ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೌದ್ಧ ಸಂಪ್ರದಾಯ.

೧೯೧

ಬುದ್ಧನು ಹಲವು ಬಗೆಯ ಉಪದೇಶಪರವಾದ ಜೋಧ ಮಾಡಿದನು. ಮರಣ ಕಾಲಕ್ಕೆ ಸುಭದ್ರ ಎಂಬೊಬ್ಬ ಸನ್ಯಾಸಿಯು ಅಲೆಯುತ್ತಲೆಯುತ್ತ ಅಲ್ಲಿ ಬರಲು ಬುದ್ಧನ ಬೋಧದಿಂದ ಶಿಷ್ಯನಾದನು. ಇವನೇ ಕೊನೆಯವನು. ಆ ಮೇಲೆ ಬುದ್ಧನು ತನ್ನ ಶಿಷ್ಯರಿಗೆಲ್ಲ ಧಮ್ಮ (ಧರ್ಮ) ಹಾಗೂ ಸಂಘದ ನಿಯಮಗಳನ್ನು ಕುರಿತು ಕೇಳಬೇಕಾದ ಸಂಶಯಗಳನ್ನು ಕೇಳಿಕೊಳ್ಳಿರೆಂದೂ, "ನನ್ನ ತರುವಾಯ ನಿಮಗೆ ನಾನು ಹೇಳಿ ಕೊಟ್ಟ ಭೋಧವೂ, ಸ೦ಘದ ನಿಯಮಗಳೂ ಅವೇ ಗುರು ಎಂದು ತಿಳಿಯಿರಿ. ನಾನಿನ್ನು ಹೋಗುತ್ತೇನೆ. ಕಣ್ಣಿಗೆ ಕಾಣಿಸುವ ಘಟಕಗಳೆಲ್ಲವೂ ಕ್ಷಣಿಕವಾದವುಗಳು. ನಿಮ್ಮ ವ್ಯಕ್ತಿಯನ್ನು ನೀವುಗಳು ಯತ್ನದಿಂದ ಸಾಧಿಸಿಕೊಳ್ಳಿರಿ.” ಎಂದು ಮುಂತಾಗಿ ಕೊನೆಯ ನುಡಿಗಳನ್ನಾಡಿ, ಮೊದಲನೇ ಧ್ಯಾನದಿಂದ, ಎರಡು, ಮೂರು ಧ್ಯಾನ ಪ್ರದೇಶದೊಳಗೆ ಹೊಕ್ಕು ನಾಲ್ಕನೆಯ ಧ್ಯಾನಭೂಮಿಕೆಯೊಳಗಿಂದ ಅನಂತ ಆಕಾಶದೊಳಗೆ ಸೇರಿ ಸಂವೇದನೆಯಿಲ್ಲದ ಸ್ಥಿತಿಯಲ್ಲಿ ಮಗ್ನನಾದನು. ನಿರ್ವಾಣಕಾಲಕ್ಕೆ ಬುದ್ಧನು ೮೦ ವರ್ಷದವನಿದ್ದನು; ಅ೦ದರೆ ಕ್ರಿ. ಶ. ಪೂ. ೪೭೮ ವರ್ಷದ ಎಪ್ರಿಲ ತಿಂಗಳ ೧ ನೇ ತಾರೀಖಿನ ದಿನ ದೇಹವಿಟ್ಟನೆ೦ಬುದು ಈಗ ಸಿದ್ಧವಾಗಿದೆ.

ಬೌದ್ಧ ಸಂಪ್ರದಾಯ:- ಬುದ್ಧನು ಮುಖ್ಯವಾಗಿ ಬ್ರಾಮ್ಹಣ ಜಾತಿಯ ವಿರುದ್ಧ ಬಂಡಾಯವೆಬ್ಬಿಸಿದನು. ಬ್ರಾಮ್ಹಣರು ನಡಿಸುವ ಹಿಂಸಾತ್ಮಕವಾದ ಯಜ್ಞಯಾಗಾದಿಗಳು ಆತನಿಗೆ ಅಸಹ್ಯವೆನಿಸಿ, ಇ೦ಥವುಗಳಿಂದ ಜಗತ್ತಿನ ಉದ್ಧಾರವಾಗುವದಿಲ್ಲೆಂದು ಮನಗಂಡು ಹಿರಿರಾದ ಸಾಮಾಜಿಕ ಬಂಡಾಯವನ್ನು ಹೂಡಿದನು. ಬ್ರಾಮ್ಹಣರನ್ನು ಅವನು ಇದಕ್ಕಾಗಿಯೇ ಹೀಯಾಳಿಸುತ್ತಿದ್ದನೇ ಹೊರ್ತು ಬೇರೊಂದು ಉದ್ದೇಶದಿಂದಲ್ಲ. ಕೇವಲ ಹಿಂಸಾಪ್ರಚುರವಾದ ಯಜ್ಞಯಾಗಾದಿಗಳ ಆಚರಣೆಯಿಂದ ಬ್ರಾಮ್ಹಣಜಾತಿಯಲ್ಲಿಯ ಕಾರುಣ್ಯಾದಿ ಮನುಷ್ಯತ್ವದ ಮುಖ್ಯ ಸದ್ಗುಣಗಳು ಲೋಪಹೊ೦ದಿ, ಮನುಷ್ಯನನ್ನು ಬುದ್ಧಿಯುಳ್ಳ ಕ್ರೂರಪಶುವೆಂಬ ಮಟ್ಟಗೆ ಮತಿಗೆಡಿಸಿ, ದಾರಿಗೆಡಿಸಿ, ತಪ್ಪುದಾರಿಗೆ ಒಯ್ಯುತ್ತಿರುವ ಅಧರ್ಮದಿಂದ ತರುಬಿ ತಿರುಗಿಸಿದನು. ತನ್ನ