ಪುಟ:ಕಾದಂಬರಿ ಸಂಗ್ರಹ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ ಕೊಟ್ಟರೆ ಕೊಡಿ, ಇಲ್ಲವೆ ನನ್ನ ಮನೆಯನ್ನು ಬಿಡಿ. ಈಗಲೆ ಬಿಟ್ಟು ಹೊರಡಿ. ನನ್ನ 'ವಸ್ತುವನ್ನು ನಾನು ತೆಗೆದುಕೊಳ್ಳಬೇಕೆಂದರೆ ಅಡ್ಡಿ ಮಾಡುವುದು ಯಾವ ನ್ಯಾಯ? ಘೋವಾ ಹೆಂಗಸರಿರುವರೆ ? ನೀವೇನು ಮುಸಲಮಾನರೇ ? ಆ ಕೋಣೆಯಲ್ಲೇನಾ ದರೂ ಖನಿ ಮಾಡಿದ್ದೀರ ? ನಿಮ್ಮ ಪದಾರ್ಥಕ್ಕೆ ಈಷದಪಿ ಬಾಧಕವಿಲ್ಲದಂತೆ ನಮ್ಮ ಕೆಲಸವನ್ನು ಮಾಡಿಕೊಳ್ಳುವೆವೆಂದರೆ ಅಡ್ಡಿ ಪಡಿಸಲು ನೀವಾರನ್ನಾದರೂ ಅಲ್ಲಿ ಬಚ್ಚಿಟ್ಟಿರುವಿರ ? ಏನಿದೆ ? ಅದೇನು ಬಿಡುವಿರೋ ಇಲ್ಲವೋ ? ” ಎಂದು ಕೇಳಲು ಪುರಂದರನಿಗೆ ಅತ್ಯುಗ್ರವಾದ ಕೋಪವುಂಟಾಯಿತು. ಮಹದಾಶದಿಂದ, ನಾವೆಂ ತಹವರಾದರೇನು ? ಒಳಗೆ ಹೋಗಲು ಬಿಡುವುದಿಲ್ಲ. ನ್ಯಾಯವಾಗಿ ಹೊರಗೆ ಹೋಗುವುದಾದರೆ ಹೋಗಿ, ಇಲ್ಲವಾದರೆ ಕತ್ತು ಹಿಡಿದು ತಳ್ಳಿಸಿಬಿಡುವೆವು.” ಎಂದು ಹೇಳಿದನು, ಯಜಮಾನನಿಗೆ ಕೋಪವು ಮಿತಿಮೀರಿತು. “ ಏನಿರಯ್ಯಾ ! ನೀವೇನೊ ಸಂಭಾವಿತರೆಂದು ಮನೆಯನ್ನು ಕೊಟ್ಟಿದ್ದಾಯಿತು, ಸರಿ ! ಸರಿ ! ಒಳ್ಳೇ ದೊಡ್ಡಸ್ತಿಗೆ! ನಮ್ಮ ಮನೆಯಿಂದ ನಮ್ಮನ್ನೆ ಕತ್ತು ಹಿಡಿದು ತಳ್ಳಿಸೋದು” ಎಂದು ಹೇಳುತ್ತ ಹೊರಗೆ ಬಂದರು. ಆ ವೇಳೆಗೆ ತಾಂಣಿರಾಯರು ಆಕಡೆ ಹೋಗುತ್ತಿರಲು, ಆ ಯಜಮಾನನು ರ್ಇಸ್ಪೆಕ್ಟರ್' ಸಾಹೇಬರನ್ನು ಕರೆದು, “ ರಾಯರೆ ! ಈತನ ಧೂರ್ತತೆ ಯನ್ನು ನೋಡಿರಿ ! ಎಂದಂದು ನಡೆದ ಸಂಗತಿಯನ್ನೆಲ್ಲ ಹೇಳಲು, ರ್ಇಸ್ಪೆಕ್ಟರು ಸಮಾಧಾನವನ್ನು ಹೇಳುವುದಕ್ಕೋಸುಗ ಮನೆಯನ್ನು ಪ್ರವೇಶಿಸಿದರು, ಭುಜಂಗನೂ, ಪುರಂದರನೂ, ರ್ಇ ಸ್ಪೆಕ್ಟರನ್ನು ನೋಡಿ ಕೇವಲ ವಿಷಣ್ಣವದನ ರಾದರು. ಪುರಂದರನು ರ್ಇಸ್ಪೆಕ್ಟರನ್ನು ನೋಡಿ, ತಾವಿಲ್ಲಿಗೆ ಬಂದುದೇಕೆ ? ಎಂದು ಪ್ರಶ್ನಿಸಿದನು. ಇ೯ ಸ್ಪೆಕ್ಟರು, “ ಇಲ್ಲೇ ಹೋಗುತ್ತಿದ್ದನು. ಇವರು ಕರೆದ ರಾದುದರಿಂದ ಸುಮ್ಮನೆ ನೋಡಬೇಕೆಂದು ಬಂದೆ ? ?” ಎಂದಂದರು, ಪುರಂದರನು ಮನೆಯ ಯಜಮಾನನ್ನು ನೋಡಿ, 14 ಸ್ವಾಮಿ, ತಮ್ಮ ಮನೆಗೆ ವಾಸಕ್ಕೆ ಬಂದುದು ನನ್ನ ತಪ್ಪು. ಏನಾದರಾಗಲಿ ! ನಿಮ್ಮೊಂದಿಗೆ ಮಾತೇನು ? ನಿಮ್ಮ ದುಡ್ಡನಿದ್ದರೂ ಕಿತ್ತುಕೊಂಡು ಹೋಗುವಿರಂತೆ ? ಸ್ವಲ್ಪ ತಾಳಿ, ಎಂದು ಹೇಳಿ ಒಳಗೆ ಹೋದನು. ಮತ್ತೆ ಹಿಂದಿರುಗಲೇ ಇಲ್ಲ! ಸ್ವಲ್ಪ ಕಾಲ ಕಾಯ್ದು ಇ೯ಸ್ಪಕ್ಟರ್ ಸಾಹೇಬರು, ಈ ಅವರೆಲ್ಲ ಸರಿಪಡಿಸಿ ಕೊಡುವರು, ಅದಕ್ಕೆ ಅವರಿನ್ನೂ ಒರಲಿಲ್ಲವಯ್ಯಾ, ನಿಮ್ಮ ಕೆಲಸಮಾಡಿಕೊಂಡ ಹೋಗಿ ! ” ಎ: ದಂದು ಮೇಲಕ್ಕೇಳುವಷ್ಟರಲ್ಲಿಯೇ, ಒಳಗೆ 4 ಘಂ' ಎಂದು ಬಂದೂ