ಪುಟ:ಕರ್ನಾಟಕ ಗತವೈಭವ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



-೧೬೫-


ಬರಲಾರದು. ಎಂದು ಯಾರೂ ಸಂದೇಹಗ್ರಸ್ತರಾಗಕೂಡದು. ಬಂದು ಹೋದ ವ್ಯಕ್ತಿಗೆ, ಪುನಃ ಬರಲಿಕ್ಕೆ ಹೆಚ್ಚಿನ ಅನುಕೂಲ್ಯವಲ್ಲವೇ? ಒಮ್ಮೆ ಬಿಸಿಲಿನ ತಾಪದಿಂದ ನೀರಾರಿದರೂ ಮೇಘರಾಜನು ಪುನಃ ಪ್ರವೇಶಿಸಿ ತನ್ನ ಜೀವನ (ನೀರು) ಸಂತಾನವನ್ನು ಉಕ್ಕೇರುವಂತೆ ಮಾಡದಿರುವನೆ? ಮನಮುಟ್ಟಿ ಪ್ರಯತ್ನಿಸಿದರೆ ಇಂದಲ್ಲ ಇನ್ನೊಮ್ಮೆ 'ಗತವೈಭವ' ವನ್ನು ಆಗತ (ಬಂದಂಥ) ವೈಭವವನ್ನಾಗಿ ಮಾಡಬಹುದು. ಕನ್ನಡಿಗರೇ, ಒಂದೇ ಒಂದು ರೂಪಾಯಿ ಬೆಲೆಯ ೧೫೪ ಪುಟದ ಈ ಪುಸ್ತಕವನ್ನು ಒಮ್ಮೆ ತರಿಸಿ ಓದಿ. ಆ ಮೇಲೆ ಕಾರ್ಯಶಕ್ತಿಯನ್ನು ಹಬ್ಬಿಸಿ ಕೃತಾರ್ಥರಾಗಿರಿ.

ಕನ್ನಡ ಕೋಗಿಲೆ,
ಮಾರ್ಚಿ, ಸನ್ ೧೯೧೮.
(೪) ವಿಜ್ಯಾಪುರ ಕರ್ನಾಟಕ ಗತವೈಭವದ ಅಭಿಪ್ರಾಯ.

ರಾ| ರಾ| ವೆಂಕಟೇಶ ಭೀಮರಾವ ಆಲೂರ ಇವರು ಬರೆದ “ಕರ್ನಾಟಕ ಗತವೈಭವ” ಎಂಬ ಪುಸ್ತಕವು ನಮ್ಮ ಕೈಸೇರಿರುವದು. ಈ ಪುಸ್ತಕವು ಭಾಷಾ ದೃಷ್ಟಿಯಿಂದಲೂ ಐತಿಹಾಸಿಕ ದೃಷ್ಟಿಯಿಂದಲೂ ವಾಚನಾರ್ಹವಾಗಿರುವದು. ಇತ್ತಿತ್ತಲಾಗಿ ಕನ್ನಡ ಭಾಷಾ ಸೇವಕರ ಪರಿಶ್ರಮವಾದ ಪ್ರತಿ ವರ್ಷ ನಾಲ್ಕೆಂಟು ಪುಸ್ತಕಗಳು ಹೊರ ಬೀಳಹತ್ತಿರುವದು ಕನ್ನಡಿಗರ ಸುದೈವವೇ. ಆದರೆ ಈ ಪುಸ್ತಕಗಳನ್ನೆಲ್ಲಾ ಸೂಕ್ಷ ದೃಷ್ಟಿಯಿಂದ ಪರೀಕ್ಷಿಸಿ ನೋಡಲು ನಿಜವಾದ ಕನ್ನಡ ಅಭಿಮಾನಿಗಳಿಗೆ ಬಾಣವು ಬಡಿಯದಂತಾಗುವದು. ಯಾಕಂದರೆ ಅವುಗಳೊಳಗಿನ ವಾಕ್ಯ ರಚನೆಯು ಮಹಾರಾಷ್ಟ್ರ ಭಾಷೆಯನ್ನು ಹೋಲುವದು. ಶುದ್ಧ ಕನ್ನಡ ಶಬ್ದಗಳ ಯೋಜನೆಯಂತೂ ಅವುಗಳಲ್ಲಿ ಹೇಳ ಹೆಸರಿರುವದಿಲ್ಲ. ವಾಕ್ಯಗಳ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ಪುನಃ ಪುನಃ ಅವುಗಳನ್ನು ಓದಬೇಕಾಗುತ್ತದೆ. ಇನ್ನೂ ಅದರೊಳಗಿನ ಮರ್ಮವು ತಿಳಿಯುವದಂತೂ ಒತ್ತಟ್ಟಿಗಿರಲಿ ..
'ಕರ್ನಾಟಕ ಗತವೈಭವ'ದ ಭಾಷಾ ಸರಣಿಯನ್ನು ನೋಡಿ ಮನಸ್ಸು ಉಕ್ಕೇರುವದು. ಅದರಲ್ಲಿಯ ಶುದ್ಧ ಕನ್ನಡ ಶಬ್ದಗಳ ಯೋಜನೆಯು ಮನಸ್ಸಿಗೆ ಪರಮಾನಂದವನ್ನೀಯುವದು. ಸ್ವಲ್ಪದರದಲ್ಲಿ ಹೇಳುವದೇನಂದರೆ, ಹೊಸದಾಗಿ ಲೇಖಕರಾಗಲಿಚ್ಛಿಸುವವರು ಈ ಪುಸ್ತಕವನ್ನು ತಮ್ಮ ಮೇಲಪಂಗ್ತಿಯಾಗಿ ಇಟ್ಟು