ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗೌತಮನು ಬುದ್ಧನಾದುದು.

೧೮೭

ಈಗ ಅವನ ಮನಸಿನಲ್ಲಿ ನಿತ್ಯಾನಿತ್ಯ ವಸ್ತುವಿನ ವಿಚಾರಗೊಂದಲವೆದ್ದು ವೈರಾಗ್ಯದ ಬಿರುಗಾಳಿಯನ್ನು೦ಟು ಮಾಡಿತು. ಈ ಬಿರುಗಾಳಿಯು ಸಿದ್ದಾರ್ಥನಲ್ಲಿ ಅಡಿಯಿಟ್ಟಿದ್ದೇ ತಡ; ಒಂದೆರಡು ದಿವಸಗಳೆನ್ನುವಷ್ಟರಲ್ಲಿ ಸ್ವರ್ಗವನ್ನು ಧಿಕ್ಕರಿಸುವಂಥ ಅರಮನೆಯನ್ನೂ, ಸಾಮಾನ್ಯರಿಗೆ ಅರೆಹುಚ್ಚು ಹಿಡಿಸಿ ಅರವುಗೆಡಿಸುವಂಧ ಅ೦ಗೈಯೊಳಗಿನ ಅರಗಿಳಿಯ೦ಧ ಮಡದಿಯನ್ನೂ, ಅದೇ ತಾನೇ ಹುಟ್ಟಿದ ಹೂವಿನ ಮೊಗ್ಗೆಯ೦ತಿರುವ ಮುದ್ದಿನ ಹಸುಗೂಸನ್ನೂ, ನಿರ್ದಯದಿಂದ ಬಿಡಿಸಿ ಬೀನಾಡಿ, ರಾತ್ರೆಯಲ್ಲಿ ಓಡಿಸಿಬಿಟ್ಟಿತು. ಬುದ್ಧನಲ್ಲಿ ಕಂಡುಬರುವ ವೈರಾಗ್ಯದ ಅಗ್ನಿಯೂ, ಆತ್ಮಶಾಂತಿಗಾಗಿ ಹಂಬಲಿಸುತ್ತಿರುವ ಹೊರ ಸೂಸುವ ಹಂಬಲವೂ, ಜನರ ನರಳುವಿಕೆಯನ್ನು ಕಂಡು ನರಳುವಂಥ ಮರುಕವೂ, ರೂಢಿಯ ಕಟ್ಟಿಗೆ ಶಿಲುಕಿ ಬಳಲುತ್ತಿರುವವರರ ದೆಸೆಯಿಂದ ಆತನಲ್ಲಿ ಉಕ್ಕಿ ಹರಿಯುವ ಕಾರುಣ್ಯರಸವೂ, ಅವೆಲ್ಲವೂ ಜಗತ್ತಿನ ಯಾವ ಇತಿಹಾಸದೊಳಗೂ ದೊರೆಯದಷ್ಟು ಘನವಾಗಿವೆ; ಇ೦ಥ ಅರಸು ಸನ್ಯಾಸಿಯು ಹಿ೦ದೂದೇಶದ ಪಾಲಿಗಲ್ಲದೆ ಮತ್ತ್ಯಾವ ದೇಶಕ್ಕೂ ಸಿಗುವ ಭಾಗ್ಯವಿಲ್ಲದ್ದು ಭಾರತೀಯರ ಭಾಗ್ಯದ್ಯೋತಕವು.

ಗೌತಮನು ಬುದ್ಧನಾದುದು:-ರಾತ್ರೆ ತನ್ನ ಊರಿನಿಂದ ಚನ್ನನೆಂಬ ಸಾರಥಿಯೊಡನೆ ಹೊರಟ ಗೌತಮನು ಬೆಳಗಿನ ವರೆಗೆ ಪ್ರವಾಸ ಮಾಡಿ, ಒಂದು ನದಿಯ ಧಡಕ್ಕೆ ಬಂದನು. ಸುಗಂಧತೈಲವನ್ನು ಹಚ್ಚಿ ಬೆಳೆಸಿದ ರೇಶ್ಮೆಯ೦ಧ ತನ್ನ ಉದ್ದವಾದ ಕೂದಲುಗಳನ್ನು ತನ್ನ ಹರಿತವಾದ ಕತ್ತಿಯಿಂದ ಕತ್ತರಿಸಿ, ಮೈಮೇಲಿನ ವಸ್ತ್ರಾಲಂಕಾರಗಳನ್ನೆಲ್ಲ ಬಿಚ್ಚಿ ಕಪಿಲವಸ್ತುವಿಗೆ ಕಳಿಸಿ, ನೇರವಾಗಿ ಮಗಧರಾಜ್ಯಕ್ಕೆ ಹೋಗಿ, ರಾಜ್ಯಗೃಹದ ಒಳಿ ವಾಸಿಸುತ್ತಿರುವ ಅಲಾರ ಹಾಗೂ ಉದ್ರಕ ಎಂಬಿಬ್ಬರು ಬ್ರಾಮ್ಹಣರನ್ನಾಶ್ರಯಿಸಿ ಬೇರೆ ಬೇರೆ ಧರ್ಮಸಿದ್ಧಾ೦ತಗಳನ್ನೂ, ಶಾಸ್ತ್ರಗಳನ್ನೂ ಆಳವಾಗಿ ಅಭ್ಯಾಸ ಮಾಡಿದನು. ಶಾಸ್ತ್ರಾಭ್ಯಾಸವು ಮನುಷ್ಯನ ಮನಸು ಬುದ್ಧಿಗಳನ್ನು ಹದಗೊಳಿಸಿ, ಧರ್ಮದ ಹದನವನ್ನು ತಿಳಿಸಲು ನಾಧಕವಾಗಿರುವದೆಂದು ಬಗೆದು ಶಾಸ್ತ್ರಾಭ್ಯಾಸ ನಡಿಸಿದನು.ಉದ್ರ ಕನು ನಿರೀಶ್ವರವಾದಿಂದಿದ್ದು ಸಾಂಖ್ಯತತ್ವಜ್ಞಾನದೊಳಗೆ ಮೇಲಾ