ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗ್ರೀಕರ ದಾಳಿ, ೨೦ ೩ ಮಾತ್ರ ಕುಟುಕು ಜೀವ ಹಿಡಿದು ಕೊಂಡು ಬಾ ಗಿಲ ಕೆಳಭಾಗದ ಹತ್ತಿರ ತಲೆಯನ್ನಿಟ್ಟು ಕೊಂಡು ಬಿದ್ದಿದ್ದನು, ಎರಡು ಮೂರು ದಿನಗ ಇಾದ ನಂತರ ರಾಜಭಟರು ಬಾಗಿಲು ತೆರೆದು ನೋಡುವಷ್ಟರಲ್ಲಿ ಅವ ರಿಗೀ ಸ್ಥಿತಿಯು ಕಂಡು ಬಂದಿತು. ಕಾವಲಿಗರು ಚಂದ್ರಗುಪ್ತನಿಗೆ ನೀರು ಹಾಕಿ ಉಪಚರಿಸಿದರು. ಕೊ೦ಚ ಮೈ ಮೇಲೆ ಅರಿವು ಬಂದೊ ಡನೆ ಬಂಧುಗಳೆಲ್ಲ ಸತ್ತು ಹೋಗಿರುವದಕ್ಕಾಗಿ ಬಹು ವ್ಯಸನ ಪಟ್ಟನು; ಆದರೆ ಮಾಡುವದೇನು? ಹೊಟ್ಟೆಯಲ್ಲಿರುವ ಸಿಟ್ಟನ್ನು ತೋರಿಸುವ ಬಲವು ರಟ್ಟೆ ಯಲ್ಲಿಲ್ಲದೆ, ಚಂದ್ರಗುಪ್ಪನಿಗೆ ನಂದರ ಸೆರೆಮನೆಯಲ್ಲಿರಬೇ ಕಾಯಿ ತು. ಹೀಗೆ ಚಂದ್ರಗುನು ಅತಿ ಕಷ್ಟದಿಂದ ಕಾಲಕಳೆಯುತ್ತಿ ರಲು ಆತನ ದೈವ ಕೆರೆಯು ವಂತಹದೊಂದು ಪ್ರಸಂಗ ಒದಗಿತು. ಪರ್ವತ ರಾಜ್ಯದವರು ಒಂದು ವಿಚಿತ್ರವಾದ ಶಿಲ್ಪಿಯ ಎತ್ರದಿಂದ ತಿರುಗುವ ಸಿಂಹವನ್ನು ರಚಿಸಿ ಮಗಧ ರಾಜ್ಯಕ್ಕೆ ತಂದರು. ಈ ಸಿಂಹವು ಲೋಹ ದಿಂದ ಮಾಡಲ್ಪಟ್ಟಿದ್ದರೂ ಅದು ಯಾರಿಗೂ ತಿಳಿಯದೆ ಸರ್ವರಿಗೆ ಅತ್ಯಾ ಶ್ವರ್ಯವನ್ನು cಟು ಮಾಡುವಂತಿದ್ದುದರಿಂದ ಅದರ ಗುಟ್ಟನ್ನರಿಯುವ ದೊ೦ದು ಮೇಲಾದ ಕೆಲಸವಾಗಿತ್ತು. ಸಿ೦ಹವು ಲೋಹದಿಂದ ಮಾಡ ಲ್ಪಟ್ಟಿದ್ದು, ಲೋಹ ಚುಂಬಕದ ಆಕರ್ಷಣೆಯಿಂದ ಜೀವಂತ ಸಿಂಹದಂತ ತಿರಗುವದೆಂಬುವ ಮರ್ಮವನ್ನು ಚಂದ್ರಗುಪ್ತನು ತನ್ನ ಬುದ್ಧಿಪ್ರಭೆ ೦ದ ಕ೦ಡು ಹಿಡಿದು ಹೊರಗೆಡಹಿದನು; ಈ ಮರೆಗೆ ಯ೦ತ್ರಗಾ ರರ ಗುಟ್ಟು ಹೊರಬೀಳಿಸಿದ್ದನ್ನು ಕಂಡು, ಚಂದ್ರಗುಪ್ತನ ಬುದ್ಧಿಚಾ ತುರ್ಯಕ್ಕಾಗಿ ಎಲ್ಲರೂ ಹೊಗಳಿ, ಅವನ ಬಿಡುಗಡೆ ಮಾಡಿ ಅಮಾತ್ಯ ರಾಕ್ಷಸನ ಸಲಹೆಯಂತೆ ಅವನನ್ನು ಸತ್ರಾಧಿಕಾರಿಯನ್ನಾಗಿ ನಿಯಮಿಸಿ ದರು. ದುರ್ದೈವಕೀಡಾದ ಚಂದ್ರಗುಪ್ತನ ಮು೦ಗಾಣದೆ ಅಲ್ಲಿ ತನ್ನ ದೈವ ಅರಳುವ ದಾರಿಯ ನ್ನೆದುರು ನೋಡುತ್ತ ಬಂದವರಿಗೆ ಪ್ರೀತಿ ೦ದ ಆದರಾತಿಥ್ಯ ಮಾಡುತ್ತ ಇದ್ದು ಕೊಂಡನು. ಗ್ರೀಕರ ದಾಳಿ:• ಉತ್ತರ ಹಿಂದೂ ದೇಶದೊಳಗೆ ಈ ಸಂಗತಿ ಗಳು ನಡೆದಿರಲು, ಗ್ರೀಸ್ ದೇಶದೊಳಗೆ ಮ್ಯಾಸಿಡನ್ನ ಪ್ರಾ೦ತದ ಭೀಮ ಪರಾಕ್ರಮಿ ಅರಸನಾದ ಅಲೆಕ್ಸಾಂಡರನು ಮೆಲ್ಲಮೆಲ್ಲಗೆ ಮರೆಯ