ಪುಟ:ಮಿತ್ರ ದುಖಃ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

---೫---

ವರ್ಪಾಋತುವಿನ ಇಲ್ಲವೆ ಶರದೃತುವಿನ ದಿನವಲ್ಲದ್ದರಿಂದ ಆಕಾ ಶದ ವಿಸ್ತಾರವಾದ ಅಂಗಳದಲ್ಲಿ ಯಾವದೊಂದು ಮೇಘದ ತೀರ ಸಣ್ಣ ತುಣುಕು ಸಹ ಎಲ್ಲಿಯೂ ಕಾಣುತ್ತಿದ್ದಿಲ್ಲ. ಆ ಇಡಿ ಆಕಾಶವು ಕಸ ಉಡಿಗಿ ಸ್ವಚ್ಛ ಮಾಡಿದಂತೆ ತೋರುತ್ತಿ ತು, ಸೂರ್ಯನ ಸಾರಥಿಯಾದ ಅರುಣನು ರವಿ-ರಧವನ್ನು ಮೆಲ್ಲಮೆಲ್ಲನೆ ಹೊಡೆಯುತ್ತಿದ್ದನು. ಆ ರಥದ ಏಳೂ ಕುದುರೆ ಗಳ ಖುರ ಪುಟಗಳ ಸಪ್ಪಳವು ತೀರ ಮುಂದಾಗಿದ್ದರಿಂದ; ಅದು ಕ್ವಚಿತ್ತಾಗಿಯೇ ಕೇಳಿಸುತ್ತಿತ್ತೆಂದರೂ ಸಲ್ಲಬಹುದು. ಈ ಪ್ರಕಾರದ ಸುಶಾಂತ ಸಮಯದಲ್ಲಿ ಎಷ್ಟೋ ದಿವಸಗಳನಂತರ ಭೆಟ್ಟಿಯ ಯೋಗವು ಒದಗಿ ಬಂದ ಬಳಿಕ ಪರಸ್ಪರರಲ್ಲಿ ಆಗ ತಕ್ಕ ಔಪಚಾರಿಕ ಕ್ಷೇಮ ಸಮಾಚಾರಗಳು ನಡೆದಿರಲು, ಸೂ ರ್ಯನ ಮುಖವು ತುಸ ಮೌನವಾಗಿ ತೋರಿತು. ಆಗ ಚe ದ್ರನು ಕಾರಣವೇನೆಂದು ಸೂರ್ಯನಿಗೆ ಕೇಳಲು, ಸೂರ್ಯ ನು ಒಂದು ದೀರ್ಘ ನಿಟ್ಟುಸಿರನ್ನು ಬಿಟ್ಟು ಚಂದ್ರನಿಗೆ ತನ್ನ ಸ್ಥಿತಿಯನ್ನು ಹೇಳತೊಡಗಿದನು. ಆದರೆ ಅದನ್ನು ಹೇಳುವ ಮೊದಲು, ಇಬ್ಬರು ಜೀವದ ಗೆಳೆಯರು ಪರಸ್ಪರರ ಹಿತಗೋಷ್ಟಿಗಳನ್ನು ಮಾತಾಡುವಾಗ ಒಬ್ಬನು ತನ್ನ ಕೈಯ ನ್ನು ಸಹಜವಾಗಿ ಮತ್ತೊಬ್ಬನ ಹೆಗಲ ಮೇಲೆ ಚಲ್ಲ ಮಾತಾ ಡುವಂತೆ , ಸೂರ್ಯನು ತನ್ನ ಕೈಯನ್ನು ಹೆಗಲ ಮೇಲೆ ಒಗೆಯುವದಕ್ಕಾಗಿ ತನ್ನ ಹತ್ತಿರಕ್ಕೆ ಬರುವದನ್ನು ಕಂಡ ಕೂಡಲೆ ಚಂದ್ರನು ತುಸು ದೂರ ಸರಿದು ನಿಂತು, ಸೂ ರ್ಯನನ್ನು ಕುರಿತು-"ಮಿತ್ರಾ, ನನ್ನ ಪೂರ್ಣ ಲಕ್ಷ್ಯವಿದೆ; ನೀನು ಹೇಳುವದೆಲ್ಲವನ್ನೂ ನಾನು ಆಸ್ಥೆಯಿಂದ ಕೇಳುತ್ತಲಿದ್ದೇನೆ. ಅಂದಮೇಲೆ ಅಷ್ಟೊಂದು ಹತ್ತಿರಕ್ಕೆ ಬರುವ ತೊಂದರೆಯ ನೇತಕ್ಕೆ ವಹಿಸುತ್ತೀ?” ಎಂದು ನುಡಿದನು.