ಈ ಪುಟವನ್ನು ಪರಿಶೀಲಿಸಲಾಗಿದೆ
ಕವಿಯ ಸೋಲು
- ಹೊಂಚುತಿರೆ, ಕೂಗುವೆವು ಕಾಹಿನವರಂದದಲಿ
- ಎಚ್ಚರದಿ ತಿರುಗುವೆವು; ಅಪಶಕುನವಾಯ್ತೆಂದು
- ಹೆದರಿಯೋಡುವರವರು. ಉಪಕಾರವಿಷ್ಟಿರಲು
- ಸುಟ್ಟ ಮಾನವ ಜಾತಿ ಉಪಕಾರವೆಣಿಸುವುದೆ!
ಕವಿ ರಾ.-ಮುಂಗಾರ ಮೊದಲ ಮಳೆ ಜಿರೆಂದು ಸುರಿವಂತೆ
- ಆಲಿಕಲ್ಗಳ ಮಳೆಯು ರಪರಪನೆ ಹೊಡೆವಂತೆ
- ಎಡೆಬಿಡದೆ ನೀಯೆನ್ನ ತಲೆಮೇಲೆ ಮಾತುಮಳೆ
- ಹೊಡೆಯುತ್ತಿವೆ. ಎನ್ನ ದೊರೆ! ಶಾಂತಿಯ೦ ತಾಳಯ್ಯ,
- ನಾನೆರಡು ಮುತ್ತುಗಳನಾಡುವೆನು ಕೇಳಯ್ಯ.
ಘೂ, ರಾ - ಮುತ್ತುಗಳೆ! ಭಾಪುರೇ! ಕವಿರಾಜ!
ಕವಿ ರಾ- ಎನ್ನ ದೊರೆ!
- ನಿನ್ನ ನುಡಿ ಹಿರಿಯ ನುಡಿ ಫಲಿಸುವುದು. ಎನ್ನ ನುಡಿ
- ಚಿತ್ತವಿಸು, ನಿಮಗೆ ನಾನಪಕಾರ ಮಾಡಿದೆನೆ?
- ನಿಮಗಲಂಕಾರಮಂ ನಮಗಲಂಕಾರಮಂ
- ನಲ್ಮೆಯಿಂದಾಡಿದೆನು; ಹಳಿವೆಣಿಕೆ ಎನಗಿಲ್ಲ
- ಮೆಚ್ಚುನುಡಿಯಾಡಿದೆನು; ನಿಮ್ಮ ಉಪಕೃತಿ ಹಿರಿದು
- ನಿಮ್ಮ ದೆಸೆಯಿಂದೆಮಗೆ ಉಪಮಾನ ದೊರೆಯಿತ್ತು,
ಘೂ, ರಾ.- ಉಪಮಾನ ನಿಮಗಾಯು, ಅಪಮಾನ ನಮಗಾಯ್ತು
- ಆಡಿ ಫಲವೇನಯ್ಯ ಬಣ್ಣನೆಯ ಕೊಂಕು ನುಡಿ;
- ರಕ್ತೋಪವನವನ್ನು ಬಿಟ್ಟಿಹೆವು, ಇನ್ನೀಗ
- ಈವೂರು, ಈ ದೇಶ ಎಲ್ಲವಂ ಬಿಡಲಿಹೆವು.
ಕವಿ ರಾ.-ಅರಸು ಮುನಿದರೆ ತಿಳುಹುವುದು ಕಷ್ಟ, ಹೇಳೆನ್ನ
- ದೊರೆಯೆ! ನೀನಿಂತು ಮುನಿದರೆ ನಾನು ಬದುಕುವೆನೆ?
- ಒಲುಮೆಯಿಂ ಎರಡು ನುಡಿ ಕೇಳಯ್ಯ ತಪ್ಪಾಯ್ತು.
೯೧