ಪುಟ:Rangammana Vathara.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

32

ಸೇತುವೆ

ತಿಳಿದುಕೊಳ್ಳದೆ ಇರುತ್ತಿರಲಿಲ್ಲ.
ರಂಗಮ್ಮನ ವಠಾರದಲ್ಲಿ ಯಾವ ಮನೆಯೂ ಹೆಚ್ಚು ದಿನ ಖಾಲಿಯಾಗಿ
ಬಿದ್ದುದೇ ಇಲ್ಲ. ಈ ಸಲ ಮಾತ್ರ ಕೊನೆಯ ಮನೆಗೆ ಯಾರೂ ಬರದೆ ಇದ್ದುದನ್ನು
ಕಂಡು ಅವರಿಗೆ ಕಸಿವಿಸಿಯಾಯಿತು.
ನಾರಾಯಣಿಯ ಸಂಸಾರದ ವಿಷಯ ವಠಾರದಲ್ಲಿ ಈಗ ಯಾರೂ ಮಾತನಾಡು
ತ್ತಿರಲಿಲ್ಲ. ಮೀನಾಕ್ಷಮ್ಮನ ಮಗನೇನೋ ಒಂದು ದಿವಸ ಪುಟ್ಟನಿಗಾಗಿ ಕಾದು ನೋಡಿದ.
"ಚಿಕ್ಕಮಾವಳ್ಳಿ ದೂರ ಕಣೋ. ಅಲ್ಲಿಂದ ಪುಟ್ಟ ಬರೋದಿಲ್ಲ," ಎಂದು
ಮೀನಾಕ್ಷಮ್ಮ ತಿಳಿಯ ಹೇಳಿದ ಮೇಲೆ, ಆ ಹುಡುಗ ಪುಟ್ಟನನ್ನು ಮರೆತು ವಠಾರದ
ಉಳಿದವರೆಡೆಯಿಂದ ತನ್ನ ಸ್ನೇಹಿತರನ್ನು ಆಯ್ದುಕೊಂಡ.
ತಮ್ಮೊಡನೆ ವಾಸ ಮಾಡಲು ಹೊಸತಾಗಿ ಬರುವ ಸಂಸಾರ ಯಾವುದೆಂದು ತಿಳಿ
ಯುವ ಕುತೂಹಲ ಮಾತ್ರ ವಠಾರದ ಎಲ್ಲರಿಗೂ ಇತ್ತು.
ದಿನ ಕಳೆಯುತಿತ್ತು. ಕೊನೆಯ ಮನೆಗೆ ಇನ್ನೂ ಮುಚ್ಚಿದ ಬಾಗಿಲೇ.
'ಅದೆಂಥ ಕೆಟ್ಟ ಘಳಿಗೇಲಿ ಬಿಟ್ಟಳೋ ಮಹಾರಾಯಿತಿ' ಎಂದು ತಮ್ಮೊಳಗೇ
ರಂಗಮ್ಮ ವಟಗುಟ್ಟದಿರಲಿಲ್ಲ.
ತಿಂಗಳ ಹದಿಮೂರನೆಯ ತಾರೀಖಿನ ದಿನ ಮನೆ ನೋಡಲು ಮತ್ತೆ ಒಬ್ಬಾತ
ಬಂದ.
ವಠಾರದೊಳಕ್ಕೆ ಅಪರಿಚಿತ ಕಾಲಿಟ್ಟುದನ್ನು ಮೊದಲು ನೋಡಿದ ಅವಿವಾಹಿತೆ
ಅಹಲ್ಯ ರಂಗಮ್ಮನಿಗೆ ವರದಿ ಮಾಡಿದಳು.
"ರಂಗಮ್ನೋರೆ, ಯಾರೋ ಬಂದಿದ್ದಾರೆ."
ಯಾರಾದರೂ ಬರುವುದು ಮನೆ ನೋಡುವುದಕ್ಕೆ ಎಂಬ ವಿಷಯದಲ್ಲಿ ರಂಗಮ್ಮ
ನಿಗೆ ಸಂದೇಹವಿರಲಿಲ್ಲ. ಅವರು ಬೆನ್ನು ಬಾಗಿ ನಡೆದು ಬಂದು, ಸೊಂಟದ ಮೇಲೆ ಕೈ
ಇರಿಸಿ ದೇಹವನ್ನೆತ್ತರಿಸಿ ಬಂದವನನ್ನು ನೋಡಿದರು.
ಎಲ್ಲ ಬಾಗಿಲುಗಳೆಡೆಯಿಂದಲೂ ಇಣಕಿ ನೋಡುತ್ತಿದ್ದ ಹೆಂಗಸರತ್ತ, ತನ್ನನ್ನೇ
ಹಿಂಬಾಲಿಸಿ ಬಂದ ಆರೇಳು ಸಣ್ಣ ಸಣ್ಣ ಹುಡುಗರತ್ತ, ದೃಷ್ಟಿ ಬೀರುತ್ತ ಆತ ಹೇಳಿದ:
"ಯಾವುದೋ ಮನೆ ಖಾಲಿ ಇದೆಯಂತೆ..."
"ಬನ್ನಿ," ಎಂದು ಸ್ವಾಗತಿಸಿ ರಂಗಮ್ಮ ನಡೆಗೋಲನ್ನೂರಿಕೊಂಡು ಓಣಿ
ಯುದ್ದಕ್ಕೂ ಮುಂದೆ ನಡೆದರು. ಆತ ಹಿಂಬಾಲಿಸಿದ..ಕಚ್ಚಿ ಪಂಚೆ: ಹಳೆಯದಾಗಿ
ಮಾಸಿದ್ದ ರೇಶಿಮೆಯ ಜುಬ್ಬ: ಎಣ್ಣೆ ಹಾಕಿ ಹಿಂದಕ್ಕೆ ಬಾಚಿದ್ದ, ಸ್ವಲ್ಪ ನೀಳವಾಗಿಯೇ
ಇದ್ದ ನಯವಾದ ಕ್ರಾಪು: ತೆಳ್ಳ್ಳಗೆ-ಎತ್ತರ:ಕೋಲು ಮುಖ...ವೀಳ್ಯ ಜಗದಿದ್ದ ತುಟಿ
ಗಳು ಕೆಂಪಗಿದ್ದವು.
ಆಹಲ್ಯಾ, ಕಾಮಾಕ್ಷಿಯ ಮನೆ ಬಾಗಿಲಿಗೆ ಜಿಗಿದು ಹೇಳಿದಳು"
"ನೋಡಿ ಬೇಕಾದರೆ, ಇವರು ಖಂಡಿತ ಒಪ್ಪೋದಿಲ್ಲ."
ಹೆಣ್ಣನ್ನು ನೋಡಲು ಗಂಡು ಬಂದ ಹಾಗೆ!