ಬಳಲಲಿ ಕಂದು ಜನ್ಮವೆತ್ತಿದ ಈ ನಿನ್ನ ಹಿರಿಯಣ್ಣನು ಪುನಃ ಅಮ ರನಾಗಿಯೇ ಇರುತ್ತಾನೆ. ಈ ಸ್ಥಿತಿಯಲ್ಲಿ ಅಮರನಾಗಿರು ವದಾದರೂ ಒಂದು ಪ್ರಕಾರದ ಶಿಕ್ಷೆಯೇ ಆಗಿರುತ್ತದಲ್ಲವೆ? ಮಾರುತಿಯು ಹುಟ್ಟಿದೊಡನೆಯೇ ಯಾವದೊಂದು ಕೆಂಪಾದ ಹಣ್ಣೆಂದು ನುಂಗಿ ನನ್ನನ್ನು ಈ ದುಃಖದಿಂದ ಮುಕ್ತನನ್ನಾಗ ಮಾಡುವ ಮೊದಲನೇ ಪರೋಪಕಾರದ ಕೆಲಸಕ್ಕೆ ಪ್ರಯತ್ನಿಸಿ ದ್ದನು. ಆದರೆ ನನ್ನ ದೈವಹೀನತ್ವದಿಂದ ಅವನ ಆ ಪ್ರಯತ್ನ ವು ಸಫಲವಾಗಲಿಲ್ಲ. ಯಾಕಂದರೆ ಆ ಮಹಾಬಲಿಷ್ಠ ವಜ್ರ ಶರೀರದ ಹನುಮಪ್ಪನ ಶಕ್ತಿಗಿಂತಲೂ ಈ ದುರ್ದೆನಿಯ ಸಾಮರ್ಥವು ಆಗ ಬಲವಾಯಿತು. ಜಯದ್ರಧನ ವಧದ ಪ್ರಸಂಗದಲ್ಲಿ ಶ್ರೀ ಕೃಷ್ಣ ಪರಮಾತ್ಮನು ನನ್ನನ್ನು ಕೆಲ ಹೊತ್ತು ತನ್ನ ಚಕ್ರದ ಮರೆಗಿರಿಸಿದ್ದನೆಂಬದು ನಿನಗರಿಯದ ಸಂಗತಿಯಲ್ಲಿ ಆ ಕಾಲಕ್ಕೆ ಭಗವಾನ್ ಶ್ರೀ ಕೃಷ್ಣನಿಗೆ ನಾನು ಬಹಳವಾಗಿ ಹೇಳಿಕೊಂಡೆನು. ಅದೇನಂದರೆ,-“ಕೃಷ್ಣಾ, ಮುಹೂರ್ತಮಾತ್ರವೇ ನನಗೇಕೆ ಈ ಸುದರ್ಶನದ ಮರೆಗಿರ ಲಿಕ್ಕೆ ಹೇಳುತ್ತೀ? ನಾನು ಸಂಪೂರ್ಣವಾಗಿ ನಿಲಯಂ ದಲಿಕ್ಕೆ ಸಿದ್ಧನಾಗಿರುತ್ತೇನೆ. ಆದ್ದರಿಂದ ಈ ಸುದರ್ಶನವನ್ನು ನೀನು ಕ್ಷಣ ಮಾತ್ರ ನನ್ನ ಮುಂದಿಡದೆ, ಶ್ರೀ ಭೀಷ್ಮಾಚಾ ರ್ಯರ ಮೇಲೆ ಇದನ್ನು ನೀನು ಹೇಗೆ ಪ್ರಯೋಗಿಸಲಿಕ್ಕೆ ಸಿದ್ಧ ನಾಗಿದ್ದೆಯೋ, ಆ ಪ್ರಕಾರ ನೀನು ಈ ಸುದರ್ಶನಚಕ್ರವನ್ನು ನನ್ನ ಮೈ ಮೇಲೆ ಚಲ್ಲು. ಅಂದರೆ ನಿನ್ನ ಜಯದ್ರಥ ವಧದ ಕಾರ್ಯವೂ ಕೊನೆಗಾಣುವದು; ಹಾಗು ನನ್ನ ಆತ್ಮ ವಧದ ಕೆಲಸವೂ ಪೂರೈಸುವದು, ಆದರೆ ನನ್ನನ್ನು ಕರ್ಣನ ತಂದೆ
ಯೆಂದು ತಿಳಿದೋ ಏನೋ, ನನ್ನ ಮೇಲೆ ಪರೋಪಕಾರ ಮಾ ಡುವ ಬುದ್ದಿಯು ಆ ದ್ವಾರಕಾಧೀಶ್ವರನಾದ ಶ್ರೀ ಕೃಷ್ಣ ಪರ ಮಾತ್ ನಲ್ಲಿಯ ಹುಟ್ಟಲಿಲ್ಲ. ಚಂದಾ, ಇದರ ಮೇಲಿಂದ ನಾನು ನನ್ನ ಜೀವಿತದ ಬಗ್ಗೆ ಎಷ್ಟರ ಮಟ್ಟಿಗೆ ಬೇಸರಗೊಂಡಿ ರುವೆನೆಂಬದರ ಕಲ್ಪನೆಯು ನಿನಗಾಗಬಹುದು. ನಾನು ನನ್ನಿ ಜೀವಿತದ ರಹಸ್ಯವನ್ನು ಈ ವರೆಗೆ ಯಾರಿಗೂ ಹೇಳಿದ್ದಿಲ್ಲ; ಆದರೆ ಈ ದಿವಸ ನನ್ನ ಮನಸ್ಸು ತಡೆಯದ್ದರಿಂದ ಇದನ್ನು ನಿನ್ನೆ ದುರಿಗೆ ತೋಡಿಕೊಂಡಿರುತ್ತೇನೆ. ನಿನ್ನೆದುರಿಗೆ ಇದು ವರೆಗೆ ತೋಡಿಕೊಳ್ಳದಿರುವದರ ನಿಜವಾದ ಕಾರಣವೇನೆಂದರೆ, ನನ್ನ ತಾಪವು ನಿನಗಾಗಬಾರದೆಂದು ನನ್ನಿಂದಾದಷ್ಟು ದೂರವಿ ರಬೇಕೆಂಬ ಇಚ್ಛೆಯಿಂದ ನೀನು ಕದಾಚಿತ್ ನನಗೆ ಭೆಟ್ಟಿಯ ಗುತ್ತಿರಲಿಕ್ಕಿಲ್ಲ. ಅಂತೇ ನಾನಾದರೂ ಅದೇ ಕಾರಣದಿಂದ ನಿನ್ನಿಂದ ಶಕ್ಯವಿದ್ದಷ್ಟು ಅಂತರದಲ್ಲಿ ಓಡಾಡುತ್ತಿರುತ್ತೇನೆಂ ಬದು ನಿನ್ನ ಲಕ್ಷ್ಯದಲ್ಲಿ ಬಂದಿರಲಿಕ್ಕಿಲ್ಲ. ಒಬ್ಬ ಅಣ್ಣನು ತನ್ನ ಬೆನ್ನಿಗೆ ಬಿದ್ದ ಖಾಸ' ತಮ್ಮನನ್ನು ಈ ಪ್ರಕಾರವಾಗಿ ಎಂದೂ ತಿರಸ್ಕರಿಸಬಾರದೆಂಬದು ನನಗೆ ತಿಳಿಯುತ್ತದೆ! ಆದರೆ ಮಾಡಲೇನು? ನನಗೆ ನನ್ನಿ ದುಃಖ ಪೂರ್ಣ ಜೀವಿತವು ಸಾಕು ಸಾಕಾಗಿ ಹೋಗಿರುತ್ತದೆ. ಮತ್ತು ಈ ಜೀವಿತವು ಯಾವಾ ಗೊಮ್ಮೆ ತೀರಿ ಹೋದೀತೋ ಎಂದೆನಿಸಿರುತ್ತದೆ. ಈ ಪ್ರಕಾ ರದ ಮನಸ್ಸಿನ ಸ್ಥಿತಿಯ ಮೂಲಕ ನಾನು ನಿನ್ನಿಂದ ಸಾಧ್ಯವಿ ದ್ದಷ್ಟು ದೂರವೇ ಇರುತ್ತೇನೆ. ಯಾಕಂದರೆ, ನೀನು ಅಮ್ಮ ತದ ಆಗರವೇ ಆಗಿರುತ್ತೀಯಷ್ಟೇ, ನಿನ್ನ ಅರ್ದ ಸ್ವಭಾವ ಹೈನುಸರಿಸಿ, ನೀನು ನಿನ್ನಿ ಅಣ್ಣನ ದುಃಖವನ್ನು ನೋಡಲಾ ರದ ದುಃಖದಿಂದ ಒಂದಾನೊಂದು ಚಂದ್ರಕಾಂತ ಕಲ್ಲಿನಂತೆ ಕರಗಹತ್ತಬಹುದು. ಆಗ ನಿನ್ನ ಕಣ್ಣುಗಳಿಂದ ದುಃಖಾಶ್ರುಗ