ಪುಟ:Duurada Nakshhatra.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಮುಂದಿನ ಸಾರೆ ಸಂಬಳ ತರೋಕೆ ನಂಜುಂಡಯ್ಯ ಹೋಗ್ತಾರಲ್ಲ ಆಗ ತರಿಸಿದರಾಯ್ತು,” -

“ಮೂರನೇ ತರಗತಿ ಮಾನಿಟರ್, ನಮ್ಮ ಪೋಲೀಸ್ ಇನ್ಸ್ಪೆಕ್ಟರ್ ಹುಡುಗ, ಕ್ರಿಕೆಟ್ ಆಟ ಷುರು ಮಾಡ್ಬೇಕೂಂತ ಹೇಳ್ತೀದ್ದಾನೆ.”

“ಸರಿ, ಸರಿ... ಅದಕ್ಕೆಲ್ಲಿಂದ ತರೋದು ನೂರು ರೂಪಾಯಿ ?"

“ಆ ಮೇಲೆ ಹುಡುಗಿಯರು ತಮಗೊಂದು ರಿಂಗ್ ಟೆನ್ನಿಸ್ ಆಟಕ್ಕೆ ನೆಟ್ಟ-ರಿಂಗು ಬೇಕೂಂತ ಕೇಳ್ತೀದ್ದಾರೆ.”

“ಆಘೋಯ್ತು! ವಿದ್ಯಾರ್ಥಿಗಳು ಹೀಗೆಲ್ಲಾ ಮಾತನಾಡೋದಕ್ಕೆ ನೀವೇ ಕಾರಣ ಅಂತ ಭಾವಿಸ್ಲೆ ಮಿ.. ಜಯದೇವ್ ?”

"ಛೆ! ಛೆ! ಹಾಗೆ ತಪ್ಪು ತಿಳ್ಕೋಬೇಡಿ ಸಾರ್."

“ಮತ್ತೆ ? ಇದೆಲಾ ಏನೂಂತ ?”

“ಆಟದ ನಿಧೀ೦ತ ಇದೆಯಲ್ಲ, ಅದರಿಂದ ಖರ್ಚು ಮಾಡಬಹುದೂಂತ ಹುಡುಗರು ಹೇಳಿದ್ರು.”

“ಅವರು ಹೇಳಿದ್ರು ; ನೀವು ಕೇಳಿದ್ರಿ : ಅಲ್ಲ ?

ಈ ವಿಷಯದಲ್ಲೂ ಜಯದೇವನಿಗೆ ನಿರಾಶೆಯಾಯಿತು.

ಆದರೆ ಈ ಮಾತುಕತೆಯ ಪರಿಣಾಮವಾಗಿ ಮುಖೇಳ್ಳೋಪಾದ್ಯಾಯರು ವಾರಕ್ಕೆ ಎರಡು ಸಾರೆ ನಡೆಯಬೇಕಾದ 'ಡ್ರಿಲ್' ಪಾಠವನ್ನು ಕ್ರಮಬದ್ಧವಾಗಿ ತಾವೇ ನಡೆಸಿದರು. ಆದರೆ, ಹಾರಿ ಕುಪ್ಪಳಿಸಿ ಮೈಬಾಗಿಸಿ ಕೈಬಿಸಿ ಅವರಿಗೆ ಸಾಕುಸಾಕಾಗಿ ಹೋಯಿತು. ಡ್ರಿಲ್ ಪಾಠವನ್ನೂ ಕೊನೆಯಲ್ಲಿ 'ಯುವಕ ಜಯದೇವನೇ ನಡೆಸಿದ.

ನಂಜುಂಡಯ್ಯ ఆ ವಿಷಯವಾಗಿ ಅಂದರು:

'ನನಗೂ ಈ ಆಟಗಳಿಗೂ ಎಣ್ಣೆ-ಸೀಗೆ. ಮೊದಲಿಂದಲೂ ಅಷ್ಟೇ. ನಾನು ಪುಸ್ತಕ ಕೀಟ, ಸದ್ಯಃ ಥ್ರಿಲ್ ಪಾಠಗಳ್ನ ನೀವೇ ನಡೆಸ್ಕೊಂಡು ಹೋಗ್ರಿದೀರಲ್ಲ! ಅದರಿಂದ ನನಗೆಷ್ಟೋ ಸಮಾಧಾನವಾಗಿದೆಯಪ್ಪ!”

ಹಾಗೆ ನೋಡಿದರೆ ಜಯದೇವಸು ಪುಸ್ತಕಕೀಟವೇ ಆಗಿದ್ದ,

ನಂಜುಂಡಯ್ಯ ಸಿಗರೇಟು ಸೇದುತ್ತ ಕುಳಿತಿದ್ದರು. ಅವರನ್ನು ನೋಡುತ್ತ ಜಯದೇವ ಮನಸಿನಲ್ಲಿ ಅಂದುಕೊಂಡ:

'ಇವರು ಸುಖಜೀವಿ ಸಂಶಯವೇ ಇಲ್ಲ.'