ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಭಾರತೀಯರ ಇತಿಹಾಸವು.

ಗಿನ ಮಾತಲ್ಲ; ನಾನು ವನವಾಸಕ್ಕೆ ಹೋಗಬೇಕೆಂದೇ ಈಶ ಸಂಕಲ್ಪವಿದೆ; ನೀನೇಕೆ ಇಷ್ಟೊಂದು ಮನಸಿಗೆ ತಾಪ ಮಾಡಿಕೊಳ್ಳುವಿ;ನನಗಿನ್ನೂ ವನಕ್ಕೆ ನಾಗಿ ಜಗತ್ತಿಗೆ ಕ್ಷೇಮವಾಗುವಂಧ ಅನೇಕ ಕಾರ್ಯಗಳನ್ನು ಜರುಗಿಸಬೇಕಾಗಿದೆ; ಆದುದರಿಂದ ನೀನು ವ್ಯರ್ಥ ದುಃಖಿಸಬೇಡ" ಎಂದು ಹೇಳಿದ್ದನ್ನು ನೋಡಿದರೆ, ಶ್ರೀರಾಮಚಂದ್ರನಿಗೆ ತಾನು ಅವತಾರ ತೊಟ್ಟು ಬಂದಿರುವ ಅರಿವು ಇತ್ತೆಂದು ವ್ಯಕ್ತವಾಗುತ್ತದೆ. ಅಂಥಿಂಥವರಿಗಾದರೆ, ಇಂತಹ ಕೆಚ್ಚೆದೆಯೂ ಇ೦ತಹ ಅಚಲವಾದ ಶಾ೦ತಿಸಮಾಧಾನಗಳೂ ಬರಲಿಕ್ಕೆ ಸಾಧ್ಯವಿಲ್ಲ. ಶಾ೦ತಿನಾಗರರಾದ ಶ್ರೀಸೀತಾರಾಮ ಚಂದ್ರರು ಲಕ್ಷ್ಮಣನನ್ನೊಡಗೂಡಿ ವಲ್ಕಲವಸ್ತ್ರಗಳನ್ನುಟ್ಟುಕೊಂಡು ವನವಾಸಕ್ಕೆ ಹೋಗುವದೂ, ಅಲ್ಲಿ ಕೋತಿ ಮ೦ಗಗಳೊಡನೆ ಸಖ್ಯ ಬೆಳೆಸುವದೂ, ಅವು ಶ್ರೀರಾಮಚಂದ್ರನ ಕಾರ್ಯಕ್ಕೆ ನೆರವಾಗುವದೂ, ಲಂಕಾಧಿಪನಾದ ರಾವಣನು ಸೀತಾದೇವಿಯನ್ನು ಲಂಕೆಗೆಕದ್ದೊಯ್ಯವದೂ, ಶ್ರೀರಾಮಚಂದ್ರನು ಕೋತಿಗಳ ದಂಡನ್ನು ಕಟ್ಟಿಕೊ೦ಡು ರಾಕ್ಷಸರಾದ ರಾವಣಾದಿಗಳನ್ನು ಸ೦ಹರಿಸುವದೂ, ಈ ಶತ್ರು ಸಂಹಾರ ಕಾರ್ಯದೊಳಗೆ ಶ್ರೀರಾಮಚಂದ್ರನಿಗೆ ಸೃಷ್ಟಿಯ ಜಡ, ಮೂಕಪ್ರಾಣಿಗಳು ಸಹ ಎದ್ದು ಚಟುವಟಿಕೆಯಿಂದ ನೆರವಾಗುವದೂ, ಸೀತಾದೇವಿಯ ಅಗ್ನಿ ಪರೀಕ್ಷೆಯೂ , ರಾಮನಿಗಾದ ಸೀತಾ ವಿರಹ ಅವೆಲ್ಲ ಆಶ್ಚರ್ಯಕರವಾದ ಸಂಗತಿಗಳನ್ನು ಕುರಿತು ಸೂಕ್ಷ್ಮವಾಗಿ ಅಲೋಚಿಸ ತೊಡಗಿದರೆ, ಶ್ರೀರಾಮನು ಸಾಕ್ಷಾತ್ ಭಗವಂತನೇ ಎಂದೂ, ಅವನು ಜಗದುದ್ಧಾರಕ್ಕಾಗಿ ಆಯೋಧ್ಯೆಯ ಅರಸನಾದ ದಶರಥರಾಯನ ಹೊಟ್ಟೆಯಲ್ಲಿ ಹುಟ್ಟಿದ್ದನೆಂದೂ ಅನೇಕ ಋಷಿಗಳ ವಾಕ್ಯಗಳಿಂದ ಖಂಡಿತವಾಗಿ ಮನದಟ್ಟಾಗುತ್ತದೆ. ಇದು ದೈವಿಕ ಮಾತಾದರೂ, ವ್ಯಾವಹಾರಿಕ ಜನರಿಗೆ "ಗೃಹಸ್ಥಾಶ್ರಮವು ಸ್ವಂತ ಸುಖಕ್ಕಲ್ಲದೆ, ಸಮಾಜ ಕ್ಷೇಮಕ್ಕಾಗಿರುವದೆಂದೂ, ಕುಟುಂಬಕ್ಕಾಗಿಯೂ, ಸಮಾಜಕ್ಕಾಗಿಯೂ, ಸ್ವಾರ್ಧಾರ್ಪಣೆ ಮಾಡುವದರಲ್ಲಿಯೇ ಮನುಷ್ಯನ ಮನುಷ್ಯತ್ವವಿರುವದೆ೦ದೂ, ಲೋಕಾರಾಧನೆಯೇ ಮನುಷ್ಯನ ಜೀವಿತದ ಮುಖ್ಯ ಗುಟ್ಟೆಂದೂ, ಅದನ್ನು ಸಾಧಿಸಲಿಕ್ಕೆ ಕೈಹಿಡಿದ ಹೆಂಡತಿಯನ್ನೂ