ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೪

ಭಾರತೀಯರ ಇತಿಹಾಸವು.

ಸಮ್ರಾಟರು ಹುಟ್ಟುವಲ್ಲೇನಾಶ್ಚರ್ಯ ? ಕಾಲಿದಾಸನ ಕಾಲಕ್ಕೆ ವಿಕ್ರಮಾದಿತ್ಯ ಓಲಗವು ಇ೦ಥ 'ನವರತ್ನ' ಗಳಿಂದ ಝಗಝಗಿಸುತ್ತಿದ್ದಿತು. ಪ್ರಾಚೀನ ಸಂಸ್ಕೃತವಾಙ್ಮಯಕ್ಕೆ ರಾಮಾಯಣವು ಹೇಗೋ ಹಾಗೆ ಆಧುನಿಕ ಸಂಸ್ಕೃತಕ್ಕೆ ಕವಿಕುಲತಿಲಕ ಕಾಲಿದಾಸನ ಕಡು ಗಂಪಿನ ಕೃತಿಗಳು. ಅದೊಂದು ರಸಗಾಲ ಒದಗಿತು; ಕಾವ್ಯರಸದ ತಿಳಿಗೊಳವು ಕಾಲಿದಾಸನ ಕಾಲಕ್ಕೆ ತುಂಬಿ ಸೂಸಿ ಹರಿಯಿತು. ಒಮ್ಮೆ ಹರಿದು ಹೋದ ಆ ತಿಳಿಗೊಳಕ್ಕೆ ಪಾಸಟೆಯಾಗುವ ಕಾವ್ಯರಸವು ಕೊನೆಯ ವರೆಗೂ ಹಾಗೇ ಹರಿಯದೆ ಅಲ್ಲಿಯೇ ಇಂಗಿ ಹೋಯಿತು. ಆ ತಿಳಿನೀರಿನ ಗುಂಡಿಗಳು ಈಗ್ಯೂ ಶಕುಂತಲಾ, ವಿಕ್ರಮೋರ್ವಶಿ, ಮೇಘದೂತಗಳೆಂಬ ಹೆಸರುಗಳಿಂದ ನಮ್ಮೆದುರಿಗೆ ನಲಿದಾಡುತ್ತಿವೆ. ಕಾಲಿದಾಸನೆಂದರೆ ಆರ್ಯರ ಬುದ್ಧಿವೈಭವ, ಸಂಸ್ಕೃತವಿದ್ಯೆಗೂ, ನಮ್ಮ ಸಂಸ್ಕೃತಿಗೂ ಅವನೊಂದು ತುಟ್ಟತುದಿಯಲ್ಲಿ ತೊಟ್ಟಿಕ್ಕಿ ತೂಗಾಡುವ ತನಿವಣ್ಣು. ಆತನ ಮಧುರವಾಣಿಗೆ ಕಟ್ಟುಬಿದ್ದು ಭಾರತಸರಸ್ವತಿಯು ಧನ್ಯಳಾದಳು; ಭಾಸಕವಿಯ ತರುವಾಯದಲ್ಲಿ ಇದೇ ತಾನೇ ವಾಗ್ದೇವಿಯು ಕಾಲಿದಾಸನ ಮುಖಾ೦ತರವಾಗಿ ಎರಡನೇ ಸಲ ಮೈಗೊ೦ಡು ಬಂದು ಕಾವ್ಯಗ೦ಗೆಯಾಗಿ ತಿರುಗಿ ಹರಿಯ ತೊಡಗಿದಳು. ಇದೇ ಶತಮಾನದಲ್ಲಿಯೇ ವರಾಹಮಿಹೀರನೆಂಬ ಪ೦ಡಿತನು ಭಾರತೀಯ ಜ್ಯೋತಿಷ ಗ್ರಂಥಗಳನ್ನು ತಿದ್ದಿ ಸಂಗ್ರಹಿಸಿ ಪ೦ಚಸಿದ್ಧಾಂತಿಕಾ ಎಂಬ ಗ್ರಂಥ ಬರೆದುದಲ್ಲದೆ ಹೋರಾಶಾಸ್ತ್ರ, ಬೃಹತ್ ಸಂಹಿತೆ, ಬೃಹಜ್ಜಾತಕ ಗಳೆ೦ಬ ಹೊಸ ಗ್ರ೦ಧಗಳನ್ನು ಬೆಳಕಿಗೆ ತಂದನು. ಅಮರಕೋಶದ ಕರ್ತೃವಾದ ಅಮರಸಿಂಹನೂ, ಭಟ್ಟೀಕಾವ್ಯದ ಬರಹಗಾರನಾದ ವೇತಾಳ ಭಟ್ಟಯಾ, ವರರುಚಿಯೆಂಬ ವೈಯ್ಯಾಕರಣಿಯೂ ಇದೇ


ಕೇಳಿ, ತನ್ನ ಆತನ ಜೀವಾಜೀವ ಗೆಳೆತನಕ್ಕಾಗಿ ಕುಮಾರಧಾತುಸೇನನು ಕಾಲಿದಾಸನು ಮುಡಿದಡೆಗೆ ಧಾವಿಸಿ ಬಂದು ಮಿತ್ರವಿಯೋಗವನ್ನು ಸೈರಿಸಲಾರದೆ, ಅವನನ್ನು ಸುಡುವ ಕಿಚ್ಚಿನಲ್ಲಿಯೇ ತಾನೂ ಹಾರಿಕೊ೦ಡನ೦ತ! ಈ ಬಗೆಯಾಗಿ, ಕಾಲಿದಾಸನು ಸಿಂಹದೇಶದೊಳಗೆ ಗತಿಸಿದನೆಂದೂ, ಈಗ ಕಾಲಿದಾಸನ ದಹನ ಭೂಮಿಯು ಅಲ್ಲಿ ಇರುತ್ತದೆಂದೂ, ಅಲ್ಲಿಯ ಜನರು ಅದನ್ನು ತೋರಿಸುವರೆಂದೂ ಶ್ರೀ.ಸತೀಶಚಂದ್ರವಿದ್ಯಾಭೂಷಣ ರೆಂಬುವರು ಲೇಖ ಬರೆದಿದ್ದಾರೆ.