ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೬ ಭಾರತೀಯ ಇತಿಹಾಸವು ಅವು ಆರ್ಯರಿಗೆ ಸಮ್ಮತವಾದವು; ಭಾ ಗುರಿ ಮತ್ತು ನಿಯು ೦೩ ಸೂತ್ರ ಗಳಿಗೆ ಭಾಷ್ಯ ಬರೆದಿದ್ದಾನೆ. ಯೋಗ:-ಹಿರಣ್ಯಗರ್ಭ ನೀ ಯೋಗಶಾಸ್ತ್ರದ ಮೂಲಪುರುಷನು. ಅದನ್ನು ಪತಂಜಲಖುಷಿಗಳು ರಚಿಸಿದರು; ಈ ಶಾಸ್ತ್ರವು ಸಾ೦ಖ್ಯಕ್ಕಿಂತ ಪ್ರಾಚೀನವಾಗಿರುವಂತೆ ಕಾಣುತ್ತದೆ. ಯೋಗದವರು ನಾ cಖ್ಯ ರ೦ತ, ಎಲ್ಲವನ್ನು ಒಪ್ಪಿ ಕೊಳ್ಳು ವದಲ್ಲದೆ, ಈಶ್ವರನನ್ನು ಹೆಣ್ಣಾಗಿ ಹಿಡಿದು, ಆತನ ಅನುಗ್ರಹದಿಂದಲೇ ಮೋಕ್ಷವೆಂದು ಹೇಳಿ, ಚಿತ್ರದ ಹರಿದಾಟವನ್ನು ತಡೆದು ಅದನ್ನು ಒಂದೆಡೆಯಲ್ಲಿ ಕಟ್ಟಿ ಹಾಕಲಿಕ್ಕೆ ಕೆಲವು ಉಪಾಯ ಗಳನ ಯೋಗ ಶಾಸ್ವದೊಳಗೆ ನಿರೂಪಿಸಿದ್ದಾರೆ. ಯೋಗಸೂತ್ರಗಳಿಗೆ ಶ್ರೀವ್ಯಾಸಮುನಿಗಳ ಭಾಷ್ಯವಿದೆ. ಶಾರೀರಿಕ ಮಾನಸಿಕ ನೈರ್ಮಲ್ಯದಿಂದ ಧ್ಯಾನ ಧಾರಣಾದಿಗಳನ್ನು ನಡೆಸಿ, ಭಗವದ್ರೂಪದಲ್ಲಿ ಸಮಾಧಿಹೊ೦ದು ವದೇ ಯೋಗಶಾಸ್ತ್ರದವರ ಗುರಿಯು. ನ್ಯಾಯ:- ನ್ಯಾಯಶಾಸ್ತ್ರದಲ್ಲಿ ನ್ಯಾಯ, ವೈಶೇಷಿಕವೆ೦ಬೆರಡು ಪ್ರಭೇದಗಳು; ನ್ಯಾಯ ಶಾಸ್ತ್ರಕರ್ತರು ಗೌತಮ ಮುನಿಗಳು ವೈಶೇಷಿಕರು ಕಣಾದಮುನಿಗಳು. ಇವರಿಗೆ ನೈಯಾಯಿಕರೆಂದೂ, ತಾರ್ಕಿಕರೆಂದೂ ಹೆಸರು; ಗೌತಮರು ೧೬ ಪದಾರ್ಥವಾದಿಗಳು; ವೈಶೇಷಿಕರು ೩ ಸದಾ ರ್ಧವಾದಿಗಳು, ಗೌತಮ ಹಾಗೂ ಕಣಾದ ಅವರಿಬ್ಬರೂ ಭರತ ಖಂಡ ದೊಳಗಿನ ಸರಮಾಣುವಾದದ ನಾನಕರು. ಶರೀರಾದಿಗಳಿಂದ ಜೀವಾತ್ಮನು ಭಿನ್ನ ನಿದ್ದು ಅಣುವಾ ಗಿಯೂ, ಒಂದು ದೇಹದಿಂದ ಮತೆ: ದು ದೈಹದೊಳಗೆ ಹೋಗುವವನೂ, ಆ ಸ೦೩ನೂ, ಅಮ ರನ ಇರುವನೆರದು ಇವರ ಅಭಿಪ್ರಾಯ. ಪೂರ್ವಮೀಮಾಂಸೆ:- ಜೈಮಿನ್ಯಾಚಾರ್ಯರು ಈ ಶಾಸ್ತ್ರದ ಉತ್ಪಾದಕರು. ಈ ಶಾಸ್ತ್ರದೊಳಗೆ ಅ೦ಗಕರ್ಮಗಳನ್ನೂ, ಪ್ರಧಾನ ಕರ್ಮಗಳನ್ನೂ ಯುಕ್ತಿರದಿಂದ ವಿವರಿಸಿದ್ದಲ್ಲದೆ, ಅನುಷ್ಟಾನಕ್ರಮ, ಕರ್ಮಭೇದಪ್ರಸ೦ಗ, ತಂತ್ರ ಮೊದಲಾದವು ನಿರ್ದೇಶಿಸಲ್ಪಟ್ಟಿವೆ. ಇದಕ್ಕೆ ಕರ್ಮಕಾಂಡವೆಂದೆನ್ನು ವ ವಾಡಿಕೆಯು ೦ಟು. ಉತ್ತರಖನಾ೦ಸೆ:- ಶ್ರೀ ಬಾದರಾಯಣ ಋಷಿಗಳು ಈ 5