ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೯ ಗೃಹಸ್ಥಾಶ್ರಮ ಧರ್ಮ. ವನ್ನು ನೀಡುತ್ತಿದ್ದು ತಮ್ಮ ಪುಣ್ಯ ವಾ ವಿತ್ರಗಳನ್ನು ಹೆಚ್ಚಿಸಿಕೊಳ್ಳು ತಿದ್ದರು. ಬಿಸಿಲಲ್ಲಿ ಬಳಲಿ ಬೆಂಡಾಗಿ ಭಿಕ್ಷೆಗಾಗಿ ಬರುವ ಬಡ, ಹಾಗೂ ಬಾಲಬ್ರಹ್ಮಚಾರಿಗಳು ತಮ್ಮ ಕಂದಮ್ಮಗಳೆಂದು ಕನಿಕರ ದಿ೦ದ, ಅವರು ಭಿಕ್ಷೆಗೆ ಬರುವ ದಾರಿಯನ್ನು ಕಾಯುತ್ತ ಕುಳಿತಿರುವ ಆ ದಿವ್ಯ ಮಾತೆಯ ರೂ, ಮನೆ ಮನೆಗಳಲ್ಲಿ ತಮ್ಮ ತಾಯ೦ದಿರಿರುವರೆಂಬ ಭಾವನೆಯಿಂದ ನಿಃಸಂದೇಹವಾಗಿ ತಿರುಗುವ ಸೂರ್ಯನಂಧ ತೇಜಸ್ಸಿನ ಬ್ರಹ್ಮಚಾರಿಗಳೂ ಧನ್ಯರು! ಭಾರತಕ್ಕೆ ಇನ್ನೆ೦ದು ಅ೦ಥ ದಿವ್ಯ ಮುಹೂರ್ತ ಬರುವದು? ಈ ಬಗೆಯಿ೦ದ ತೀರ ಕಠಿಣ ವ್ರತದಿ೦ದಿದು ಕೊ೦ಡು ಗುರುವಿಗೆ ದಕ್ಷಿಣೆ ಸಲ್ಲಿಸಿ, ಆ ಬಳಿಕ ಯ ಧಾವಿಧಿ ಸಮಾವ ರ್ತನೆವರ್ವಕವಾಗಿ ಮದುವೆಯಾಗತಕ್ಕದ್ದು. ಎಂದು ಮುಂತಾಗಿ ನಿಯಮಗಳಿದ್ದವು. ಮತ್ತು ಈ ನಿಯಮಗಳನ್ನು ಬಾಲ್ಯ ದೆಳಗೆ ರಾಮ ಕೃಷ್ಣಾದಿ ಅವತಾರಿಕರು ಸಹ ಮೀರದಂತೆ ಅನುಸರಿಸಿದ ಬಗ್ಗೆ ಅವರ ಉದಾತ್ತವಾದ ಚಿತ್ರಗಳ ನಾ ಕ್ಷಿಯಾಗಿವೆ. ಗೃಹಸ್ಥಾಶ್ರಮ ಧರ್ನು:- ಆರ್ಯರು ಎಲ್ಲ ಆಶ್ರಮಗಳಲ್ಲಿ ಗೃಹ ನ್ಯಾಶ್ರಮದ ಬೆಲೆ ಹೆಚ್ಚಿನದೆಂದು ಅತಿಶಯವಾಗಿ ಬಣ್ಣಿಸಿದ್ದಾರೆ; ಗೃಹ ಸೃನು ವಿವಾಹ ಮಾಡಿಕೊ೦ಡು ಅಗ್ನಿಯನ್ನಿಟ್ಟು ಕೊ೦ಡು, ಯ ಜನ, ಯಾ ಜನ, ಅಧ್ಯಯ ನಾದಿಕ ರ್ಮಗಳನ್ನು ಸಾಗಿಸುತ್ತ ಇರಬೇಕು. ಅವನು ತನ್ನ ಸ್ವಾರ್ಥಕ್ಕಾಗಿಯೇ ಅನ್ನೆ ಬೆಂದಿಸಕೂಡದು; ಪಶು ಹಿಂಸೆಯನ್ನು ಮಾಡ ಬಾರದು; ಹಗಲು, ಪೂರ್ವ ರಾತ್ರೆಯಲ್ಲಿ ಹಾಗೂ ಉತ್ತರ ರಾತ್ರೆಯಲ್ಲಿ ಮಲಗಿರಬಾರದು. ಗೃಹಸ್ಥನಾಗಿದ್ದರು. ಬ್ರಹ್ಮ ಚರ್ಯ ವನ್ನು ಒಳ್ಳೆ ಶ್ರದ್ಧೆಯಿಂದ ಕಾಯಲಿಕ್ಕೆ ಬೇಕು. ಬ್ರಹ್ಮಚಾರಿ ಹಾಗೂ ಸನ್ಯಾಸಿಗಳಿಗೆ ಅನ್ನ ಕೊಟ್ಟು ಉಳಿದವನ್ನು ತಾನು ಸೇವಿಸ ಬೇಕು. ಇಂಥ ಅನ್ನವು ಅಮೃತವೆಂದು ಹೇಳಿದೆ. ಅಂದರೆ, ಗೃಹ ಸ್ಟನಾದವನು, ಪ೦ಚಮಹಾಯಜ್ಞಗಳನ್ನು ಮುಗಿಸಿಕೊ೦ಡು ಚಿಕ್ಕ ಮಕ್ಕಳು, ಬ್ರಹ್ಮಚಾರಿಗಳು, ಸನ್ಯಾಸಿಗಳು, ಪರಿಚಾರಕರು ಉಂಡಮೇಲೆ ಉಣ್ಣಬೇಕು. ಗೃಹಸ್ಥಾಶ್ರಯು ತನಗೆ ಇಷ್ಟವಿರುವ ಯಾವು ದೊಂದು ಉದ್ಯೋಗವನ್ನು ಕೈಕೊಳ್ಳಬೇಕು. ಅಥವಾ ರಾಜನಿಂದ