ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ ಕಾಲದ ಜನರ ಪ್ರೀತಿ, ೨೪೫ ರಾಜ್ಯವು, ಚೋಳರ ಕರಿಕಾಲ ಚೋಳನೆ೦ಬೊಬ್ಬ ಅಸಾಮಾನ್ಯ ವೀರನು ಸಿಂಹಳ ದ್ವೀಪಕ್ಕೆ ದಂಡಯಾತ್ರೆ ಹೊರಟು, ಅಲ್ಲಿಯ ಜನರನ್ನು ಹಿಡಿತಂದು ೧೦೦ ಮೈಲುಗಳ ವರೆಗೂ ಕಾವೇರಿನದಿಗೆ ಅಣೆಕಟ್ಟೆಯನ್ನು ಕಟ್ಟಿಸಿ, ಕಾವೇರಿಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿಮಾಡಿಕೊ೦ ಡನು. ಪ್ರಜೆಗಳಿಗೆ ಈ ತನದು ತಂದೆಯ ಆಳಿಕೆಯಾಗಿತ್ತು. ಜಾತಿಗೆಟ್ಟು ಹಿಂದೂ ಮತಕ್ಕೆ ಸೇರಿದ ಪಲ್ಲವರೆಂಬುವರು ಕಂಚಿಯಲ್ಲಿ ಆಳುತ್ತಿದ್ದು, ಇವ ರಿಗೂ ಬನವಾಸಿಯ ಗ೦ಗರಿಗೂ ಯುದ್ಧಗಳಾಗಿವೆ. ಬನವಾಸಿಯ ಗಂಗರ ಮೂಲಪುರುಷನು ತ್ರಿಲೋಚನನೆಂಬುವನು, ಈ ತ ನೊಬ್ಬ ರಾರಿಹೋಕ ಬ್ರಾಮ್ಮಣನು, ಬನವಾಸಿಯ ಹತ್ತರ ಬರಲು, ಅದೇ ತಾನೇ ದೊರೆ ಯ ನ್ನು ಪಟ್ಟಕ್ಕೆ ಕುಳ್ಳಿರಿಸುವ ಸಮಾರಂಭವು ನಡೆದಿರಲು, ಆ ಪಟ್ಟದಾನೆ ಯು ದಾರಿಹೋಕನಾದ ತ್ರಿಲೋಚನನಿಗೆ ಮಾಲೆ ಹಾಕಲು ರಾಜ ಪ್ರಾಸ್ತ್ರ ವಾಯಿ ತು.ತ್ರಿಲೋಚನನು ತತ್ಕಾಲಕ್ಕೆ ಅನುಸರಿಸಿ, ಅನೇಕ ಅಗ್ರಹಾರಾ ದಿಗಳನ್ನು ಕಟ್ಟಿಸಿ ತನ್ನ ರಾಜ್ಯವನ್ನು ಸುಖವಾಗಿ ಆಳಿ ಹೋದನು. ಈತ ನಿ೦ದ ೩ ನೇ ತಲೆಯವನಾದ ಮಯೂರವರ್ಮನು ಪಟ್ಟಕ್ಕೆ ಬಂದನು. ಪಲ್ಲವರಿಗೂ ಈ ತನಿಗೂ ಬದ್ಧ ದ್ವೇಷ ಬಿದ್ದಿತು. ಚಿಕ್ಕ ಚಿಕ್ಕ ಈ ರಾಜ್ಯದ ಳಲ್ಲಿ ಯಾವತ್ತೂ ಅ೦ತಃಕಲಹದ ಹೊಗೆಯು ಹೊರಡುತ್ತಲೇ ಇದ್ದಿತು. ಈ ಕಾಲದ ಜನರ ಸ್ಥಿತಿ:- ಮಳೆ ಬೆಳೆಗಳಲ್ಲಿ ಹಿಂದೂ ದೇಶಕ್ಕೆ ಎಂದೂ ಕೊರತೆಯಾಗದ್ದರಿಂದ ಅದೊ೦ದರ ಮಾತೆತ್ತುವಂತಿರಲಿಲ್ಲ. ಪ್ರತಿವರ್ಷ ಮಳೆಮಾರು ಸೂರ್ಯಚಂದ್ರರಂತೆ ತಪ್ಪದೆ ಆಯಾ ಕಾಲಕ್ಕ ನುಸರಿಸಿ ಅಗುತ್ತಿದ್ದು ಧಾನ್ಯ ಸಮೃದ್ಧಿಯಿರುತ್ತಿತ್ತು. ಯಾವಾಗಲೋ ಒಮ್ಮೆ ಕ್ಷಾಮ ಕಾಲವು ಒದಗಿತೆಂದರೆ, ಮಾತ್ರ ಜನಗಳು ಅನ್ನ ನಿಲ್ಲದೆ ಪೇಚಾಡಿ ಸತ್ತು ಹೋಗುತ್ತಿದ್ದರು; ಅಧವಾ ಜನರು ದೇಶಾ೦ತರಕ್ಕೆ ಹೋಗುತ್ತಿದ್ದರು. ಇದಕ್ಕೆ ಚಂದ್ರಗುಪ್ತನ ಕಾಲಕ್ಕೆ ಬಿದ್ದ ಬರವೇ ಸಾಕ್ಷಿ! ಇಡೀ ದೇಶದೊಳಗೆಲ್ಲ ಒ೦ದೇ ಚಕ್ರಾಧಿಪತ್ಯವಿಲ್ಲದ್ದರಿಂದ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕಾಳುಕಡಿಗಳನ್ನು ನಾಗಿ ಸುವದು ಬಹು ಕಷ್ಟದ ಮಾತಾಗಿತ್ತು. ಜನಗಳಲ್ಲಿ ಈ ಕಾಲಕ್ಕೆ ಮತಾಭಿಮಾನವು ಹೆಚ್ಚಿಲ್ಲದೆ ದೇಶಾಭಿಮಾನವಿರಲಿಲ್ಲ. ಸ್ವಾಭಾವಿಕ