ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತೀಯರ ಇತಿಹಾಸವು.


ದಕ್ಷಿಣ ಭಾರತ:- ಮು೦ದೆ ಹಾಗೆಯೇ ದಕ್ಷಿಣಕ್ಕೆ ಸಾಗಿದರೆ, ಎಡ ಬಲ ಭಾಗಗಳಲ್ಲಿ ಪೂರ್ವ ಪಶ್ಚಿಮ ಘಟ್ಟಗಳುಳ್ಳ ತೆ೦ಕಣದ ತಪ್ಪಲಸೀಮೆಯು ನಮಗೆ ಕಾಣುವದು. ಸಹ್ಯಾದ್ರಿ, ಕಪೋತ, ನೀಲ ಗಿರಿ ಮೊದಲಾದ ಪರ್ವತಗಳ ಸಾಲುಗಳು ತಮ್ಮ ಗಗನಚು೦ಬಿತವಾದ ವೃಕ್ಷಗಳಿ೦ದಲೂ, ದಟ್ಟಾದ ಹಳವು ಅರಣ್ಯಗಳಿಂದಲೂ, ಔಷಧ ವನ ಸ್ಪತಿಗಳಿಂದಲೂ ಕಣ್ಣು ಗಳೊಳಗೆ ಹೊಕ್ಕು ಮನವನಲ್ಲಾಡಿಸುವವು. ಇದೇ ಪರ್ವತ ಸಾಲುಗಳಿಂದ ಕೃಷ್ಣಾ, ತುಂಗಭದ್ರಾ, ಕಾವೇರಿ ಮುಂತಾದ ಪ್ರಚಂಡವಾದ ವುಣ್ಯನದಿಗಳು ಉಗಮ ಹೊ೦ದಿ, ಮು೦ದೆ ದಕ್ಷಿಣ ದೇಶದಲ್ಲೆಲ್ಲ ಹರಿದು, ತಮ್ಮ ಪ್ರವಾಹಗಳಿಂದ ಭೂಮಿ ತಾಯಿಗೆ ತುಷ್ಟಿಯನ್ನೂ ವುಷ್ಟಿಯನ್ನೂ ಕೊಡುತ್ತಿರು ವವ, ಕೃಷ್ಣಾ, ತುಂಗಾ, ಗೋದಾ ನದಿಗಳು ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ನಾಡುಗಳಿಗೆ ನೀರು ಪೂರೈಸುವ ಭಾರವನ್ನು ಹೊತ್ತಿದ್ದು, ಕಾವೇರಿಯು ತಮಿಳ ನಾಡಿನ ಗುತ್ತಿಗೆಯನ್ನು ಹೊತ್ತಿರುವಳು. ಇನ್ನೂ, ಕೆಳ ಕೆಳಗೆ ಹೋದಂತೆಲ್ಲ ಹಿಂದೂ ದೇಶದ ಅಗಲವು ಕಡಿಮೆಯಾಗುತ್ತಿರುವದರಿಂದ ಬಹು ಜನರಿಗೆ ಸಮುದ್ರದ ತಂಗಾಳಿಯನ್ನು ಭವಿಸುವ ಸೌಖ್ಯವೂ ದೊರೆಯುತ್ತದೆ. ನಮ ಘಟ್ಟದ ಸಾಲುಗಳು ಮಲಿಯಾಳದ ವರೆಗೂ ತಮ್ಮ ಕಾಲುಗಳನ್ನು ಚಾಚಿರುವದರಿ೦ದ, ಒಂದು ಕಡೆ ವಿಶಾಲವಾದ ಸಮುದ್ರದ ನೋಟ, ಆ ಕಡೆಯಿಂದ ಬೀಸುವ ತಂಗಾಳಿ, ಮತ್ತೊಂದು ಕಡೆ ದಟ್ಟಡವಿಗಳ ನೈಸರ್ಗಿಕವಾದ ರತ, ಇವೆರಡೂ ಒಂದಕೊಂದು ಕೂಡಿದ್ದರಿಂದ, ಮಲಿಯಾಳದ ಪ್ರದೇಶವು ಸ್ವಾಭಾವಿಕವಾಗಿಯೇ ಉಷ್ಣಕಟಿಬ೦ಧಕ್ಕೆ ಸಮೀಪವಿದ್ದರೂ, ದಕ್ಷಿಣದ ನಂದನವನವೆನಿಸುವಷ್ಟು ನೆತ್ರಾನಂದಕರವಾಗಿದೆ. ಉತ್ತರಹಿಂದೂ ದೇಶವು ಹೇಗೆ ತೀರ್ಥ ಕ್ಷೇತ್ರಾದಿಗಳಿ೦ದ ಸ೦ದಣಿಸಿರುವದೋ ಹಾಗೆಯೇ, ದಕ್ಷಿಣ ಹಿಂದೂ ದೇಶವಾದರೂ ಕಂಚಿ, ಮಧುರೆ, ಚಿದಂಬರಂ, ತಿರುಪತಿ, ರಾಮೇಶ್ವರ ಅವೇ ಮುಂತಾದ ಪಾವನ ಕ್ಷಮವಾದ ಪುರಾತನ ತೀರ್ಥ ಕ್ಷೇತ್ರಾದಿಗಳಿ೦ದ ಕಿಕ್ಕಿರಿದು ಬೆಳಗುತ್ತಿದೆ.

ನಮ್ಮ ಮಾತೃಭೂಮಿ :- ಈ ಮೇರೆಗೆ, ದೈವಿಕವಾದ ಈ