ಪುಟ:ಯಶೋಧರ ಚರಿತೆ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೩೩

ಭೈರವನ ಜವನ ಮಾರಿಯ
ಮೂರಿಯವೋಲ್ ನಿಂದ ಮಾರಿದತ್ತಂ ಲಲಿತಾ-
ಕಾರರ ಧೀರರ ಬಂದ ಕು
ಮಾರರ ರೂಪಿಂಗೆ ಠಕ್ಕುಗೊಂಡಂತಿರ್ದಂ ೫೮

ಅರಸನ ಕೆಲಬಲದವರ್ಗಳ್
ಪರಸಿರೆ ಪರಸಿರೆ ನೃಪೇಂದ್ರನಂ ನೀವೆನೆ ಮಂ-
ದರಧೀರನಭಯರುಚಿ ನೃಪ
ವರ ನಿರ್ಮಲಧರ್ಮದಿಂದ ಪಾಲಿಸು ಧರೆಯಂ ೫೯

ಎಂದು ಪರಸಿದೊಡೆ ಪೊಯ್ಯದೆ
ನಿಂದು ನೃಪಂ ಮನದೊಳೆಂದನೀ ದೇಗುಲಮಂ
ಬಂದು ಪುಗಳೊಡನೆ ಜೀವಂ
ನಿಂದರಿಯದು ಮುನ್ನವಿನ್ನರಂ ಕಂಡರಿಯೆಂ ೬೦


ಎದೆಯೊಡೆದುಕೊಂಡಂತೆ ಭಾಸವಾಗುತ್ತಿತ್ತು. ೫೭. ಮಾರಿಗುಡಿಯ ಹೊರಗಣ
ಪ್ರಾಕಾರದ ಮೇಲೆ ಎಲ್ಲ ದಿಕ್ಕುಗಳಲ್ಲಿಯೂ ಬಲಿಯಾಗಿದ್ದ ಮನುಷ್ಯರ
ತಲೆಬುರುಡೆಗಳನ್ನು ಸಾಲಾಗಿ ಇರಿಸಲಾಗಿತ್ತು. ಮಾರಿದೇವಿ ಮಾಂಸವನ್ನು
ಬಹಳವಾಗಿ ಬಯಸಿ ಹೊರಗಣ ಜೀವಸಮುದಾಯವನ್ನು ಹಲವು ಮುಖಗಳಿಂದ
ನೋಡುತ್ತಾಳೋ ಎಂಬಂತೆ ಆ ನೋಟವು ಭಯಂಕರವಾಗಿತ್ತು. ೫೮. ಇವುಗಳ
ನಡುವೆ ಭೈರವನ, ಯಮನ, ಮಾರಿಯ ಮೂರಿಯಂತೆ೨೪ಮಾರಿದತ್ತನು
ನಿಂತಿದ್ದನು. ಲಲಿತಾಕಾರದ ಧೀರರಾದ ಆ ಇಬ್ಬರು ಮಕ್ಕಳು ಮಾರಿದತ್ತನ
ಸಮ್ಮುಖದಲ್ಲಿ ಬಂದು ನಿಂತರು. ಅವರ ಸ್ವರೂಪವನ್ನು ಕಂಡಾಗ ಅವನು
ದಿಗ್ಗಾಂತನಾಗಿಬಿಟ್ಟನು. ೫೯ ಅರಸನ ಅಕ್ಕಪಕ್ಕದವರು “ಹರಸಿರಿ, ಹರಸಿರಿ
ನಮ್ಮ ರಾಜೇಂದ್ರನನ್ನು !” ಎಂದು ಬೊಬ್ಬಿಟ್ಟರು. ಆಗ ಮಂದರಗಿರಿಯಂತೆ
ಧೀರನಾದ ಅಭಯರುಚಿಯು “ರಾಜಶೇಷ್ಠನೇ, ನಿರ್ಮಲಧರ್ಮದಿಂದ ಧರೆಯನ್ನು