ಪುಟ:ಕಾದಂಬರಿ ಸಂಗ್ರಹ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಕಾದಂಬರೀ ಸಂಗ್ರಹ 1 . ಇನ್ನು ಉಜ್ಜಿ ತೊಳೆಯುತ್ತಿರುವವರು ಕೆಲವರು. ಹಳೆಯ ಸಾಧನಗಳನ್ನು ಜ್ಞಾಪಿಸಿ ಕೊಳ್ಳುತ್ತಿ ಆಸಿಗಳನ್ನು ಗಳಪಿಸುತ್ತಿರುವವರು ಹಲವರು. ಅನತಿಕಾಲದಲ್ಲಿಯೇ ಯೋದ್ದರುಗಳೆಲ್ಲರೂ ಸುಸಜ್ಜಿತರಾಗಿ ಸಾಲುಸಾಲಾಗಿ ನಿಂತು ಮುಂದು ಅಪ್ಪಣೆ ಯನ್ನು ನೆರವೇರಿಸುವುದಕ್ಕಾಗಿ ಕಾಲನಿರೀಕ್ಷಣೆಮಾಡುತ್ತಿದ್ದರು. ಊರಿನ ಜನಗಳಲ್ಲಿಯೂ ದೊಡ್ಡ ಗದ್ದಲವೆದ್ದುದು, ಸಮಾಚಾರವನ್ನು ಕೇಳಿ ದೊಡನೆಯೇ ಎಲ್ಲೆಲ್ಲಿದ್ದವರು ಅಲ್ಲಲ್ಲಿಯೇ ನಿಂತುಬಿಟ್ಟರು. ಎಲ್ಲರಲ್ಲಿಯೂ ಆಶ್ಚರ್ಯವು ತಾನಾಗಿ ತಾನೇ ಆಕ್ರಮಿಸಿಕೊಂಡುದು, ಬೀದಿಯಲ್ಲಿ ಆಟವಾಡುತಲಿದ್ದ ಬಾಲಕರೆ ಆ ರೂ, - ಎಲೋ ! ಬನ್ನಿ ರೋ! ಯುದ್ಧಕ್ಕೆ ಹೋಗುವಂತಿದೆ. ನಾವೂ ಸಹ ಪೊರ ಮಟ್ಟು ಅಗಳನ್ನು ಹೊಡೆದಟ್ಟುವ!” ಎಂದನ್ನ ೮ರಂಭ ಮಾಡಿದರು. ವೃದ್ಧರೆಲ್ಲರೂ, ಆವುದೋ ಒಂದು ಮಹೋತ್ಸವವು ಸವಿಾಪಗತವಾಯಿತೆಂದುಕೊಂಡರು. ಧನಾರ್ಥಿಗ ಳೆಲ್ಲರೂ, ತಾವು ಗಳಿಸಿದ ಸಂಪತ್ತನ್ನು ಭೂಗರ್ಭ ಮಾಡುವುದಕ್ಕೆ ಹೊರಟರು. ಯುವ ಕರೆಲ್ಲರೂ ಯುದ್ಘಾಪೇಕ್ಷಿಗಳಾಗಿ ಸೇನೆಯ ಹಿಂದೆ ಹೊರಡಲು ಅನುವಾದರು, ಸೀರ ಮಾತೆಯರೆಲ್ಲರೂ ರಾಜನಿಗೆ ಸಾಹಾಯ್ಯ ಮಾಡುವಂತೆ ತಂತಮ್ಮ ಪುತ್ರರನ್ನು ಪ್ರೇರೇ ೩ಸಿದರು. ವರ್ತಕರೆಲ್ಲರೂ ತಮ್ಮ ವ್ಯಾಪಾರಕ್ಕೆ ಎಲ್ಲಿಯಾದರೂ ಕುಂದುಬಂದೀತೆಂದು ಯೋಚಿಸುತ್ತಾ ಕುಳಿತುಬಿಟ್ಟರು. ಊರಲ್ಲಿ ಎಲ್ಲೆಲ್ಲಿ ನೋಡಿದರೂ ಗಲಭೆಯೇ ಕಂಡು ಬರುತ್ತಿದ್ದಿತು. ಅರಮನೆಯಲ್ಲೂ ಸೇವರ ಸೇವಕಿಯರ ಕೂಗಾಟ ! ಹುಚ್ಚು ಸಂಭ್ರಮ !! ರಾಣಿಯು ತಾನೇ ಸ್ವಂತವಾಗಿ ಪ್ರಯಾಣಕ್ಕೆ ಎಲ್ಲವನ್ನೂ ಅಣಿದಾಡತೊಡಗಿರುವಳು. ಅರಮನೆಯ ಧನವನ್ನೆಲ್ಲ ಒಂದು ಕಡೆ ಹೂಳಿಟ್ಟು ಅದನ್ನು ವಿಶ್ರವಸಿಂಹನಿಗೆ ತಿಳಿಸಿ ದುದಾಯ್ತು. ಇಷ್ಟೆಲ್ಲಾ ನಡೆದರೂ ಎಲ್ಲಿಗೆ ಹೋಗುವುದೆಂಬ ದು ಮಾತ್ರ ರಾಜಾ, ಮಂತ್ರಿ, ಮೋಹನನ ಗುಪ್ತಚಲನೋರ್ವ, ಇವರಿಗಲ್ಲದೆ ಮತ್ತಾವಪ್ರಾಣಿಗೂ ತಿಳಿ ಯದು, ಆದರೂ ಜನರ ಮಾತ್ರ ತಮ್ಮ ಮನಸ್ಸಿಗೆ ಬಂದಂತೆಲ್ಲಾ ಹೇಳಿಕೊಳ್ಳುತ್ತಿ ದ್ದರು. ಹೊರಡುವುದಕ್ಕೆ ಮುಂಚಿತವಾಗಿ ಊರು ಮತ್ತು ಅರಮನೆಗೆ ತನ್ನ ಕಾಯ ವುದಕ್ಕಾಗಿ ಸ್ವಲ್ಪ ಸೇನೆಯು ವಿಕ್ರಮಸಿಂಹಮಂತ್ರಿಯ ಅಧೀನಮಾಡಲ್ಪಟ್ಟದು. ಇಷ್ಟು ಹೊತ್ತಿಗೆ ಸೈನಿಕರು ತಮ್ಮ ತಮ್ಮ ನಾಯಕರ ಅಧೀನದಲ್ಲಿ ರಣಘೋಷ ವಂಗೈಯುತ್ತ ಅರಮನೆಯ ಮುಂದೆ ಬಂದು ನಿಂತರು. ಯೋರೆಲ್ಲರೂ ಆಗಸ ವನ್ನು ಭೇದಿಸುವ ಹಾಗೆ ಧ್ವನಿಮಾಡಿದರು. ಒಯು | ಭಗವತೀ ಸನಿಗೆ ಜಯವಾಗಲ್ಲ 117 .