ಪುಟ:ಯಶೋಧರ ಚರಿತೆ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಯಶೋಧರ ಚರಿತೆ



ಧೀರನಿಧಿ ಬಿಟ್ಟಿದೇವನೊ-
ಳೋರಗೆ ಬಲ್ಲಾಳನಿಂತು ನರಸಿಂಹಸುತಂ-
ಗಾರೆಣೆ ಗಗನಂ ಗಗನಾ-
ಕಾರಮೆನಲ್ ತಮ್ಮೊಳೆಣೆ ಪಿತಾಮಹ ಪೌತ್ರರ್‌ ೧೩

ಆಳೂರುಗೆ ಬಲ್ಲಾಳನ
ದಾರುಯ ದಾವಣಿಯ ತುರಗದಳ ಖುರುಹತಿಯಂ
ಪೇಳೆ ಪೆಸರಿಲ್ಲದಂತಿರೆ
ಪಾಳೂದುವು ವೈರಿದುರ್ಗಮೆನಿತೊಳವನಿತುಂ ೧೪

ಆರೆಣೆಯೆಂಬೆನರುಂಬದ
ಬೀರಮನೀ ಜಗಮನಾವಗಂ ಸುತ್ತಿದ ಮು-
ನ್ನೀರೆಂಬುದು ಬಿರುದಿನ ಬೆ
ಳ್ಳಾರೆನಿಸಿದುದದಟರಾಯ ಕೋಳಾಹಳನಾ ೧೫


ಬಿಟ್ಟಿದೇವನಿಗೆ ಸಮಾನನಾದವನೇ ಬಲ್ಲಾಳನು. ಈತನು ನರಸಿಂಹನ ಮಗ.
ಈತನಿಗೆ ಸರಿಸಮಾನರಾದವರು ಬೇರೆ ಯಾರೂ ಇಲ್ಲ. ಈ ಅಜ್ಜ ಮೊಮ್ಮಕ್ಕಳು
“ಆಕಾಶವು ಆಕಾಶದಂತೆ' ಎನ್ನುವ ಹಾಗೆ ಪರಸ್ಪರ ಎಣೆಯಾಗಿದ್ದಾರೆ. ೧೪.
ಬಲ್ಲಾಳನು ಹಗೆಗಳ ಹಟಮಾರಿತನವನ್ನು ಕಂಡಾಗ ಅವರ ದುರ್ಗಗಳನ್ನು
ಆಕ್ರಮಿಸುತ್ತಿದ್ದನು. ಆಗ ಆತನ ಕಡೆಯ ವೀರಭಟರ ಹೊಡೆತಗಳಿಂದಲೂ,
ಲಾಯದಲ್ಲಿ ಕಟ್ಟಿಹಾಕಿ ಸಾಕಿದ ಅಶ್ವಸೈನ್ಯದ ಗೊರಸಿನ ಪೆಟ್ಟಿನಿಂದಲೂ ಶತ್ರುಗಳ
ಕೋಟೆಗಳೆಲ್ಲ ಹೇಳ ಹೆಸರಿಲ್ಲದಂತೆ ಹಾಳಾಗಿ ಹೋದವು. ೧೫. ಇಡೀ
ಭೂಮಂಡಲವನ್ನು ಸದಾ ಸುತ್ತಿಕೊಂಡಿರುವ ಸಾಗರವೂ, ಮಹಾವೀರನಾದ
ಬಲ್ಲಾಳನ ಕೀರ್ತಿಯ ಧವಳ ಪ್ರವಾಹದಂತೆ ಕಾಣುತ್ತಿತ್ತು. ಅವನು