ಪುಟ:ಯಶೋಧರ ಚರಿತೆ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೨೭

ಸುರಿಗಿರುದರ್ಚನೆಯಾಡುವ
ಪರಕೆಯನೊಪ್ಪಿಸುವ ಲಕ್ಕಲೆಕ್ಕದ ಲೆಂಕ
ರ್ವೆರಸು ಬಲವಂದು ದೇವಿಯ
ಚರಣಂಗಳ್ಗೆ ರಗಿ ರಂಗಮಂಟಪದೆಡೆಯೊಳ್ ೪೦

ನಿಂದು ನರಪತಿ ತಳಾರಂ
ಗೆಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ
ಕೊಂದರ್ಚಿಸುವೆಂ ಪೂಜೆಯೊ-
ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್ ೪೧

ತಡವಾದಪ್ಪುದು ಪೌರರ್
ಕುಡುವೇಳ್ಪುದು ಹಲವು ಜೀವರಾಶಿಯ ಬಲಿಯಂ
ನಡೆಯನೆ ಹಸಾದಮಾಗಳೆ
ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ ೪೨


೪೦. ಖಡ್ಗದಿಂದ ಇರಿದುಕೊಂಡು ಅರ್ಚನೆಯನ್ನು ಸಲ್ಲಿಸುವ೧೮ ಹಾಗೂ
ಬೇರೆ ರೀತಿಯಲ್ಲಿ ಹರಕೆಯನ್ನೊಪ್ಪಿಸುವ ಲಕ್ಷೋಪಲಕ್ಷ ದೇವೀ ಭಜಕರು ಅಲ್ಲಿ
ಸಿದ್ಧರಾದರು. ಅವರನ್ನೆಲ್ಲ ಕೂಡಿಕೊಂಡು ಮಾರಿದತ್ತನು ದೇವಿಯ ಗುಡಿಗೆ
ಪ್ರದಕ್ಷಿಣೆ ಬಂದನು. ನಮಸ್ಕರಿಸಿದನು. ಅನಂತರ ದೇವಾಲಯದ
ರಂಗಮಂಟಪದಲ್ಲಿ ನಿಂತುಕೊಂಡನು. ೪೧. ತನ್ನ ತಳಾರನನ್ನು ಕರೆದು, “ನೀನು
ಈಗಲೇ ಮನುಷ್ಯಯುಗವನ್ನು ಬರಿಸು. ಎಂದಿನಂತೆ ಮೊದಲು ನಾನೇ ಅವರನ್ನು
ಬಲಿಕೊಟ್ಟು ಅರ್ಚಿಸಬೇಕಾಗಿದೆ. ಪದ್ಧತಿ ಪ್ರಕಾರ ನಡೆದುಕೊಳ್ಳದಿದ್ದರೆ ದೇವಿಗೆ
ಸಿಟ್ಟಾದೀತು. ಪರಿಣಾಮವಾಗಿ ಅವಳೂ ನಮ್ಮ ವಿಷಯದಲ್ಲಿ ತಪ್ಪಿ