ಪುಟ:ಕವಿಯ ಸೋಲು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕವಿಯ ಸೋಲು

ದೇವರಿಗೆ

ಅಂತರಂಗದ ಶಕ್ತಿ
ವಿಶ್ವವಾಳುವ ಶಕ್ತಿ;
ಅಂತರಂಗದ ದೀಪ್ತಿ
ವಿಶ್ವ ಬೆಳಗುವ ದೀಪ್ತಿ–
ನಡುವಿರುವ ಮಾಯಮೋಹನನೆಲ್ಲ ಕಳಚಯ್ಯ.

ಸ್ಧೂಲ ಸೂಕ್ಷ್ಮದ ಭಾರ
ಪಂಚಭೂತದ ಭಾರ,
ಕಾಲಪಾಶದ ಉರುಲು
ಪಂಚೇಂದ್ರಿಯಗಳುರುಲು-
ಆತ್ಮಪಕ್ಷಿಯ ಕಾಲ್ಗಳಿಂ ತೆಗೆದು ಬಿಸುಡಯ್ಯ.

ಬ್ರಹ್ಮಾಂಡ ಕೋಟಿಗಳು
ಪ್ರಳಯಕ್ಕೆ ತುತ್ತಾಗಿ
ಬ್ರಹ್ಮದಲಿ ಅಡಗಿರಲಿ ;
ಮೇಲೆ ಹಾರುವ ಶಕ್ತಿ
ಸರ್ವ ಶಕ್ತಿಗಳೆನಗೆ, ಸಹನೆ ನಿನಗಿರಲಯ್ಯ.