ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಭಾರತೀಯರ ಇತಿಹಾಸವು. ಇಡೀ ಭೂಮಂಡಲಕ್ಕೆ ಎಂದು ಕಣ್ಣು ಕಾಣದ ಈ ಉಪನಿಷತ್ತಾಲ ದಂಧ ಜ್ಞಾನದ ಸುಗ್ಗಿಯ ಕಾಲವನ್ನು ಕುರಿತು ನಾವು ಎಷ್ಟು ಪ್ರಶಂನಾ ಪೂರ್ವಕವಾಗಿ ಹೊಗಳಿದರೂ ಕಡಿಮೆಯೇ ಸರಿ! ಉಪನಿಷತ್ತಾಲ ವೆಂದರೆ, ಅರ್ಯ ಧರ್ಮ ಕ್ಷದ ಫಲ ಸುಗ್ಗಿಯ ಕಾಲವು. ಈ ಕಾಲ ದಲ್ಲಿ ಅರ್ಯ ಧರ್ಮಕ್ಕೆ ಅತ್ಯಂತ ಸವಿಯಾದ ಫಲಗಳು ಬಿಟ್ಟ ವು; ಮತ್ತು ಆ ಫಲಗಳು ಆರ್ಯ ತತ್ವ ಜ್ಞಾನವನ್ನೆ ಅಮರಗೊಳಿಸಿದವು. ಆರ್ಯ ತತ್ವಜ್ಞಾನಕ್ಕೆ ಉಪನಿಷತ್ತುಗಳ ಬೆಂಬಲವಿಲ್ಲದಿದ್ದರೆ ಅದು ಪೂರ್ಣ ಸ್ಥಿತಿಯನ್ನ ಡರುತ್ತಿರಲಿಲ್ಲ, ಅಥವಾ ಅದು ಈಗಿನಷ್ಟು ನಿರ್ಭಯ ದಿಂದ ಜಗತ್ತಿನಲ್ಲಿ ಓಡಾಡಿ, ಪಾಶ್ಚಾತ್ಯ ರ೦ಧ ಭೌತಿಕವಾದದ ಭಕುತರಿಗೆ ಕೂಡ ಅನಂದವನ್ನೀಯುತ್ತಿರಲಿಲ್ಲ. ಪಾಶ್ಚಾತ್ಯ ತತ್ವಜ್ಞಾನಿಗಳೆಂದರೆ ಸ೦ಶಯವಾದಿಗಳು, ನಾಸ್ತಿಕವಾದಿಗಳು; ಅಂಥವರು ಸಹ ಉಪನಿಷ ತುಗಳ ಅಧ್ಯಯನದಿಂದ ಹುಟ್ಟು ಹಿಡಿದಂತಾಗಿ ಈ ಹೊತ್ತು ಅವುಗಳ ಮಹಿಮೆಯನ್ನು ಬಾಯಿ ತು೦ಬ ಹೊಗಳಿ ಹಾಡುತ್ತಿದ್ದಾರೆ. ಈ ಮೇರೆಗೆ ಉಪನಿಷತ್ತುಗಳು ಅಮರವಾಗಿರು ವವಲ್ಲದೆ, ಕೇಳುವವರನ, ಓದು ವವರನ್ನೂ ಸಹ ಮೈ ತುಂಬ ಕಡಲದಿ೦ದ ಕತೆ ಖಾಯಿ ಸಲಿಕ್ಕೆ ಸಮ ರ್ಧವಿರುವ ಸ೦ಗತಿಯು ಅದರಲ್ಲಿಯೇ ಬೆಳಗುವ ಬಭೂ ಭರಿತವಾದ ಕಥೆಗಳಿ೦ದ ಅನುಭವಕ್ಕೆ ಬರುತ್ತಿದೆ. ಸತ್ಯಕಾಮ ಜಾಬಾಲೀ ಕಥೆ:- ಉವನಿಷತ್ತಿನಲ್ಲಿ ಸತ್ಯಕಾಮ ಬಾ ಬಾಲಿಯ ಕಥೆಯ ದು ಬಹು ಬೋಧಪ್ರದ ಈ ಧಿರೋದಾತ್ರವೂ ಆಗಿದೆ. ಅದರ ತಾತ್ಪರ್ಯವು ಕೆಳಗೆ ಕಾಣಿಸಿದಂತಿದೆ. ಸತ್ಯಕಾಮ ನೆಂಬ ಒಬ್ಬ ಕುಮಾರನು ತನ್ನ ತಾಯಿಯಾದ ಬಾ ಬಾಲಿಯನ್ನು ಕುರಿತು, ( ಅಮಾ ಗುರುವಿನ ಬಳಿ ಹೆ ಗಿನಿಂತು ಜಾ ಸ ಸ ಸೆಯ ಬೇಕೆಂಬ ತವಕವು ನನಗುಂಟಾಗಿದೆ; ಆದುದರಿಂದ ನನ್ನ ಗಾತ್ರ ಯಾವುದು ? ತಂದೆ ಯಾರು ? ಎಂಬದನ್ನು ದಯವಿಟ್ಟು ಹೇಳು” ಎಂದನು. ಅದಕ್ಕೆ ತಾಯಿಯಾದ ಜಾ ಬಾಲಿಯು ( ಮಗು! ನನಗೆ ನಿನ್ನ ತಂದೆಯ ಕುಲ ಗೋತ್ರಗಳು ಗೊತ್ತಿಲ್ಲ; ಪ್ರಾಯ ದೊಳಗೆ ಮನೆ ಮನೆಗಳಲ್ಲಿ ತೊತ್ತಾಗಿ ದುಡಿಯುತ್ತಿರುವಾಗ ನಾನು ನಿನ್ನನ್ನು ಹತ್ತೆನು; ನಿನ್ನ ಹೆಸರು ಸತ್ಯ