ಪುಟ:ಕಾದಂಬರಿ ಸಂಗ್ರಹ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಳೆನಪಿಸಿ, wwwwwww | ಸರ್ವತಂತ್ರ ಸ್ವತಂತ್ರ !! ಹಾಗಿರುವಲ್ಲಿ ಪೋಲೀಸಿನವರು ತನ್ನನ್ನು ಹುಡುಕಿಕೊಂಡು ಬಂದರೆ ಹೆದರದಿರುವನೇ ? ಕಾಳಿಚರಣನು " ಸಾ ಮಿ ; ತಾವು ಈರೀತಿ ಭಯಪಟ್ಟರ ಪ್ರಯೋಜನವೇನೂ ಇಲ್ಲ ! ನಡೆದಿರುವ ಸಂಗತಿಗಳು ಎಂದಿಗಾದರೂ ಹೊರಬೀಳಲೇಬೇಕು !! ಇದುವರೆಗೂ ನಡೆದಿರುವ ಸಂಘಟನೆಗಳಲ್ಲಿ ನಿಮಗೆ ತಿಳಿದಿರುವುದೆಲ್ಲವನ್ನೂ ಮರೆಮಾಚದೆ ಹೇಳುವುದು ನಿಮ್ಮ ಕರ್ತವ್ಯ ! ಶಂಭುದತ್ತನು ಈಕಾರದಲ್ಲಿ ಸೇರಿರುವನೆಂದು ಹೇಳುವುದಕ್ಕೆ ಸಾಕ್ಷಿಗಳು ದೊರಕಿರುತ್ತದೆ. ಆತನ ಮನೆಯಲ್ಲಿ ನೀವು ಸರ್ವಾಧಿ ಕಾರಿಗಳು ! ನಿಮ್ಮ ತಿಳುವಳಕಗೆ ಬರದೆ ಆವಕಲಸವೂ ನಡೆಯ. ವಂತಿಲ್ಲ ಸತ್ಯಕ್ಕೆ ಎಂದಿಗೂ ಮೋಸವಿಲ್ಲವಾದುದರಿಂದ ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಕೊಡಿ ” ಎಂದು ಹೇಳಿದನು. ಈ ಮಾತುಗಳನ್ನು ಕೇಳದ ದೇವೇಶನಿಗೆ ಬಹು ಭಿತಿಯುಂಟಾಯಿತು ! Yಚರನು ಅವನನ್ನು ಮೇಲಿದ ಮೇಲೆ ಸಮಾಧಾನದಿಂದ ಪ್ರಶ್ನಿಸಿದನು. ಆ ಪ್ರಶ್ನೆಗೂ ಉತ್ತರವೇ ಬರಲಿಲ್ಲ ! ಕಾಳಿಚರನು, “ ಸಾಮಿ ! ತಾವು ಹೇಳಿದ Coತೂ ಸರಿಯೇ ! ನಾವು ಹೇಳಿಸುವವಿಧದಲ್ಲಿ ಹೇಳಸುವವು. ಹೇ ದರೂ ಕೊಲೆಪಾತಕರನ್ನು ಶಿಕ್ಷೆಗೆ ಗುರಿಮಾಡದೆ ಖಂಡಿತವಾಗಿಯೂ ಬಿಡುವದಿಲ್ಲ ! ಇನ್ನು ನಿಮ್ಮ ಪರಿಣಾಮವು ನೆಟ್ಟಗಾಗುವುದಿಲ್ಲ ! " ಎಂದು ಹೇಳಿ, ಸ್ವಲ್ಪ ಕೋಪವುಳ್ಳವನಂತೆ ನಟಿಸಿದನು. ದೇವೇಕನಿಗೆ ಬಹುಕಷ್ಟವಾಯಿತು ! ನನ್ನನ್ನೇನು ಕೇಳುವನೋ ? ನಾನೇನು ಹೇಳಲಿ ? ನನ್ನ ಹೇಳಿಕೆಯಿಂದ ಶಂಭುದನಮೇಲಿನ ಅಪವಾದವು ಯಾವಸ್ಥಿತಿಗೆ ಬರುವದೊ ! ನನಗೇನು ತೊಂದರೆಯುಂಟಾಗುವದೊ ? ಅಲ್ಲದೆ ನನ್ನ ಮಾತುಗಳನ್ನು ಪರಿಶೀಲಿಸುವವರಾರು ? ನಾನು ಶಂಭು ದತ್ತನ ಪಕ್ಷಪಾತಿಯೆಂದೇ ಹೇಳುವರಲ್ಲದೆ ನನ್ನ ಮಾತಿಗೆ ಬೆಲೆಯನ್ನು ಕಟ್ಟುವರೇ ? ಪ್ರಪಂಚದಲ್ಲಿ ಚಂಚಲಳಾದ ಲಕ್ಷ್ಮಿಯ ಸಹವಾಸ ಕೆಟ್ಟದು. ಧನವೆಲ್ಲವೂ ನನ್ನ ಅಧೀನದಲ್ಲಿ ಇದ್ದುದರಿಂದ ನನಗೇನಾಗುವುದೋ ? ಏಕೆಂದರೆ ಅದು ನನ್ನ ಧೀನದಲ್ಲಿದ್ದುದನ್ನು ಎಲ್ಲರೂ ಎಲ್ಲರು ! ಅಲ್ಲದೆ ಈಗಿನ ಕಾಲದಲ್ಲಿ ಅಪರಾಧಿಯು ಸಿಗದಿದ್ದರೆ ನಿರಪರಾಧಿಯನ್ನಾದರೂ