ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

១០ ប ಭಾರತೀಯರ ಇತಿಹಾಸವು. ದೂರಕ್ಕಿರಲಿ; ಕಾಡಿನ ಮೇಲೆ ಕಣ್ಣಿಟ್ಟು, ದೇವರು ಯಾವಾಗ ಕಣ್ಣು ಮುಚ್ಚುವನೋ ಎಂದು ಕಾಯ್ದು ಕೊಂಡಿರುತ್ತಾನೆ. ಭಾರತದ ಕಾಲದ ಮಾತು ಹಾಗಿರಲಿ; Coo-೧೫೦ ವರ್ಷಗಳ ಚೆಯ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಮನಸ್ಸು ದ೦ಗು ಬಡಿಯುತ್ತದೆ; ಆಗ್ಗೆ ನಮ್ಮ ಸಮಾಜ ದೊಳಗೆ ೧೦೦-೧೧೦ ವರ್ಷದ ಮುಪ್ಪಿನ ಮುದುಕರು ಸಹ ಸಾಕಷ್ಟು ಗಟ್ಟಿ ಗರ, ಹೆಚ್ಚು ಹುರುಪಿನಿಂದ ದುಡಿಯುವವರೂ ಇದ್ದರು; ಈ ನೋಟವು ಇತ್ತೀಚೆ ೫೧ ವರ್ಷಗಳಲ್ಲಿ ಒಮ್ಮೆಲೆ ನಡೆಯಾ ಡುವ ಚಿತ್ರಪಟದೊಳಗಿನ ನೋಟದಂತೆ ಅದೃಶ್ಯವಾಗಿ, ಮನು ವ್ಯನು ೫೦ ವರ್ಷ ಬಾ ಇರುವದು ದೊಡ್ಡದೊಂದು ಪುಣ್ಯದ ಸಂಗತಿಯಾ ಗಿದೆ. ಇದಕ್ಕೆಲ್ಲ ಕಾರಣವೇನಿರಬಹುದು ? ನಮ್ಮನ್ನು ಬೆನ್ನಟ್ಟಿರುವ ಕ್ಷಾ ಮ- ಪರಂಪರೆಗಳೆ ಅಲ್ಲವೇ ? ಇರಲಿ. ಭಗವಾನ್ ಶ್ರೀ ಕೃಷ್ಣನು ಪರಂಧಾಮಕ್ಕೆ ತೆರಳುವ ಕಾಲಕ್ಕೆ ಅವನ ವಯಸ್ಸು ೧೨೦ ಆಗಿತ್ತು; ದ್ರೋಣಾಚಾರ್ಯನ ವಯಸ್ಸು ಯುದ್ಧದ ಕಾಲಕ್ಕೆ ೮೫ ವರ್ಷವಿತ್ತು; ಪಿತಾಮಹರಾದ ಭೀಷ್ಮಾಚಾರ್ಯರು ೧೦೦-೧೧೦ ವರ್ಷದವರಿದ್ದರು. ಹಿಂದೂ ಜನರು ೧೦೦-೧೫೦ ವರ್ಷಗಳ ವರೆಗೆ ಬಾ ಇರುತ್ತಾರೆಂದು ಗ್ರೀಕ ಇತಿಹಾಸಗಾರರು ಬರೆದಿಟ್ಟು ರುವದರಿಂದ ತತ್ಕಾಲೀನ ಜನರ ಆಯು ಮರ್ಯಾದೆಯು ತಿಳಿಯುತ್ತದೆ. ಈಗಿನ ನಮ್ಮ ಅಕಾಲ ಮರ ಣಕ್ಕೆ ನಮ್ಮ ಅ ಧರ್ಮ ಪ್ರತಿ, ದಾರಿದ್ರ, ಮರುಳ ತನ, ನ್ಯಾನ ಸ೦ಧ್ಯೆಯ ಅಭಾವ, ಗೋವಧೆ ಇವೇ ಕಾರಣವಲ್ಲವೇ ? ಅರ್ಯರ ವರ್ಣವ್ಯವಸ್ಥೆ:- ಆರ್ಯಸಂಸ್ಕೃತಿಯ ದೃಷ್ಟಿ ಯಿಂದ ಮಹಾಭಾರತವು ನಮಗೆ ಅತ್ಯಂತ ಅಮೂಲ್ಯವಾದ ನಿಧಿಯಾಗಿದೆ. ಪ್ರಾಚೀನ ಬ್ರಾ ಣಕಾಲ ಮೊದಲ್ಗೊಂಡು, ಮಹಾಭಾರತ ಕಾಲದ ವರೆಗೆ, ಹೆಚ್ಚಿಗೇನು, ಗ್ರೀಕರ ಅ ಭಿಯೋ ಗದ ವರೆಗಿನ ಭಾರತೀಯರ ಚರಿತ್ರೆ ಎಂಬುದು ನಮಗೆ ಮಹಾಭಾರತದಲ್ಲಿಯೇ ಸಿಗುವದು. ಹೀಗೆ ನೋಡಿದರೆ, ಒಂದು ಬಗೆಯಿಂದ ಮಹಾಭಾರತವೆಂದರೆ, ಭಾರತೀಯ ರಿ ಗೊಂದು ( ಬ್ಲಾನಕೋಶ', ಪ್ರಾಚೀನ ಆರ್ಯರು ತಮ್ಮ ಸಂತತಿಯವರಿ ಗಾಗಿ ಶೇಖರಿಸಿಟ್ಟ ಆಸ್ತಿಯಲ್ಲಿ, ವೇದ, ಬ್ರಾಹ್ಮಣ, ಉಪನಿಷತ್ತುಗಳೂ, )