ಪುಟ:ಯಶೋಧರ ಚರಿತೆ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ


ತರಿಸಿದಾಗ ಅವರು ಹೇಳಿದ ಪೂರ್ವ ಕಥೆಯಿಂದ ಪರಹಿಂಸಾಸಕ್ತಿಯನ್ನು
ಬಿಟ್ಟು ಅವರನ್ನು ಬಿಡುಗಡೆ ಮಾಡಿ ತಪಂಬಟ್ಟನು-ಎಂಬುದೇ ಇದರ ಕಥಾಸಾರ”
ಎಂಬ ಮಾತಿದೆ. ಕೃತಿಯಲ್ಲಿ “ಅಭಯ ರುಚಿಕುಮಾರಂ ಮಾರಿದತ್ತಂಗೆ
ಹಿಂಸಾರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ ಶುಭಕಥನ” ಎಂಬ
ಮಾತು ಇದಕ್ಕೆ ಆಧಾರ. ಆದರೆ ಕೃತಿಗೆ 'ಯಶೋಧರ ಚರಿತೆ' ಎಂಬ
ಹೆಸರಿರುವುದರಿಂದ ಯಶೋಧರನು ಸಂಕಲ್ಪ ಹಿಂಸೆಯಿಂದ ಏನೇನು ಕಷ್ಟಗಳನ್ನು
ಯಾವ ಯಾವ ಜನ್ಮದಲ್ಲಿ ಹೇಗೆ ಹೇಗೆ ಅನುಭವಿಸಬೇಕಾಯಿತು ಎಂಬ
ವಸ್ತುವೇ ಇದರಲ್ಲಿ ಪ್ರಧಾನವೆಂಬುದನ್ನು ಅಂಗೀಕರಿಸಬೇಕಾಗುತ್ತದೆ. ಕಥೆಯಲ್ಲಿ
ಕುತೂಹಲವನ್ನುಂಟುಮಾಡುವುದಕ್ಕಾಗಿ ಕವಿ ಯಶೋಧರನು
ಅಭಯರುಚಿಯಾಗಿದ್ದ ಜನ್ಮದ ಅವಧಿಯಲ್ಲಿ ನಡೆದ ಘಟನೆಯಿಂದ ಕೃತಿಯನ್ನು
ತೊಡಗಿಸಿದ್ದಾನೆ, ಅಷ್ಟೆ, ಈ ಕಥೆಯ ಸಂಕ್ಷೇಪ ಸ್ವರೂಪವನ್ನು ಮೊದಲು
ನೋಡೋಣ.

೩. ಕಥಾಸಾರ
ಅಯೋಧ್ಯಾ ದೇಶದ ರಾಜಪುರದ ಮಾರಿದತ್ತರಾಜನು ಒಂದು ವಸಂತದಲ್ಲಿ
ಎಂದಿನಂತೆ ಚಂಡಮಾರಿ ದೇವತೆಯ ತೃಪ್ತಿಗಾಗಿ ನರಬಲಿ ಕೊಡುವುದಕ್ಕಾಗಿ
ಇಬ್ಬರು ಎಳೆಯರನ್ನು ಹಿಡಿತರಿಸುತ್ತಾನೆ. ಅವನ ಪ್ರಜೆಗಳು ಸಾವಿರಾರು ಸಂಖ್ಯೆಯ
ಪ್ರಾಣಿಗಳನ್ನು ತಂದಿದ್ದಾರೆ. ಆ ಸನ್ನಿವೇಶದಲ್ಲಿ ಅಲ್ಲಿಗೆ ತರಲ್ಪಟ್ಟ ಮರ್ತ್ಯಯುಗಲಕವು
ನಿಶ್ಚಿಂತೆಯಿಂದ ಮಾರಿಯ ಮನೆಯನ್ನು ಹೊಕ್ಕು, ಪದ್ಧತಿಯಂತೆ, ಅರಸನನ್ನು
ಹರಸಬೇಕೆಂದಿದ್ದಾಗ, ಅವರಲ್ಲಿ ಒಬ್ಬನಾದ ಅಭಯರುಚಿ ಕುಮಾರನು"ನಿರ್ಮಲ
ಧರ್ಮದಿಂದ ಪಾಲಿಸು ಧರೆಯಂ” ಎನ್ನುತ್ತಾನೆ. ಅವರ ರೂಪಧೈರ್ಯಗ:ಉ
ರಾಜನನ್ನು ಬೆರಗುಗೊಳಿಸುತ್ತದೆ. ಆಗ ಮಾರಿದತ್ತನಿಗೆ ಅವರ ವಿಷಯವನ್ನು
ತಿಳಿಯುವ ಕುತೂಹಲವುಂಟಾಯಿತು. ಅವನು ಪ್ರಶ್ನಿಸಿದಾಗ ಅಭಯರುಚಿ ತಮ್ಮ
ಜನ್ಮಾಂತರ ಕಥೆಯನ್ನು ಹೇಳುತ್ತಾನೆ.

ಉಜ್ಜಯಿನಿಯ ಯಶೌಘ ರಾಜನಿಗೆ ತನ್ನ ಮಡದಿ ಚಂದ್ರಮತಿಯಲ್ಲಿ
ಹುಟ್ಟಿದವನೇ ಯಶೋಧರ, ಅವನ 'ಮನ:ಪ್ರಿಯೆ' ಅಮೃತಮತಿ. ಯಶೌಘನು
ವೃದ್ಧಾಪ್ಯಕ್ಕಡಿಯಿಟ್ಟಾಗ ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ
ಅಮೃತಮತಿಯರು ಪರಸ್ಪರಾನುಬದ್ದರಾಗಿ ಕಾಲ ಕಳೆಯುತ್ತಾರೆ.

ಒಂದು ರಾತ್ರಿ ಅವರಿಬ್ಬರೂ ಮಂಚದ ಮೇಲೆ ಮಲಗಿದ್ದಾಗ; ನಟ್ಟಿರುಳು