ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಧಾರ್ಮಿಕ ದಿಗ್ವಿಜಯ.

೩೩೩

ಮನುಷ್ಯನ ಆಯುಮrರ್ಯಾದೆಯ ಮೊದಲನೇ ಮೆಟ್ಟಿಲಿನಲ್ಲಿರುವಾಗಲೇ ಅಚಾರ್ಯರು ತಮ್ಮ ಪ್ರಜ್ಞಾ ಬಲದಿಂದ ನಡಿಸಿದ ಅಘಟಿತ ಕಾರ್ಯಕ್ಕಾಗಿ ಹಿಂದೂ ಜನರು ಅವರಿಗೆ ಎಷ್ಟು ಋಣಿಯಾಗಿದ್ದರೂ ಕಡಿಮೆಯೇ! ಈ ಧರ್ಮ ಸೂರ್ಯನು ಭಾರತೀಯ ಆಕಾಶದೊಳಗೆ ಯೋಗ್ಯ ಕಾಲಕ್ಕೆ ಮೂಡಿ ತನ್ನ ಪ್ರತಾಸಿಯಾದ ಕಿರಣಗಳಿಂದ ದುರ್ಜನರನ್ನು ಹೊಡೆದೋಡಿಸಿ, ಸಜ್ಜನರನ್ನು ಕಾಯ್ದು ಮೊರೆ ಕೇಳದಿದ್ದರೆ ಹಿ೦ದೂ ದೇಶದ ಸ್ಥಿತಿಯು ಏನಾಗುತ್ತಿತ್ತೋ ಹೇಳಲಿಕ್ಕೆ ಬಾರದು!