ಪುಟ:ಯಶೋಧರ ಚರಿತೆ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೪

ಯಶೋಧರ ಚರಿತೆ

ನೆಲೆಮಾಡದೊಳೆಡೆಯಾಡುವ
ಕಲಹಂಸಾಲಸವಿಳಾಸವತಿಯರ ಮುಖಮಂ-
ಡಲಕೆ ಸರಿಯಾಗಲಾರದೆ
ಸಲೆ ಮಾಳ್ವಿಂ ಚಂದ್ರನಿಂತು ಚಾಂದ್ರಾಯಣಮಂ ೩೧

ಪಗಲನಿರುಳ್ ನಿಜರುಚಿಯಿಂ
ಮಿಗಿಸುವ ಜಿನಭವನದರುಣಮಣಿ ಕಲಶಂಗಳ್
ನಗುವುವು ಕೇತುಗಳಿಂ ಕೇ
ತುಗಳೊಳ್ ಕೆಳೆಗೊಂಡು ನಿಂದು ರವಿಮಂಡಲಮಂ ೩೨

ಅದು ಪಿರಿಯ ಸಿರಿಯ ಬಾಳ್ಮೊದ-
ಲದು ಚಾಗದ ಭೋಗದಾಗರಂ ಸಕಲಸುಖ-
ಕ್ಕದು ಜನ್ಮಭೂಮಿಯೆನಿಸದು-
ದದನಾಳ್ವಂ ಮಾರಿದತ್ತನೆಂಬ ನೃಪಾಲಂ ೩೩


ಈ ಶುಭ್ರಕಾಂತಿ ಪಸರಿಸುತ್ತವೆ. ೩೧. ಅತ್ಯುನ್ನತವಾದ ಆ ಉಪ್ಪರಿಗೆಗಳಲ್ಲಿ ಬೆಡಗಿಯರು ರಾಜಹಂಸಗಳಂತೆ ಮೆಲ್ಲನೆ ಅತ್ತಿಂದಿತ್ತ ಸಂಚರಿಸುತ್ತಾ ಇದ್ದಾರೆ. ಅವರ ಮುಖಮಂಡಲಕ್ಕೆ ಸಮನಾಗಲಾರದೆಹೋದುದರಿಂದಲೇ ಚಂದ್ರನು ಚಾಂದ್ರಾಯಣ ವ್ರತವನ್ನು ಆಚರಿಸುತ್ತಾನೆ.೧೩ ೩೨. ಅನೇಕ ಜಿನಭವನಗಳು ಆ ನಗರವನ್ನು ಅಲಂಕರಿಸಿವೆ. ಅವುಗಳ ಕಲಶಗಳು ಕೆಂಪು ಹರಳುಗಳಿಂದ ನಿರ್ಮಿತವಾಗಿರುವುದರಿಂದ ರಾತ್ರಿಯ ಹೊತ್ತಿನಲ್ಲೂ ಅರುಣೋದಯದ ಹೊಂಬಣ್ಣವನ್ನು ಮೀರಿಸಿ ಬೆಳಗುತ್ತವೆ. ಜಿನಮಂದಿರಗಳ ಧ್ವಜಗಳು ಬಹಳ ಮೇಲೆ ಏರಿ ನಿಂತು ಕೇತು ಗ್ರಹಗಳ ಮೈತ್ರಿಯನ್ನು ಪಡೆದು ಸೂರ್ಯಮಂಡಲವನ್ನೇ ಅಪಹಾಸ್ಯಮಾಡುತ್ತವೆ.೧೪ ೩೩. ರಾಜಪುರವು ಹೀಗೆ ಸಕಲ ಸಂಪತ್ಸಮೃದ್ದಿಗೂ ಜನ್ಮಭೂಮಿಯಾಗಿ ತ್ಯಾಗದ ತವರು, ಭೋಗದ ಭವನ ಎಂಬಂತಿತ್ತು. ಅದನ್ನು ಆಳುವವನು ಮಾರಿದತ್ತ ಎಂಬ ಅರಸ.