ಪುಟ:Abhaya.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೩೦೫

"ನಾನೇ ಹೋಗಿ ಕರಕೊಂಡು ಬರಿತ್ತೀನಿ."

....ಅಷ್ಟು ಹಿಂದಿನ ದಿನ ಸಂಜೆ__ರಾತ್ರೆಯ ಘಟನೆಗಳು.

...............

ಬೆಳಕು ಹರಿಯುತಿತ್ತು. ತುಂಗಮ್ಮ ಪೂರ್ತಿ ಕಣ್ಣು ಬಿಟ್ಟು ಸುತ್ತಲೂ

ನೋಡಿದಳು. ಹುಡುಗಿಯರು ಒಬ್ಬೊಬ್ಬರಾಗಿ ಏಳುತಿದ್ದರು ಸ್ವತಃ

ದೊಡ್ಡಮ್ಮನೇ ತಮ್ಮ ಕೊಡಿಯಿಂದ ಹೊರಬಂದು ಗಂಟೆ ಬಾರಿಸಿದರು.

ಅಲ್ಲಿ ಹಾಗೆ ನಿಂತು ಅವರು ತುಂಗಮ್ಮನನ್ನು ನೋಡಿ ಅಂದರು:

"ಎದ್ದಿಯಾ ತುಂಗ?"

ಏಳುತ್ತ ತುಂಗಮ್ಮ ಉತ್ತರವಿತ್ತಳು:

"ಹೂಂ.ದೊಡ್ಡಮ್ಮ."

ಪ್ರಾತರ್ವಿಧಿಗಳು ಮುಗಿದುವು ಸರಸಮ್ಮ ಜಲಜೆಯೊಡನೆ, ಲಲಿತೆಯನ್ನು

ಕರೆತರಲು ಆಸ್ಪತ್ರೆಗೆ ಹೋದರು ತರಗತಿಗಳು ಆರಂಭವಾದುವು.

ತುಂಗಮ್ಮ ಅದೇನು ವಾ ಹೇಳಿದಳೊ ಆದಿನ! ಹುಳು ಕೊರೆದಂತೆ

ಒಂದೇ ವಿಷಯ ಆಕೆಯನ್ನು ಬಾಧಿಸುತಿತ್ತು : ತಾನು ಒಪ್ಪಿಕೊಂಡಿದ್ದು

ತಪ್ಪಾಯಿತು; ಇದು ಸಾಧ್ಯವಿಲ್ಲವೆಂದು ಸೋಮಶೇಖರನಿಗೆ ತಿಳಿಸಬೇಕು;

ಇವರನ್ನೆಲ್ಲ ಬಿಟ್ಟು, ಈ ಅಭಯಧಾಮವನ್ನು ಬಿಟ್ಟು, ತಾನು ಹೋಗುವು

ದೆಂದರೇನು?....ಹಾಗೆ ಹೃದಯವನ್ನು ಕಲ್ಲಾಗಿ ಮಾರ್ಪಡಿಸಿದಾಗ

ತುಂಗಮ್ಮನಿಗೆ ತುಸು ಸಮಾಧಾನವೆನಿಸಿತು.

ಸೊರಗಿದ ಸುಂದರಿಯಾಗಿ ಬಂದ ಲಲಿತೆಗೆ ಅಪೂರ್ವ ಸ್ವಾಗತ ದೊರೆಯಿತು.

"ವಕೀಲರು ಬರಲಿಲ್ವಾ"

__ಎಂದು ಲಲಿತಾ, ಜಲಜೆಯನ್ನು ನೋಡಿ ಕಣ್ಣು ಮಿಟಿಕಿಸುತ್ತಾ ತುಂಗಮ್ಮನೆದುರು ಅಂದಳು.

"ಯಾರು__ರಾಜಕುಮಾರರೆ?"

__ಎಂದಳು ಏನೂ ತಿಳಿಯದ ಜಲಜ, ತಮಾಷಗೆ.

ಆದರೆ ತುಂಗಮ್ಮ ನಗಲಿಲ್ಲ. ಆಕೆಯ ಗಂಭೀರ ಮುಖಮುದ್ರೆ ಲಲಿತ ಜಲಜೆಯನು ಸುಮ್ಮನಾಗುವಂತೆ ಮಾಡಿತು.

20