ಮಿತ್ರ ದುಖಃ/v

ವಿಕಿಸೋರ್ಸ್ದಿಂದ

ಳು ಟಪಟಪನೆ ಉದುರಹತ್ತಿದವೆಂದರೆ, ಆ ನಿನ್ನ ದ್ರವರೂಪವಾ ದ ಅಮೃತದ ಒಂದಾನೊಂದು ಹನಿಯು ಆಕಸ್ಮಿಕವಾಗಿನನ್ನ ಮೈಮೇಲೆ ಬೀಳಬಹುದು.ಹಾಗು ಅದರಿಂದ ನಾನುಹೆಚ್ಚಾ ಗಿಯೇ ಅಮರನಾಗಲು, ನನ್ನ ಈ ದುಃಖಗಳೂ ನನ್ನೊಡನೆ ಅಮರವಾದರೆ ಅವುನಾಶವಾಗಲಿಕ್ಕೆ ಮಾರ್ಗವೇ ಉಳಿಯಲಿ ಕೈಲ್ಲೆಂದು ನಾನು ಯಾವಾಗಲೂ ಅಂಟಿದೂರಿರುತ್ತೇನೆ. ಆ ಷ್ಟೇ ಅಲ್ಲ, ನೀನೀಗ ನನ್ನೊಡನೆ ಮಾತಾಡುತ್ತಿರುವಾಗ ಇಲ್ಲವೆ ನನ್ನ ಕಡೆಗೆ ನೋಡುತ್ತಿರುವಾಗ ನಿನ್ನ ಪರಿಚಾರಕನಾದ ಆ ವಸಂತನಲಹರಿಯಮಲಕ ಎಲ್ಲಿಯಾದರೂ ನಿನ್ನ ಬಾಯೊಳಗಿನ ಅಮೃತದ-ಉಗುಳಿನ ಒಡಕು-ಗಿಡಕು ನನ್ನ ಮೇಲೆ ಹಾರಿ ಬಿದ್ದಿತೋ,ಹೇಗೋ...ಎಂಬಬಗ್ಗೆ ನನ್ನ ಎದೆಯ ಕ್ಷಣಕ್ಷಣಕ್ಕೆ ಧಸ್ಸನ್ನುತ್ತದೆ.

V

ಮಿತ್ರನ ಈ ಭಾಷಣದಿಂದ ಚಂದ್ರನಿಗೆ ಬಹಳ ಕೆಡಕೆನಿ ಸಿತು, ಅಮೃತದಲ್ಲಿ ಕೂಡ ಏನಾದರೂ ದೋಷವಿದ್ದೀತೆಂಬ ದರ ಕಲ್ಪನೆಯು ಕೂಡ ಚಂದ್ರನಿಗಿಲ್ಲ! ತನ್ನ ಅಗ್ರಜನ ದುಃಖ ಪರಿಷ್ಟುತವಾದ ಚರಿತ್ರವನ್ನು ಕೇಳಿ, ಅಂತರಂಗ ದಲ್ಲಿ ಕಳವಳಗೊಂಡ ಚಂದ್ರನ ಮನಸ್ಸಿನಲ್ಲಿ ಅಣ್ಣನ ಬೆನ್ನ ಮೇಲೆ ಮಮತೆಯಿಂದ ಕೈಯಾಡಿ ಅವನನ್ನು ಸಂತೈಸಬೇ ಕೆಂಬ ವಿಚಾರವುಂಟಾಯಿತು. ಆದರೆ ಯಾವನು ಅಮೃತದ ಒಂದು ಯಃಕಶ್ಚಿತ್ ಕಣಕ್ಕೆ ಸಹ ಹೆದರುತ್ತಿರುವನೋ ಅಂಥ ವನು ಪ್ರತ್ಯಕ್ಷ ಸುಧಾಕರನಾದ ನನ್ನನ್ನು ತನ್ನ ಮೈಗೆ ನಿಶ್ಚಯವಾಗಿ ಮುಟ್ಟಿಗೊಡಲಿಕ್ಕಿಲ್ಲೆಂಬದು ಪ್ರತಿ ಕ್ಷಣದಲ್ಲಿ

ಚಂದ್ರನಿಗೆ ಹೊಳೆಯಲು ಅವನು ಸುಮ್ಮನಾಗಿಬಿಟ್ಟನು.

ಇಷ್ಟರಲ್ಲಿ ಸೂರ್ಯನು ಮತ್ತೆ ಚಂದ್ರನಿಗೆ-ಚಂದ್ರಾ' ನನ್ನ ಗತಿಯ ಲೆಕ್ಕದಿಂದ ಪ್ರತಿಯೊಬ್ಬ ಮನುಷ್ಯನ ಆಯುಷ್ಯ ವನ್ನು ಬೋಯಿಸರು ಕಂಡು ಹಿಡಿಯುತ್ತಾರೆ. ಆದರೆ ಹತ ಭಾಗ್ಯನಾದ ಪ್ರತ್ಯಕ್ಷ ಈ ಸೂರ್ಯನು ಇನ್ನು ಎಷ್ಟು ದಿವಸಗಳ ವರೆಗೆ ಬಾಳುತ್ತಾನೆ; ಹಾಗು ಈತನ ಇಹಲೋ ಕದ ಯಾತ್ರೆಯು ಯಾವ ದಿವಸ ಮುಗಿಯುತ್ತದೆ? ಇತ್ಯಾದಿ ಭವಿಷ್ಯಗಳನ್ನು ಈ ವರೆಗೆ ಯಾವನೆ ಇಬ್ಬ ಗಣಕನೂ ಕುಂಡಲಿ ಯನ್ನು ಹಾಕಿ ವರ್ತಿಸಿರುವದಿಲ್ಲ. ನಿಜವಾದ ನನ್ನ ಜನ್ಮ ಕಾಲ ವೇ ತಮಗೆ ತಿಳಿದಿರವವಿತ್ತೆಂದು ಎಲ್ಲ ಜ್ಯೋತಿಷಿಗಳೂ ಅನ್ನು ತಾರೆ. ಅದರಿಂದ ನನ್ನ ರಾಶಿ, ನಕ್ಷತ್ರ, ಜನ್ಮಲಗ್ನ ಮುಂತಾದವುಗಳಲ್ಲೊಂದೂ ಅವರಿಗೆ ಗೊತ್ತಾಗದೆ ಅವರು ನಿರುಪಾಯರಾಗಿದ್ದಾರೆ. ಹೀಗಿಲ್ಲದಿದ್ದರೆ ನಾನು ಹುಟ್ಟಿದಂದಿ ನಿಂದ ಸಾಯುವವರೆಗಿನ ನನ್ನ ಎಲ್ಲ ಸಂಗತಿಗಳ ಭವಿಷ್ಯವನ್ನು ಪ್ರಸಿ ದ್ಧಿಸಲಿಕ್ಕೆ ಅವರು ಹಿಂದು ಮುಂದೆ ನೋಡುತ್ತಿದ್ದಿಲ್ಲ. ಆದರೂ ಆ ಜೋಯಿಸರಲ್ಲಿಯೇ ಕೆಲವು ಜನ ಉಪದ್ವಾಸಿಗಳಾದ ಗಣ ಕರು ಇತ್ತಿತ್ತಲಾಗಿ ಜನ್ಮ ತಾಳಿ ಆಮಗೆ ನನ್ನ ಜನ್ಮ ಕಾಲ ವು ಗೊತ್ತಿರದಿದ್ದರೂ, ಅವರು ನನ್ನ ಮರಣ ಕಾಲವನ್ನು ಕಂಡು ಹಿಡಿದು ಪ್ರಸಿದ್ಧಿಸಿರುವರು! ಅತ್ಯಂತಾನಂ ದದ ಅವರ ಈ ಭವಿಷ್ಯವನ್ನು ಕೇಳಿ, ನನಗೆ ಮಿಗಿಲಾದ ಸಂತೋಷವಾಗುತ್ತಲಿದೆ. ಜೋಯಿಸರ ಅದೂರ ದರ್ಶಕಬುದ್ದಿ ಯಮಲಕವಾಗಲಿ, ಗ್ರಹಗಳ ಚಂಚಲಸ್ವಭಾವದಿಂದಾಗಲಿ ಅವರ ಎಲ್ಲ ಭವಿಷ್ಯಗಳು ಬಹು ಮಟ್ಟಿಗೆ ಸುಳ್ಳು ಬೀಳುತ್ತಿದ್ದ ರೂ, ನನ್ನ ಮರಣ ವಿಷಯದ ಅವರ ಈ ಭವಿಷ್ಯ ವಾದರೂ ದಿಟವಾಗಲೆಂದು ನಾನು ಸದಾಸರ್ವದಾ ಅಪೇಕ್ಷಿಸುತ್ತಿ ದುತ್ತೇನೆ.

ಅಣ್ಣನ ಈ ಮರಣೇಚ್ಛೆಯ ವಾರ್ತೆಯನ್ನು ಕೇಳಿ ಸದ್ಗ

ದಿತ ಅಂತಃಕರಣದ ಚಂದ್ರನು ಗದ್ದ ದಸ್ವರದಿಂದ ಮಿತ್ರನನ್ನು ಕುರಿತು-ಎಲೈ ಸೂರ್ಯನಾರಾಯಣಾ, ಹೀಗೇಕೆ ಅಭದ್ರ ವಾಗಿ ನುಡಿಯುತ್ತೀ? ಹೀಗೆ ಅಶುಭವನ್ನು ಎಂದೂ ಮಾತಾಡ ಬಾರದು. ಒಬ್ಬಾನೊಬ್ಬ ದುಷ್ಟಜೋಯಿಸನು ನಿನ್ನ ವಿಷಯದ ಈ ಅನಿಷ್ಟ ಭವಿಷ್ಯವನ್ನು ತೆಗೆದಿರಬಹುದು; ಆದರೆ ಅವನ ಆ ನಿಂದ ಭವಿಷ್ಯವು ಎಲ್ಲಕ್ಕೂ ಮೊದಲು ಸುಳ್ಳಾಗಲೆಂದು ನಾ ನೊಬ್ಬನೇ ಇಚ್ಛಿಸುತ್ತಿರುವನಂತು, ಈ ತ್ರಿಭುವನ ವಾಸಿಗಳ ದ ಸಕಲ ಚರಾಚರ ಪ್ರಾಣಿಗಳ ಹಾಗೆ ಬಯಸುತ್ತವೆ. ಮತ್ತು ಇಂಧ ಮಹತ್ವದ ವಿಷಯದ, ಜನ್ಮ ಕಾಲವು ಗೊತ್ತಾ ಗದೆ ತೆಗೆದ ಮರಣಕಾಲದ ಭವಿಷ್ಯವು ನಿಜವಾದೀತೆಂಬದು ನನಗೆ ಸ್ವಲ್ಪವೂ ಶಕ್ಯವಾಗಿ ತೋರುವದಿಲ್ಲ. ಕೆಲವು ಸಣ್ಣ ಪ್ರಟ್ಟ ಬಾಬುಗಳಲ್ಲಿ ಈ ಗಣಕರ ಭವಿಷಗಳು ನಿಜವಾಗುವ ದು ಸತ್ಯವಿದೆ. ನಾವು ನವಗ್ರಹಗಳೆಲ್ಲರೂ ಸೈರ (ಮನಸಿಗೆ ಬಂದಹಾಗೆ ಸಂಚುಸುವವರು) ಸಂಚಾರಿಗಳೆಂದು ತಿಳಿದಿರು ತೇವೆ. ಆದರೆ ಈ ಜ್ಯೋತಿಷಶಾಸ್ತ್ರ ನಿಪುಣರು ನಮ್ಮ ಕೈ " ಕಾಲುಗಳನ್ನು ಕಟ್ಟಿ ಬಿಟ್ಟಿದ್ದಾರೆ; ಅವರು ಗೊತ್ತುಪಡಿಸಿದ ಕಾ ಲಕ್ಕಿಂತ ತುಸು ಮಟ್ಟಿಗೆ ಸಹ ನಾವು ಹೆಚ್ಚು-ಕಡಿಮೆ ಹಿಂದೆಮುಂದೆ ಆಗುವಂತಿರುವದಿಲ್ಲ. ಈ ದಿವಸ ಸೂರ್ಯನು ಇಂಥ ಸ್ಥಳದಲ್ಲಿರತಕ್ಕದ್ದು ಎಂದು ಅವರು ಹೇಳಿದರೆಂದರೆ ನೀನು ಸತ್ತು ಕೆಟ್ಟಾದರೂ ಆ ಸ್ಪಳವನ್ನು ಮುಟ್ಟಿಯೇ ತೀರಬೇಕಾ ಗುತ್ತದೆ. ಬಹಳ ಮಾತಾಡುವದರಿಂದೇನು ಪ್ರಯೋಜನ? ಹೇ ಸೂರ್ಯನಾರಾಯಣಾ, ನಾವೀಗ ನಮ್ಮ ಸುಖ-ದುಃಖಗಳನ್ನು ಪರಸ್ಪರರಿಗೆ ಹೇಳುತ್ತ ನಡೆದಿರುವೆನಷ್ಟೇ? ಇವನ್ನಾದರೂ ಬಾಳ ಹೊತ್ತಿನವರೆಗೆ ಒಟ್ಟಿಗೆ ಕುಳಿತು “ ತೋಡಿಕೊಳ್ಳಬೇಕೆಂದರೆ ಅದಕ್ಕೆ ಆ ಜೋಯಿಸರ ಸಮ್ಮತಿಯಲ್ಲಿರುವದು? ನಾವಿಬ್ಬ
ರೂ ಎಷ್ಟೊತ್ತಿನವರೆಗೆ ಪರಸ್ಪರರ ಸನ್ನಿಧಿಯಲ್ಲಿ (ಪರಸ್ಪರರ ಸಹವಾ ಸದಲ್ಲಿ) ರತಕ್ಕದ್ದು ಹಾಗು ಎಷ್ಟೊತ್ತಾದನಂತರ ನಾವು ನಮ್ಮ ಯತಿಯಿಂದ ವಿಭಕ್ತರಾಗಿ ಬೇರೆ ಬೇರೆ ಮಾರ್ಗಗಳಿಂದ ಹ್ಯಾಗೆ ದಾಲಕ್ರವಿಸತಕ್ಕದ್ದು ಎಂಬದನ್ನು ಕೂಡ ಅವರು ನಿಶ್ಚಯಿ ಸಿದ್ದಾರೆ. ಇಷ್ಟೇ ಅಲ್ಲ, ಅವರು ಗೊತ್ತುಪಡಿಸಿದ ನಮ್ಮ ಇಂದಿನ ಸಂಯೋಗಕಾಲವು ಈಗ ತೀರ ಸಮೀಪಿಸಿದಂತಾಗಿದೆ. ಯಾಕಂದರೆ, ಗಣಕರು ಈ ದಿವಸ ಅಮಾವಾಸ್ಯೆಯನ್ನು ಬಹಳ ಸ್ವಲ್ಪ ಗಳಿಗೆ ಇಟ್ಟಿದ್ದಾರೆ; ಹಾಗು ಅವರು ಇಂದೇ ಪ್ರತಿಪದೆಯನ್ನು ಗಣಿಸಿರುವದುಂದ, ಇಂದು ಸಾಯಂಕಾಲ ದಲ್ಲಿ ಭೂಮಿಯ ಮೇಲಿನ ಜನರಿಗೆ ಪ್ರತಿಪದೆಯ ಚಂದ್ರ ದರ್ಶ ನವು ಆಗಿಯೇ ತೀರಬೇಕೆಂಬ ಅವರ ಸಕ್ತ ಹುಕುಂ ನನಗಾ ಗಿದೆ. ಜ್ಯೋತಿಷಿಗಳ ಈ ಹುಕುಮಿನ ಸಂಗತಿಯು ಭೂಮಂ ಡಲದಲ್ಲಿ ಈ ಪೂರ್ವದಲ್ಲಿಯೇ ಪ್ರಕಟವಾಗಿರುವದರಿಂದ ಪೃಥ್ವಿತಲದ ಮೇಲಿನ ಜನರು ನನ್ನನ್ನು ನೋಡುವಕ್ಕಾಗಿ ಪಶ್ಚಿಮ ದಿಕ್ಕಿನ ಅಕಾಶದ ಕಡೆಗೆ ಉತ್ಸುಕತೆಯಿಂದ ಎವೆಯಿ ಇದೆ ನೋಡತೊಡಗಿದ್ದಾರೆ; ಮತ್ತು ಭಾವೀ ಸುವರ್ಣ ಲಾಭದ ಭ್ರಮೆಯಿಂದ ಅವರು ತಂತಮ್ಮ ಸದ್ಯದ ದೋತರ-ಪಂಜೆಗಳ ನೂಲುಗಳನ್ನು ಪರಿಹರಿದು ನನಗೇರಿಸಲಿಕ್ಕೆ ಸಿದ್ಧರಾಗಿರು ತ್ತಾರೆ. ಇತ್ತ ನೋಡು, ಈ ನೈದಿಲೆಗಳು (ಚಂದ್ರನನ್ನು ನೋಡಿ ಅರಳುವ ಕಮಲಗಳು) ಕೂಡ ನನ್ನ ದರ್ಶನದ ಆಪೇ ಕ್ಷೆಯಿಂದ ತಮ್ಮ ಮುಖಗಳನ್ನು ಮಂದ ಮಂದವಾಗಿ ಅರಳಿಸುತ್ತಿವೆ; " ಮತ್ತು ಈ ಚಕ್ರವಾಕ ಪಕ್ಷಿಗಳು ನನ್ನ ಒಂದೆರಡು ದಿನಗಳ ಅದರ್ಶನದಿಂದ ನೀರಡಿಸಿ, ಅಮೃತಬಿಂದು ಗಳನ್ನು ಕುಡಿಯಲಿಕ್ಕೆಂದು ಮೇಲೆ ಮೋರೆಮಾಡಿಕೊಂಡು, ಇನ್ನೂ ಬಿಸಿಲಿರುವದಾದರೂ ಆಕಾಶದಲ್ಲಿ ವಿಹರಿಸತೊಡಗಿವೆ. ಸಾರಾಂಶ, ಈ ಜ್ಯೋತಿಷಿಗಳು ತಮ್ಮ ಕಠಿಣವಾದ ನಿಯಮ
ಗಳಿಂದ ಗ್ರಹ, ನಕ್ಷತ್ರ ದೇವ, ದಾನವ, ಮನುಷ್ಯ, ಪಶು, ಪಕ್ಷಿ, ಮೊದಲಾದವರನ್ನು ಬಿಗಿದುಬಿಟ್ಟಿದ್ದಾರೆ. ಅವರ ಸಂ ಬಂಧದ ಇದೆಲ್ಲ ಸಂಗತಿಯು ವಾಸ್ತವವಾಗಿದ್ದರೂ ಅವರು ವರ್ತಿಸಿದ ಭವಿಷ್ಯಗಳು ಸಟೆಯಗುವದಿಲ್ಲೆಂಬಂತಿಲ್ಲ; ಮತ್ತು ನಾನಾದರೂ ಈಗ ಇಚ್ಚಿಸುವದೇನಂದರೆ, ನಿನ್ನ ಮರಣ ಸಂ ಬಂಧವಾಗಿ ಯಾವ ಜೋಯಿಸರು ಭವಿಷ್ಯವನ್ನು ಹೇಳಿರು ವರೋ, ಅವರ ಭವಿಷ್ಯವು ಸಂಪೂರ್ಣವಾಗಿ ಸುಳ್ಳಾಗಲಿ!

ಆಗ ಸೂರ್ಯನು ನಡುವೆ ಬಾಯಿ ಹಾಕಿ___ "ಬೇಡ-

ಬೇಡ, ಚಂದ್ರಾ, ಹೀಗೆ ಅಭದ್ರವಾಗಿ ಮಾತಾಡಬೇಡ. ನನ್ನ ಅಂತಕಾಲದ ವಿರುದ್ಧವಾಗಿ ನೀನು ಹೀಗೆ ಕೊಂಚಮಾತ್ರವೂ ಸದಿಚ್ಛೆಯನ್ನು ವಹಿಸಬೇಡ. ಈ ಕಡು ದುಃಖದಿಂದ ನನಗೆ ಮೈ ಮುಕ್ತವಾಗಗೊಡು, ನೀನು ನನ್ನ ನಿರ್ವಾಣ ಸುಖಕ್ಕೆ ಅಡ್ಡಾಗಬೇಡ. ನಾನು ಈ ಸರಿ ದುಃಖದಿಂದ ಬದುಕಿಯಾ ದರು ಮಾಡುವದೇನದೆ? ಚಂದಾ, ನಿನ್ನ ಮಾತು ಬೇರಿದೆ. ಈಗ ನೀನು ಸಾರಿದಂತೆ ನಿನ್ನ ಆಗಮನಕ್ಕಾಗಿ ಇಡಿ ಜಗತ್ತೇ ಉತ್ಸುಕವಾಗುತ್ತದೆ; ಹಾಗು ನಿನ್ನ ಉದಯವಾದರೆ ಸರ್ವ ಜಗತ್ತೇ ಸಂತೋಷಪಡುತ್ತದೆ. ಆದರೆ ನನ್ನ ಸ್ಥಿತಿಯು ಹಾಗಿ ರುವದಿಲ್ಲ. ನನ್ನ ಉತ್ಕರ್ಷವು ಯಾರಿಗೂ ಸಹನವಾಗುವದಿಲ್ಲ; ಇಷ್ಟೇ ಅಲ್ಲ, ನನ್ನ ಅಧಃಪಾತವು ಯಾವಾಗಾದೀತೆಂದು ಎಲ್ಲ ರೂ ಹಾದೀ ನೋಡುತ್ತಿರುತ್ತಾರೆ. ಈಗ ನನಗೂ ನನ್ನ ಜೀ ವಿತದಲ್ಲಿ ಅರ್ಥವುಳಿದಿರುವದಿಲ್ಲ. ಆದ್ದರಿಂದ ಮರಣವು ಎಷ್ಟು ಬೇಗನೆ ಬಂದೀತೋ, ಅಷ್ಟು ಬೇಗನೆ ಅದು ನನಗೆ ಬೇಕಾಗಿರುತ್ತದೆಂದು ನಾನನ್ನು ತ್ತೇನೆ. ನಾನು ಈ ಅಸಹ್ಯ ದುಃಖದಿಂದ ಒಂದೇ ಸವನೆ ಉರಿಯುತ್ತಿರುತ್ತೇನೆ; ಮತ್ತು ಎಂದಿಲ್ಲೊಂದು ದಿವಸ ನನ್ನ ಕೈ ಕಾಲುಗಳು ತಣ್ಣಗಾಗತ ಕ್ಯವೇ ಎಂದು ಈ ಸೂರ್ಯ ಶರೀರದ ಧನ್ವಂತರಿಗಳಾದ
ಜ್ಯೋತಿಷ ಶಾಸ್ತ್ರ ನಿಪುಣರ ಮತವಾಗಿರುತ್ತದೆ. ಮಿತ್ರಾ ಚಂದ್ರಾ, ನಮ್ಮ ಕೆಳಗಿನ ಈ ಭೂತಲದ ಮೇಲಿನ ಮನು ಮೂರ ಶರೀರಗಳು ಅವರು ಸತ್ತ ಬಳಿಕ ಸುಡಲ್ಪಡುತ್ತವೆ. ಆದರೆ ಈ ನಿನ್ನ ಮಿತ್ರನ ಶ್ರೇಷ್ಠತ್ವವೂ, ಹತಭಾಗ್ಯತ್ವವೂ ಮಿಗಿಲಾಗಿರುವದರಿಂದ, ನನ್ನ ದೇಹವು ನಾನು ಜೀವಗಿಂಗಿ ರುವಾಗಲೇ ಸುಡುತ್ತಿರುತ್ತದೆ. ಈ ನನ್ನ ದುರ್ಭಾಗ್ಯಕ್ಕೇನೆ ಬೇಕು? ಈ ಬಗೆಯ ಈ ಶ್ರೇಷ್ಟತನ ನನಗೆ ಸಾಕಾ ಗಿದೆ. ಸೂರ್ಯನ ದೇಹದ ಉಷ್ಣತೆಯು ಬರಬರುತ್ತ ಕಡಿಮೆ ಯಾಗುವದರಿಂದ ಒಂದಾನೊಂದು ದಿನ ಅದು ವಿಶೇಷವಾಗಿ ಅವನು ಇಲ್ಲದಂತಾಗುವನೆಂದು ಕೆಲವು ಶೋಧಕ ಗಣಕರು ಗಣಿತ ಹಾಕಿ ನಿಶ್ಚಯಸಿದರೆ, ಉಳಿದ ಎಷ್ಟೋ ಅಹಂಮನ ಜೋಯಿಸರು ಅವರನ್ನು ಹುಚ್ಚರ ವರ್ಗದಲ್ಲಿ ಸೇರಿಸಿ ನಗು ವರು. ಆದರೆ ನಾನು ನನ್ನ ಕಷ್ಟಮಯ ಜೀವಿತಕ್ಕೆ ಬಹಳ ವಾಗಿ ಬೇಸತ್ತಿರುವದರಿಂದ ಎಂದಾದರೊಂದು ದಿನ ಆ ಗಣ ಕರು ವರ್ತಿಸಿದ ನನ್ನ ಮರಣದ ಭವಿಷ್ಯವನ್ನು ಸತ್ಯವಾಗ ಮಾಡಲಿಕ್ಕೆ ನಾನು ಪ್ರಯತ್ನಿಸದೆ ಇರಲಿಕ್ಕಿಲ್ಲ,

ಬಳಿಕ ಚಂದ್ರನು ಮನಸ್ಸಿಲ್ಲದಿದ್ದರೂ ತನ್ನ ಗತಿಯ

ದಿಕ್ಕನ್ನು ಸಾವಕಾಶವಾಗಿ ಬದಲಿಸುತ್ತ-'ಎಲೈ ಭಾಸ್ಕರಾ, ಹೀಗೆ ನೀನು ನಿರಾಶನಾಗಬೇಡ. ನೀನು ನಿನ್ನ ಚಿತ್ರವನ್ನು ತುಸು ಶಾಂತವಾಗಮಾಡು. ಈ ಪ್ರಕಾರದ ದುಷ್ಟ ವಿಚಾರದಿಂದ ನಿನ್ನ ತಲೆಯು ಇರ್ಮಣಹೊಂದಿರುವಾಗ, ನಿನ್ನ ಬಳಿಯಲ್ಲಿದ್ದು ನಿನ್ನ ಶರೀರದ ಬಗ್ಗೆ ಎಚ್ಚರಿಕೆ ಪಡುವರಾರಾದರೂ ನಿನಗೆ ಅವಶ್ಯ ಎಗಿ ಬೇಕು. ನಿನಗೆ ಯಾವದಾದರೂ ಶೈತ್ಯೋಪಚಾರ ವನ್ನು ಮಾಡಿ, ನಿನ್ನ ಪ್ರಕೃತಿಯನ್ನು ಸುಧಾರಿಸುವದು ನನ್ನ ಕರ್ತವ್ಯವಾಗಿದೆ; ಆದರೆ ಮಾಡಲೇನು? ಈ ಮೊದಲೇ ಸೂಚಿಸಿದಂತೆ ನಮ್ಮಿರ್ವರ ವಿಯೋಗದ ಕಾಲವು ಬಂದೇ ಬಿಟ್ಟಿ
ತು, ನಿನ್ನ ಇಂಥ ಮರಣೋನ್ಮುಖವಾದ ಅವಸ್ಥೆಯಲ್ಲಿ ಯ ನಿನ್ನೊ ಬ್ಬನನ್ನೇ ಬಿಟ್ಟು ಕೊಟ್ಟು, ನಾನು ನನ್ನ ಕೆಲಸದ ಮೇಲೆ ಹಾಜರಾಗಲಿಕ್ಕೇ ಬೇಕಾಗಿರುತ್ತದೆ. ಪರಾಧೀನ ತೆಯ ಬಗ್ಗೆ ಉಪಾಯವೇ ಇಲ್ಲ! ಈ ದುಃಸ್ಥಿತಿಯಲ್ಲಿ ನಾನು ನಿನ್ನ ಬಳಿಯಿಂದ ಹೋಗುವಂತೆಯಇಲ್ಲ; ನಿಲ್ಲುವಂತೆಯೂ ಇಲ್ಲ.

ಹೊರಟು ಹೋಗಲಿಕ್ಕೆ ಕೈಸನ್ನೆ ಯನ್ನು ಮಾಡುತ್ತ

ಸೂರ್ಯನು ಚಂದ್ರನನ್ನು ಕುರಿತು-ಹೋಗು, ಹೋಗು; ಚಂದ್ರಾ, ನೀನು ಹೊರಟು ಹೋಗು. ಚಂದಾ, ನೀನು ನಿಂತರೂ ನನ್ನ ಸಂತಾಪವು ಸ್ವಲ್ಪವೆ ನಿಲ್ಲುವಂತಿದೆ. ಅದು ನನ್ನ ಜೀವಿತದೊಡನೆಯೇ ಲಯವಾಗತಕ್ಕದ್ದು; ಅದ್ದರಿಂದ ನಿನಗೆ ನನ್ನ ಕಡೆಗೆ ಲಕ್ಷ ಗೊಡದೆ ಹೊರಟುಹೋಗೆಂ ದು ಹೇಳುತ್ತೇನೆ. ನಿನ್ನಂತೆ ನನಗಾದರೂ ಇಂಥ ಈ ಕುಣ ಸ್ಥಿತಿಯಲ್ಲಿಯೂ ಸ್ವೀಕೃತ ಕಾರ್ಯಕ್ಕಾಗಿ ನನ್ನ ದಾರಿ ಯ ಹಿಡಿಯಬೇಕಾಗಿದೆ. ನಮೀ ರ್ವರ ಈ ಕ್ಷಣಿಕ ಸುಖಕರ ವಾದ ಬಂಧ:-ಸಮಾಗಮದ ಅವಧಿಯು ತೀರಿತು. ಇಗೋ ಇತ್ರ ನೋಡು, ನನ್ನ ರಥವೂ ಬೇರೆ ದಿಕ್ಕಿನ ಮಾರ್ಗವನ್ನು ಹಿಡಿಯಿತು. ನಾವು ಹೀಗೆ ಪರಸ್ಪರರ ಕಡೆಯ, ಭಟ್ಟಿಯನ್ನು ತಕೊಳ್ಳ ಹತ್ತಿರುವಷ್ಟರಲ್ಲಿ, ಇದು ನೋಡು, ನಮ್ಮಿರ್ವರ ರಧಗಳ ನಡುವೆ ಎಷ್ಟೊಂದು ಅಂತರವಾಯಿತು!ಅರುಣಾ, ನಮ್ಮಿಬ್ಬರು ಬಂಧುಗಳ ಈ ಕಡೆಯ ಬೆಟ್ಟಿಗೆ ಸ್ವಲ್ಪಾದರೂ ಹೆಚ್ಚು ವೇಳೆ ಸಿಗಲೆಂದು ನೀನು ನನ್ನ ಕುದುರೆಗಳ ಕಡಿವಾಣಗ ಳನ್ನು ಬಹು ನಿಷ್ಟುರತೆಯಿಂದ ಜಗ್ಗಿ ಹಿಡಿಯುತ್ತಿರುವೆ; ಆದರೆ ಇದರಿಂದೆಷ್ಟು ವೇಳೆ ಸಿಕ್ಕಿತು? ನಾನೂ ಹೊರಡಲೇಬೇಕು!-- ಚಂದ್ರಾ, ಹೋಗು, ನೀನು ಇನ್ನು ಹೊರಟುಹೋಗು... ಅರುಣಾ, ಕುದುರೆಗಳ ಲಗಾಮುಗಳನ್ನು ಜಗ್ಗ ಬೇಡ, ಬಿಡು. ನನ್ನ ಸಲುವಾಗಿ ಪಾಪ! ಆ ಬಡ ಪ್ರಾಣಿಗಳಿಗಾಗುವ ಕಷ.
ವನ್ನು ನಾನು ನೋಡಲಾರೆನು.-ಚಂದ್ರಾ, ನಿನ್ನ ರಥವು ಮುಂದೆ ಹೊರಟು ಹೋಗಿದ್ದರೂ ನೀನು ನಿನ್ನ ದೃಷ್ಟಿಯನ್ನು ಹಿಂದುರಿಗಿಸಿ ನೋಡುತ್ತಿರುವೆಯಲ್ಲ? ನೀನು ಹೀಗೆ ಎಷ್ಟೋ ತಿನ ವರೆಗೆ ನೋಡುವೆ?_ಅರುಣಾ, ನವ, ಕುದುರೆಗಳ ಕಡಿವಾಣಗಳನ್ನು ತೀರ ಸಡಿಲಾಗಿ ಬಿಡು, ಮತ್ತು ಅದಕ್ಕೆ ಮನೋವೇಗದಿಂದ ಓಡಗೊಡು.ಚಂದ್ರಾ, ನೀನು ಕಂಬನಿ ಗಳನ್ನು ಒರಿಸಿಕೊಂಡು ಒಂದುರಿಗಿ ನೋಡುವದನ್ನು ಬಿಟ್ಟು ಕೊಟ್ಟು ನಿನ್ನ ರಥದ ಗತಿಯ ಕಡೆಗೆ ಲಕ್ಷಗೊಡು. ಅಂದರೆ, ಅದು ಅಸ್ಥಲಿತವಾದೀತು.

ತನ್ನ ಕಣ್ಣುಗಳನ್ನು ಒರಿಸುತ್ತೊರಿಸುತ್ತ ಚಂದ್ರನು----

“ಎಲೈ ಅಣ್ಣನೇ, ನಾನು ನಿನ್ನೆಡೆಗೆ ತಿರುಗಿ ನೋಡದಿರುವದು ಶಕ್ಯವೇ ಇಲ್ಲ. ನೀನು ಎಲ್ಲಿಂದ ಎಷ್ಟು ಕಾಣುವೆಯೋ, ಅಲ್ಲಿಂದಅಷ್ಟೇ ನಾನು ನಿನ್ನ ಕಡೆಗೆ ನೋಡದೆ ಇರಲಿಕ್ಕಿಲ್ಲ. ನನ್ನ ಜೀವಿತವೆಲ್ಲ ನಿನ್ನನ್ನವಲಂಬಿಸಿರುತ್ತದೆ. ನಿನ್ನನ್ನು ಬಿಟ್ಟರೆ, ನನ್ನ ಹೃದಯವೆಲ್ಲ ಕತ್ತಲು ಗವಿಯಬಹುದು. ನಿನ್ನ ವಿಯೋಗ ದುಃಖವು ನನ್ನಿಂದ ಸಹಿಸಲಶಕ್ಕವು. ಆದ್ದರಿಂದ ನಾನು ಈಗ ಹೋಗುತ್ತಿದ್ದರೂ, ಇನ್ನೊಂದು ತಿಂಗಳಿಗೆ ನಿನ್ನ ಭೆಟ್ಟಿಗಾಗಿ ನಿನ್ನೆಡೆಗೆ ನಿಶ್ಚಯವಾಗಿ ಬರದಿರಲಾರೆನು!

ಹೀಗೆ ಚಂದ್ರನು ಮಾತಾಡುತ್ತಿರಲಿಕ್ಕೆ ಸೂರ್ಯ-ಚಂ

ದ್ರರ ರಥಗಳ ನಡುವಿನ ಅಂತರವು ಬೆಳೆಯಿತು. ಹಾಗೂ ಪರ ಸ್ಪರರು ಮಾತಾಡುವ ಮಾತುಗಳು ಪರಸ್ಪರರಿಗೆ ಸ್ಪಷ್ಟವಾಗಿ ಕೇಳದಾದವು. ಆಗ ಸೂರ್ಯನು ತನ್ನ ಮೊರೆಯನ್ನು ಹಿಂದಿ ರುಗಿಸಿ ಚಂದ್ರನಿಗೆ ಕೈಸನ್ನೆ ಮಾಡುತ್ತ ಗಟ್ಟಿಯಾಗಿ “ಬೇಡ, ಬೇಡ, ಚಂದ್ರಾ, ನೀನಿನ್ನು ನನ್ನ ಬಳಿಗೆ ಬರ ಬೇಡ, ನಾನು ಇನ್ನು ಮುಂದೆ ನಿನಗೆ ಭೆಟ್ಟಿಯಾಗಲಿಕ್ಕಿಲ್ಲ. ಇಂದಿನ ಈ ಭೆಟ್ಟಿಯೇ ನನ್ನ ನಿನ್ನ ಕಡೆಯ ಭೆಟ್ಟಿಯೆಂದು ತಿಳಿದುಕೊ, ಎಂದು ನುಡಿದನು.

ಸೂರ್ಯನ ನಿರಾಶೆಯ ಈ ನುಡಿಯನ್ನು ಕೇಳಿ ಚಂದ್ರ

ನಿಗೆ ಬಹಳ ಕೆಡಕೆನಿಸಿತು. ಆದರೆ ಚಂದ್ರನ ತಲೆಯು ಶಾಂ ತವಾದದ್ದರಿಂದ, ಸೂರ್ಯನಾರಾಯಣನು ಅವಿನಾಶಿಯ, ಅಜರನೂ, ಅಮರನೂ ಎಂಬ ವಿಚಾರವು ಅವನಲ್ಲಿ ಜಾಗ್ರತವಾ ಗಿತ್ತು. ಅದರಿಂದ ಅವನು ಕೂಡಲೆ ಸೂರ್ಯನನ್ನು ದೇಶಿ ಸಿ--ಎಲೈ ಸೂರ್ಯನಾರಾಯಣಾ, ನಿನ್ನ ತಲೆಯೊಳಗಿನ ಈ ಭ್ರಮೆಯನ್ನು ನೀನು ತೆಗೆದು ಹಾಕು, ನಿನ್ನ ನನ್ನ ಕಡೆಯ ಬೆಟ್ಟಿಯೆಂದು ನೀನೆಂದೂ ಭಾವಿಸತಕ್ಕದ್ದಲ್ಲ. ಯಾವ ಸಚ್ಚಿದಾ ನಂದ ಸರಮೇಶನು ನಮ್ಮೆಲ್ಲರನ್ನು ಹುಟ್ಟಿಸಿರುವನೋ ಅವನ ಇಚ್ಛೆಯು ಹೀಗಿರುವದಿಲ್ಲ. ಹಾಗೂ ಆತನ ಇಚ್ಛೆಯ ವಿನಃ ಯಾವ ಸಂಗತಿಯು ಎಂದೂ ಘಟಿಸಲಾರದು.

ರಥವು ಒತ್ತರದಿಂದಲೂ ಚಂದ್ರನಿಂದ ಬಹುದೂರವಾ

ಗಿಯ ನಡೆದಿದ್ದರೂ ಕೂಡ ಸೂರ್ಯನು ಯಾವ ಪರಮೇ ಶ್ವರನ ಇಚ್ಛೆಯ ಬಗ್ಗೆ ನೀನಿಷ್ಟು ವಿಶ್ವಾಸವನ್ನು ವಹಿಸಿರುವ ಯೋ ಆ ಪರಮೇಶ್ವರನು ನನಗೆ ಈ ವರೆಗೆ ಎಲ್ಲಿಯ ಭೆಟ್ಟಿಯಾಗಿರುವದಿಲ್ಲವಲ್ಲ? ಅವನು ನನಗೆಂದಾದರೂ ಕೂಡಿ ದರೆ, ನನ್ನನ್ನು ಈ ಸರಿ ದುಃಖಮಯ ಸ್ಥಿತಿಯಲ್ಲಿಡುವದ ರಿಂದ ನಿನಗಾವ ಪುರುಷಾರ್ಥವು ಲಭಿಸುವದದೆಯೆಂದು ನಾನು ಅವನಿಗೆ ಸ್ಪಷ್ಟವಾಗಿ ವಿಚಾರಿಸತಕ್ಕವನಿದ್ದೇನೆ. ಆದರೆ ಅವ ನು ನನಗೆಲ್ಲಿಯ ಕಾಣುವದಿಲ್ಲ, ಎಂದು ಒದರಿ ಹೇಳಿದನು.

“ಅವನಂತೂ ಎಲ್ಲಿನೋಡಿದದಲ್ಲಿ ಕಾಣುತ್ತಾನೆ ಎಂದು

ಚಂದ್ರನು ಕೂಗಿದನು.

ಸೂರ್ಯ-ಹಾಗಾದರೆ ನಾನು ಅವನನ್ನು ಪ್ರತಿನಿ

ತ್ಯವೂ ಶೋಧಿಸುತ್ತಿರುತ್ತೇನೆ, ಅವನ ಗಂಟು ಬೀಳುವ ಸಲು ವಾಗಿ ಹಾಗು ಅವನಿಗೆ ಈ ಪ್ರಶ್ನೆಯನ್ನು ಕೇಳುವಸಲುವಾಗಿ
ಈಗೆಷ್ಟೋ ವರ್ಷಗಳಿಂದ ಈ ವಿಶ್ವವಲಯದ ಸುತ್ತಲೂ ನಾನು ಭ್ರಮಣಮಾಡುತ್ತಲಿದ್ದೇನೆ. ಇಂದಿಗೂ ನನಗೆ ಅವನ ದರ್ಶನವಾಗಿರುವದಿಲ್ಲ. ಆದರೆ ಆ ವಿಶ್ವೇಶ್ವರನನ್ನು ಇನ್ನು ಹುಡುಕದೆ ಬಿಡುವಹಾಗಿಲ್ಲ. ಎಂಬ ದೃಢನಿಶ್ಚಯದಿಂದ ನಾನು ನನ್ನಿ ಸಂಕ್ರಮಣವನ್ನು ಪ್ರಾರಂಭಿಸುತ್ತೆನೆ ಅವನು ಎಲ್ಲಿಯಾದರೂ ಕತ್ತಲೆಯಲ್ಲಿ ಅಡಗಿಕೊಂಡು ಕೂತಿರದಿದ್ದರೆ; ನಾನು ಅವನನ್ನು ಶೋಧಿಸದೆ ಬಿಡಲಿಲ್ಲ. ಯಾವನು ಬಾನೊಬ್ಬ ಅಜ್ಞಾನಾಂಧ ಡೋಂಗಿಗೆ ಕೂಡ ಕಾಣುತ್ತಾ ನೆಂದು ಅನ್ನುತ್ತಾರೆಯೋ, ಅವನು ಜಗಜರು ರ್ಭೂತನಾದ ಈ ಸೂರ್ಯನಿಗೆ ಕಾಣಬಾರದೆಂಬದು ಬಹಳ ಸೋಜಿಗದ ಸಂಗತಿಯಾಗಿರುತ್ತದೆ.

ಹೀಗೆ ಸೂರ್ಯನು ನುಡಿದನು, ಆದರೆ ಈ ಭಾಷಣದ

ಕಡೆಕಡೆಯ ಭಾಗವು ಚಂದ್ರನಿಗೆ ಕೇಳಿಸಲೇ ಇಲ್ಲ. ಆಗ ಆ ಇಬ್ಬರ ರಥಗಳ ನಡುವೆ ಬಸತಿ ಆಂತರವಾಯಿತು. ನೂ ರ್ಯನ ರಥವು ಬಹು ಒತ್ತರದಿಂದ ನಡೆಯತೊಡಗಿತ.. ಹಾಗು ಚಂದ್ರನು ಕ್ರವು ಕ್ರಮವಾಗಿ ಹಿಂದೆ ಬೀ'ನರ ದನು. ಈ ಪ್ರಕಾರವಾಗಿ ಆ ಸೂರ್ಯ-ಚಂದ್ರರ ರರಗಲ್ ನಡುವಿನ ಅಂತರವು ಕ್ರಮೇಣ ಹೆಚ್ಚಾಗುತ್ತ ನಡೆದದ ರಿಂದ ಅವರೀರ್ವರ ಭಾಷಣವು ಸಹಜವಾಗಿಯೇ ಅಶಕ್ಯ ವಾಗಿ ಅದು ಕಟ್ಟಾಗಿಹೋಯಿತು.