ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವ. ಅವರು ಕೈಕೊ೦ಡ ಒಕ್ಕಲತನವ್ಯಾಪಾರಗಳ೦ಧ ಕಸಬುಗಳು ನಿಃಸಂಶ ಯವಾಗಿ ಅವರ ಧಾರ್ಮಿಕ ಕಾರ್ಯಗಳಿಗೆ ಅಡ್ಡವಾಗಿ ಅವರನ್ನು ಬಿಡಿ ಸಿರಬಹುದೆಂದು ತೋರುತ್ತದೆ. ಆದುದರಿಂದ ಮುಂದೆ ಮುಂದೆ ವೈಶ್ಯರು, ಇದೇ ಕಾರ್ಯವನ್ನು ಹೊತ್ತು ಸಾಗಿಸುತ್ತಿರುವ ಬ್ರಾಹ್ಮಣರಿಗೆ ಬೇಕಾದ ಹಣಸಹಾಯ ಕೊಟ್ಟು ಕೃತಾರ್ಥರಾ ದೆವೆಂದು ಬಗೆಯುತ್ತಿದ್ದರೆಂದು ಕಾಣುತ್ತದೆ. ಗೋಕುಲದೊಳಗಿನ ವೃಜಗೊವರು ಮೈ ಶ್ಯ ಜಾತಿಯ ವರಿದ್ದು, ಅವರು ಯಜ್ಞ ಮಾಡಿದ ಬಗ್ಗೆ ಭಾಗವತದಲ್ಲಿ ಉಲ್ಲೇಖವಿದೆ. ಶೂದ್ರರು:- ಪುರಾತನ ಕಾಲದಲ್ಲಿ ಶೂದ್ರರೆಂದರೆ ಕೇವಲ ದಾಸ ವೃತ್ತಿಯವರು. ಮರು ವರ್ಣದವರನ್ನು ಸೇವಿಸಿ, ಅವರು ಹಾಕಿ ದ್ದನ್ನು ಉ೦ಡು, ಕೊಟ್ಟಿದ್ದನ್ನು ಉಟ್ಟು ಜೀವಿಸುತ್ತಿದ್ದರು. ಅವರಿಗೆ ಹಣ ವನ್ನು ಕೂಡಿಡಲಿಕ್ಕೂ ಅಧಿಕಾರವಿರಲಿಲ್ಲ. ಆದರೆ ಶೂದ್ರರ ಸಂಖ್ಯೆಯು ಹೆಚ್ಚಿದ ಹಾಗೆಲ್ಲವೂ, ಆರ್ಯರು ದಕ್ಷಿಣಕ್ಕೆ ಒಕ್ಕಲಾಗಿರಲಿಕ್ಕೆ ಹೋದಂ ತೆಯೂ, ದಕ್ಷಿಣದಲ್ಲಿ ವೈಶ್ಯರು ಇಲ್ಲದ್ದರಿಂದ ಮೆಲ್ಲ ಮೆಲ್ಲಗೆ ಭೂಮಿ ಯನ್ನು ಉಳುವ ವ್ಯವಸಾಯ ವು ಶೂದ್ರರ ಕೈ ಸೇರಿತು. ಆಮೇಲೆ ಇಷ್ಟು ದಿವಸಗಳ ತನಕ ಶೂದ್ರರು ಧನಸ೦ಚಯ ಮಾಡ ಬಾರದೆ೦ದಿದ್ದ ನಿರ್ಬ೦ಧವು ಸಡಿಲಾಗಿ ಅರಸನ ಅಪ್ಪಣೆ ಪಡೆದು ಶೂದ್ರನು ಧನ ಸ೦ಚಯ ಮಾಡ ಬಹುದೆಂಬ ಅಧಿಕಾರವು ಸಿಕ್ಕಿತು. ಬರಬರುತ್ತ ಯಜ್ಞ ಯಾಗಾದಿಗಳನ್ನು ಶೂದ್ರರು ನೆರವೆರಿಸಬಹುದಾಗಿ ಅಧಿಕಾರವು ದೊರೆ ಯಿ ತು. ಶೂದ್ರರು ಅಮ೦ತ್ರಕ ಯಜ್ಞ ಮಾಡ ಬಹುದು. ತ್ರಿವರ್ಣದವರು ತಮ್ಮನ್ನು ಇಷ್ಟಾದರೂ ಮುಂದಕ್ಕೆ ಕರೆದು, ಕೆಲಕೆಲವು ಅಧಿಕಾರಗ ಳನ್ನು ಕೊಟ್ಟ ಬಗ್ಗೆ ರ್ಶದ್ರರಿಗೆ ಒಂದು ರೀತಿಯಿಂದ ಅನಂದವೇ ಅಯಿ ತು. ಅಶ್ರನು ವ್ಯವಸ್ಥೆ: - ಆರ್ಯರ ಚಾತುರ್ವಣ್ಯ್ರ ವ್ಯವಸ್ಥೆಯೆಂದರೆ, ಆರ್ಯ ಜನಸಮಾಜಕ್ಕೆ ಅಭೇದ್ಯವಾದು ದೆ೦ದು ಕೋಟೆಯೇ ಸರಿ. ಈ ಭದ್ರವಾದ ಕೋಟೆಯು ಬಹು ಬುನಾದಿಕಾಲದ್ದಿದ್ದು, ಅದಿದ್ದುದ ರಿಂದಲೇ, ಆರ್ಯಸಮಾ ಜಕ, ಅದರ ಜೀವಾಳವಾದ ಧರ್ಮಕ್ಕೂ ಯಾರೂ ಕೈಹಚ್ಚಲಿಕ್ಕಾಗದೆ, ನರ ಧರ್ಮದ ಹೆಡತಗಳೆ೦ಬ ಚಳಿ, ಮಳೆ, ಬಿಸಿಲು, ಬಿರುಗಾಳಿಗಳಿಗೆ ಮೈ ಗೊಟ್ಟು, ಅದು ಮೊದಲಿನಂತೆ ತಲೆ