ಯಶೋಧರ ಚರಿತೆ
೧೯
ಚಲದ ಬಲದಸಕದಿಂ ಸಲೆ
ನಿಲೆ ನಾಲ್ಕು ದೆಸೆಯ ಮೂರುವರೆ ರಾಯರ ಮುಂ-
ದಲೆಯೊಳಗುಂದಲೆಯೆನೆ ನಿಂ-
ದಿವುದು ತೇಜಂ ಪ್ರತಾಪ ಚಕ್ರೇಶ್ವರನಾ೧೬
ನೆಗಳ್ದ ನೃಪರೊಳಗೆ ಮುಂ ಕವಿ-
ತೆಗೆ ಮುಂಜಂ ಭೋಜನುತ್ಪಲಂ ಶ್ರೀಹರ್ಷಂ
ಮಿಗಿಲವರಿಂ ಬಲ್ಲಾಳಂ
ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ೧೭
ಆ ನೃಪನ ಸಭೆಯೊಳಖಿಳಕ-
ಳಾ ನಿಪುಣರ ನಟ್ಟನಡುವೆ ಬೊಟ್ಟೆ ಗೆಲಲ್
ತಾನೆ ಚತುರ್ವಿಧ ಪಂಡಿತ
ನೇನೆಂಬುದೊ ಸುಕವಿ ಭಾಳಲೋಚನನಳವಂ೧೮
ಸಾಗರಾಂತ ಧರಿತ್ರಿಯನ್ನೂ ತನ್ನ ಸ್ವಾಧೀನಪಡಿಸಿಕೊಂಡವನು; ಅರಸರಿಗೆಲ್ಲ
ಅಂಜಿಕೆಯನ್ನುಂಟುಮಾಡಿದವನು. ೧೬. ಅವನ ಚಲದ ಬಲದ ಎಸಕ ಅದ್ಭುತ
ವಾಗಿದೆ. ಪ್ರತಾಪ ಚಕ್ರೇಶ್ವರನಾದ೭ ಆತನ ತೇಜಸ್ಸು ನಾಲ್ಕೂ ದಿಕ್ಕುಗಳಲ್ಲಿ
ಸ್ಥಿರಸ್ಥಾನವನ್ನು ಪಡೆದುಕೊಂಡಿದೆ. ಅಲ್ಲಿನ ಮೂರೂ ಮತ್ತು ಇತರ ಕೆಲವು
ರಾಜರ೮ ಮುಂದಲೆಯಲ್ಲಿ ಅದು ವಿಶೇಷವಾಗಿ ನೆಲೆನಿಂತು ಅವರಿಗೆ ತೀವ್ರವಾದ
ಬಾಧೆಯನ್ನುಂಟುಮಾಡುತ್ತದೆ. ೧೭. ಹಿಂದೆ ಕವಿತೆಗೆ ಹೆಸರುಗೊಂಡವರೆಂದರೆ
ಮುಂಜ, ಭೋಜ, ಉತ್ಪಲ ಮತ್ತು ಶ್ರೀಹರ್ಷ ಎಂಬ ರಾಜರು. ಈ ಬಲ್ಲಾಳನು
ಅವರಿಗಿಂತ ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐಮಡಿ ಮಿಗಿಲಾಗಿದ್ದಾನೆ ೧೮. ಈ
ರಾಜನ ಆಸ್ಥಾನದಲ್ಲಿ ಅನೇಕ ಕಲಾನಿಪುಣರಿದ್ದಾರೆ. ಅವರೆಲ್ಲರ ಮಧ್ಯದಲ್ಲಿ
ಬೆರಳೆತ್ತಿನಿಂತು ಅವರನ್ನೆಲ್ಲ ಗೆಲ್ಲುವುದಕ್ಕೆ ಅತಿಸಮರ್ಥನಾದವನೇ ಜನ್ನ. ಅವನು
ಚತುರ್ವಿಧ ಪಂಡಿತನೆಂದಾದ ಮೇಲೆ ಅವನ ಆಳವನ್ನು ಏನೆನ್ನಲಿ? ಅವನು
ಸುಕವಿ ಭಾಳಲೋಚನನಾಗಿದ್ದಾನೆ.೯ ೧೯. ವ್ಯಾಕರಣದಲ್ಲಿ ನಿಷ್ಣಾತನಾಗಿ