ಪುಟ:ಮಿತ್ರ ದುಖಃ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೨ ---

ತೊಟ್ಟಿಗೆ ಸ್ವಲ್ಪ ಕುಳಿತು ವಿಶ್ರಾಂತಿಯನ್ನು ತಕ್ಕೊಳ್ಳಲಿಕ್ಕೆ ಕೂಡ ನನಗೆ ಅವಕಾಶವಿರುವದಿಲ್ಲ. ಪ್ರವಾಸಿಗರು, ನಾಲ್ಕೆಂ ಟು ಹರದಾರಿ ನಡೆದ ಬಳಿಕ ಯಾವದೊಂದು ಬಾವಿಯ ದಂಡೆ ಯಲ್ಲಿ, ಅಥವಾ ನದಿಯ ತೀರದಲ್ಲಿ ಕೆಲಹೊತ್ತು ಕುಳಿತು ವಿಶ್ರಾಂತಿಯನ್ನು ತಕ್ಕೊಳ್ಳುವರು; - ಆನಂತರ ಅವರು ಮತ್ತೆ ಮುಂದಿನ ಹಾದಿಗೆ ಹತ್ತು ವರು. ಆದರೆ ಈ ನಿನ್ನ ದುರ್ದೆ. ವಿಯಾದ ಪ್ರವಾಸಿಗನು ನಡುವೆ ಎಲ್ಲಿಯೂ ಒಂದು ಕ್ಷಣ ಸಹ ನಿಲ್ಲದೆ ಒಂದೇಸವನೆ ಸಾವಿರಾರು ಹರದಾರಿಗಳ ದಾರಿ ಯನ್ನು ಕ್ರಮಿಸುತ್ತಿರಬೇಕಾಗುತ್ತದೆ! ಒಂದು ವೇಳೆ ನಾನು ದಾರಿಯಲ್ಲಿ ಎಲ್ಲಿಯಾದರೂ ತುಸು ಹೊತ್ತು ತಡೆದರೆ ವಿಶ್ರಾಂತಿ ಯ ಸ್ಥಳವಾದರೂನನ್ನ ಮಾರ್ಗದಲ್ಲಿ ಸಿಗುತ್ತದೆ? ಚಂದ್ರಾ, ಈ ನಮ್ಮ ಕೆಳಗಿನ ಭೂಮಂಡಲದ ಮೇಲೆ ಪ್ರವಾಸಿಗರಿಗೆ ಒಂದೇಸವನೆ ಬಿಸಿಲು ಹತ್ತಬಾರದೆಂದೂ, ಅವರಿಗೆ ವಿಶ್ರಾಂ ತಿಗೆ ಅನುಕೂಲವಾಗುವಂಥ ಸ್ಥಳವಿರಬೇಕೆಂದೂ ಎಷ್ಟೋ ಜನ ಪುಣ್ಯಾತ್ಮರು ರಹದಾರಿಗಳ ಎಡಬಲಗಳಲ್ಲಿ ವಿಶಾಲವಾದ ಮರಗಳನ್ನು ಬೆಳಿಸಿ ಆ ನೆಳಲಿನಿಂದಲೂ, ನಾಲ್ಕೆಂಟು ಹರದಾ ರಿಗಳ ಅಂತರದಿಂದ ಚಿಕ್ಕ ದೊಡ್ಡ ಕೆರೆಬಾವಿಗಳನ್ನು ಕಟ್ಟಿಸಿ ನೀರಿನ ಅನುಕೂಲತೆಯಿಂದಲೂ ಸಂತುಷ್ಟಿಯನ್ನುಂಟು ಮಾಡಿ ರುತ್ತಾರೆ. ಆದರೆ ನಿನ್ನ ಮಿತ್ರನು ಅಖಂಡ ಪ್ರವಾಸಿಗನಾಗಿ ದಾರೀ ಕ್ರಮಿಸಹತ್ತಿದಂದಿನಿಂದ ಇದು ವರೆಗೂ ಅವನಿಗೆ ದಾ ರಿಯಲ್ಲಿ ಬಿಸಿಲು ಹತ್ತಬಾರದೆಂದು ಗಿಡಬೆಳಿಸುವ, ಹಾಗು ತೃ ಪಾಶಮನಾರ್ಥವಾಗಿ ಕೆರೆಬಾವಿಗಳನ್ನು ತೊಡಿಸುವ ಪುಣ್ಯ ವಂತನಾದ ಒಬ್ಬ ಪರೋಪಕಾರಿಯ ಜನ್ಮವೆತ್ತಲಿಲ್ಲ. ಗೆಳೆಯಾ, ನನ್ನ ಪ್ರವಾಸದ ದಾರಿಯು ಮಿತಿಮೀರಿದ ಬೆಳಕಿನಿಂದ ಪ್ರಕಾ ಶಿಸುವಂಥದೂ, ಆತಿಶಯವಾದ ಬಿಸಿಲಿನಿಂದ ಕಾದು ಉರಿಯು