ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ ೭೯
ಒಂದರ್ಧ ಕ್ಷಣ ನಿಂತಿತ್ತು. ಅರ್ಧವೇ ಕ್ಷಣ. 'ಮರುಳೆ!' ಎಂದು ತನ್ನ ಮನಸ್ಸನ್ನು ಕಟುವಾಗಿ ಜರೆದು, ರಾಯಸವನ್ನು ಆತ ತೆರೆದಿದ್ದ. ಓದಿದಾಗ, ‘ಶಿವ ಅಗ್ನಿಪರೀಕ್ಷೆಯೊಡ್ಡುತಿರುವನಲ್ಲಾ' ಎಂದು ವಿಸ್ಮಯವಾಯಿತು. ಆ ವಿಸ್ಮಯ ಭಾವವನ್ನು ತಡವಿಲ್ಲದೆ ತೊಡೆದುಹಾಕಿತು, ತಾನು ಮುಂದಿಡಬೇಕಾದ ಹೆಜ್ಜೆಯನ್ನು ಕುರಿತು ತೀರ್ಮಾನ ಕೈಕೊಂಡ. ಗಂಭೀರವಾಗಿ ಆತ ಕೇಳಿದ: “ನಿನ್ನ ಹೆಸರೇನು?” "ಶಂಕರಪ್ಪ, ಚಾವಡಿಕಾರ." ಅಪರಂಪಾರನ ಒಳಗಿನದೊಂದು ಸೂಕ್ಷ್ಮ ತಂತಿಯನ್ನು ಸ್ಪಂದಿಸಿತು. ದೂತರ ಮುಖ್ಯಸ್ಥನ ಉತ್ತರ. ಗವಿಯ ಆಳದಲ್ಲಿ ಹೆಪ್ಪುಗಟ್ಟಿದ ನೆನಪೊಂದು ಮಿಸುಕಿತು. ನಿಧಾನವಾಗಿ ಆತನೆ೦ದ : "ಶಂಕರಪ್ಪ...ಶಂಕರ. ಆಪದ್ಬಾಂಧವ. ದೇವರ ಹೆಸರು." ಸಮಸ್ಯೆಗಳು ಬಗೆಹರಿದಿದ್ದ ಆ ಸಂದರ್ಭದಲ್ಲಿ. ಅಪರಂಪಾರನ ನುಡಿಯುವ ಪ್ರತಿಕ್ರಿಯೆ ಯನ್ನೂ ಶಂಕರಪ್ಪನಲ್ಲಿ ಉಂಟುಮಾಡಲಿಲ್ಲ. ಅವನೆಂದ : "ಅಯ್ಯನವರಿಗೆ ಯಾವಾಗ ಅನುಕೂಲವಾಗತದೊ__" ಅಪರಂಪಾರನ ಹುಬ್ಬಗಳು ಗಂಟಿಕ್ಕಿದುವು. “ಬರತೇವೆ. ಅಕ್ಷತೃತೀಯೆ ದಾಟಿದಮೇಲೆ ನಮಗೆ ಮನಸಾದಾಗ ಬರತೇವೆ." "ಇಲ್ಲಿ ಮೇನೆ ಇಲ್ಲದ ಪಕ್ಷದಲ್ಲಿ ಮಡಕೇರಿಯಿಂದ ಕಳಿಸತಾರೆ.” "ಮೇನೆ! ನಮಗೆ ? ಹರ ತನ್ನ ಭಕ್ತರ ತಿರಿವಂತೆ ಮಾಡುವ, ನಾವು ನಡೆದು
ಬರುತೇವೆ."
"ತಮ್ಮ ಮೈಗಾವಲಿಗೆ..." "ಮೈಗಾವಲು? ಹಹ್ಹ...ನಾವೇನು ದೊರೆಗಳೆ?" "ದಾರಿ ತೋರಿಸೋದಕ್ಕಾದರೂ__" "ಮಹದೇವನಿರತಾನೆ. ದಾರಿ ಕಾಣೆನಲ್ಲಾ ಅಂದರೆ, ಹೀಗೆ ಬಾ ಅನ್ನುತಾನೆ.ಎಡವಿ
ದರೆ ಕೈಹಿಡಿದು ಎತ್ತುತಾನೆ."
ಇದು ಎರಡರ್ಥಗಳ ಮಾತು ಎಂಬುದನ್ನು ಶಂಕರಪ್ಪ ಗ್ರಹಿಸದಾದ. ನೆರೆದ ಇತರರ ಅರಿವಿಗಂತೂ ಅದು ದೂರವಾದದ್ದು. ಅವರು ಏಕಕಂಠದಿಂದ ಅಂದರು : "ಸಾಜ, ಸಾಜ." ದೂತರನ್ನು ಕುರಿತು ಅಪರಂಪಾರನೆಂದ: "ಇನ್ನು ವಿರಮಿಸಿಕೊಳ್ಳಿ. ಇಷ್ಟ ಬಂದಾಗ ನೀವು ಹೊರಡಬಹುದು. ನಾವು ಬೇಗನೆ ಬರತೇವೆ ಅಂತ ಕೊಡಗಿನ ಅರಸರಿಗೆ ತಿಳಿಸಿರಿ." ರಾಜನ ಅನುಜ್ಞೆಯನ್ನು ಬಹುಮಟ್ಟಿಗೆ ತಾನು ಈಡೇರಿಸಿದಂತಾಯಿತೆಂದು ಶಂಕರಪ್ಪ
ನಿಗೆ ಸಂತೋಷವಾಯಿತು.