ಪುಟ:ಕಾದಂಬರಿ ಸಂಗ್ರಹ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಕೊಂಡು ಅವರೀಶ್ವರವ್ವನನ್ನು ಹಿಂಬಾಲಿಸಿದನು. ಆ ವ್ಯಕ್ತಿಯು ಬಹು ವೇಗ ವಾಗಿ ಓಡುತ್ತಿದ್ದುದರಿಂದ, ಕಾರ್ಗತ್ತಲೆಯಲ್ಲಿ ಅವನು ಸುಲಭವಾಗಿ ತಪ್ಪಿಸಿಕೊ ಳ್ಳಲು ಸಂಭವವಿದ್ದುದರಿಂದಲೂ ಕಾಳೀಚರಣನು ಉಪಾಯರಹಿತನಾಗಿ ತನ್ನ ಪಿಸ್ತೂ ಲಿನಿಂದ ಅವನನ್ನು ಹೊಡೆದು ಕೆಡವಿದನು, ಕಾಳಿಚರಣನು, ಬಿದ್ದ ವ್ಯಕ್ತಿಯ ಸಮಾಸಕ್ಕೆ ಹೋಗಿ, ಅವನನ್ನು ನೋಡಿ ಅವನು ತನಗೆ ಕೇವಲ ನೂತನ ವ್ಯಕ್ತಿಯಾಗಿ ಕಂಡುಬಂದುದರಿಂದ ಆಶ್ಚರ್ಯಚಕಿತ ನಾಗಿ, “ ನೀನಾರು ??” ಎಂದು ಕೇಳಿದನು. ವ್ಯಕ್ತಿಯು ಇವನ ಮುಖವನ್ನು ನೋಡಿ ಜುಗುಪ್ಪೆಯಿಂದಲೂ, ಸಂಕಷ್ಟದಿಂದಲೂ, ಇಬ್ಬನಾಗಿ ಆವಮಾತನ್ನೂ ಆಡದೆ ಇದ್ದನು, ಅವನನ್ನು ಸ್ವಲ್ಪ ಉಪಚರಿಸಿ, “ ನೀನಾರು ? ಖಂಡಿತವಾಗಿ ಹೇಳು, ಇನ ತ್ಯಲ್ಪ ಕಾಲದಲ್ಲಿಯೇ ನೀನೀ ನಶ್ವರವಾದ ದೇಹವನ್ನು ಬಿಟ್ಟು ಹೊರಡುವವನಾಗಿರುವೆ. ನೀನೇ ಮೃತನಾದ ಮೇಲೆ ಮತ್ತಾರು ಕೆಟ್ಟರೂ, ಬದುಕಿದರೂ ಕೂಡ ನಿನಗೇನು ತಾನೆ ಆಗಬಲ್ಲದು ?” ಎಂದು ಮೊದಲಾಗಿ ಅನೇಕ ಸಾಂತ್ವ ವಚನಗಳಿಂದ ಅವನನ್ನು ಸಮಾಧಾನಗೊಳಿಸಲು, ಆ ವ್ಯಕ್ತಿಯು ಸ್ವಲ್ಪ ವ್ಯಧಿತನಾಗಿ, ನಾನಾವ ವಿಧವಾದ ತಪ್ಪನ್ನೂ ಮಾಡಿದವನಲ್ಲ. ನಾನಿ ಪಾಷಂಡರ ಪಾದಸೇವೆಯಲ್ಲಿ ಸಿಲುಕಿ ಹೀಗಾದೆ !?? ಎಂದಂದು ಕಂಬನಿ ಗರೆಯಲಾರಂಭಿಸಿದನು. ಅವನ ಸ್ಥಿತಿಯನ್ನು ಕಂಡು ಅವನನ್ನು ಅತಿಶ ಯವಾದ ಮಾತುಗಳಿಂದ ಹೆ ಗಳಿ ನಿಜಸ್ಥಿತಿಯನ್ನು ಹೊರಪಡಿಸಬೇಕೆಂಬ ಅಪೇಕ್ಷೆಯು ಉಂಟಾಗುವಂತೆಸಗಿದುದರಿಂದ ಅವನು ಸಂಕ್ಷೇಪವಾಗಿ, ಆ ಗುಂಪಿಗೆ ಯಜಮಾನನಾಗಿ ಅಂತಹ ತಂತ್ರಗಳನ್ನೂ, ಭಯಂಕರ ಕೃತ್ಯಗಳನ್ನೂ ನಡೆಸುತ್ತಿದ್ದವನು ಪುರಂದರ ನೆಂಬುವವನೆಂತಲೂ, ಅವನೂ ಭುಜಂಗನೂ ಸೇಲ ಪ್ರೇಮಚಂದ್ರ, ಶಂಭುದು ಮತ್ತು ಶರಚ್ಚಂದ್ರರ ಆಸ್ತಿಗಳನ್ನೆಲ್ಲ ಅಪಹರಿಸಲು ಅಷ್ಟೆಲ್ಲ ಮಾಡಿದರೆಂತಲೂ ಅವರ ಕಪಟ ತಂತ್ರಗಳಿಗೆ ಸಿಲುಕಿ ಅವರೊಂದಿಗೆ ಕಾವೇರೀ ನದಿಯನ್ನು ದಾಟುತ್ತಿದ್ದಾಗ ಅವರು ಮೋಸದಿಂದ ದೋಣಿಯನ್ನು ಮುಳುಗಿಸಿ ಪ್ರೇಮಚಂದ್ರನನ್ನು ಮುಳಿಗಿಸಿದರೆಂತಲೂ, " 'ನು ಅವರು ಕೈಸೆರೆಯಾಗಿರುವನೆಂತಲೂ ; ತಮ್ಮ ಪ್ರಯತ್ನಗಳಾವುವೂ ನಡೆ ಇಂದ ಭುಜಂಗನು ವಿಜಯಿನಿಯನ್ನೂ, ಪುರಂದರನು ವಿಲಾಸಿನಿಯನ್ನೂ, ಲಿಂದಲಾದರೂ ಅಪರಿಶುದ್ಧರನ್ನಾಗಿಸಿ ಬಿಟ್ಟರೆ ಸತ್ತು ಅಗ್ರಸ್ತರಾದ * ಕಬ್ಬ, ವ.೧೯೯ಣಿ ಣ - ಕೃತ್ಯಗಳನ್ನೆ " ಎನಜಿಸಿ ಆವ *ವಿತೆಯ 'ಎಗಳ ಆಗರವೆಂಬ: ಆತಿ೬ಸಿ, ಅವರನ್ನು ಊರಿ * ಗೋಪ್ಯವಾಗಿ ಇರಿಸಿರುವರೆಂತಲೂ, ತಿಳಿಸಿದನಲ್ಲದೆ ಪುರಂದ