ಯಶೋಧರ ಚರಿತೆ
೨೩
ಮೇರು ನೃಪ ಪ್ರಾಸಾದಂ
ವಾರಧಿ ನಿಜಪರಿಖೆ ವಜ್ರವೇದಿಕೆ ತತ್ಪ್ರಾ-
ಕಾರಂ ಜಂಬೂದ್ವೀಪಾ
ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ ೨೮
ಅದರೊಳಗೆ ಮೆರೆವ ಮಣಿ ಮಾ-
ಡದ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊ
ತ್ತದೆ ಬೆಳಗು ಚಂದನಾಲೇ-
ಪದ ಪವನಂ ಕುಡುವುದುರಿವ ರವಿಗೆಡೆವಗಲೊಳ್ ೨೯
ಕಾರಿರುಳೊಳಮೆಳವಿಸಿಲಂ
ಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂ
ಹೀರೆಯ ಹೂವಿನ ಬಣ್ಣದ
ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್ ೩೦
೨೮. ಅರಸನ ಅರಮನೆ ಮೇರುವಿನಂತೆ ಉತ್ತತವಾಗಿಯೂ ಭವ್ಯವಾಗಿಯೂ
ಮೆರೆಯುತ್ತದೆ ಆ ನಗರದಲ್ಲಿ. ಕಡಲು ಅದಕ್ಕಿರುವ ಕಂದರದಂತೆ ಶೋಭಿಸುತ್ತದೆ.
ವಜ್ರವೇದಿಕೆಯೇ ಅದರ ಪ್ರಾಕಾರವಾಗಿ ಪ್ರಕಾಶಿಸುತ್ತದೆ. ಒಟ್ಟಿನಲ್ಲಿ ರಾಜಪುರವು
ಜಂಬೂದ್ವೀಪದ ಸಾರವನ್ನೆಲ್ಲ ಇಲ್ಲಿಯೇ ಶೇಖರಿಸಿಟ್ಟಿದ್ದಾರೆಂಬಂತೆ
ಶೋಭಿಸುಸತ್ತದೆ. ೨೯. ಆ ನಗರದಲ್ಲಿ ಮೆರೆಯುತ್ತವೆ ಮಣಿಮಾಡಗಳು. ಅವುಗಳ
ಲೋವೆಗಳಲ್ಲಿ ಹೊಸ ಮುತ್ತಿನ ಸಮುದಾಯವನ್ನೇ ಕೋದು ಅಲಂಕರಿಸಿದ್ದಾರೆ.
ಅದರಿಂದ ಹಬ್ಬುತ್ತದೆ ತಂಪಾದ ಬೆಳಕು. ಈ ಬೆಳಕು ಆಕಾಶದಲ್ಲಿ ಹಗಲು
ಸಂಚರಿಸುವ ಸೂರ್ಯನಿಗೆ ಶ್ರೀಗಂಧದ ತಂಪಾದ ಲೇಪನವನ್ನು ಲೇಪಿಸುವಂತಿದೆ.
೩೦. ಕಗ್ಗತ್ತಲೆಯಲ್ಲೂ ಬೀದಿಯಲ್ಲೆಲ್ಲ ಎಳೆಬಿಸಿಲಿನ ಪ್ರವಾಹವೇ ಹಬ್ಬಿದಂತೆ
ತೋರುತ್ತದೆ. ಹೀರೆಯ ಹೂವಿನ ಬಣ್ಣದ ಚಿನ್ನದ ಕುಸುರಿಕೆಲಸದ ಉಪ್ಪರಿಗೆಗಳಿಂದ