ಪುಟ:ಮಿತ್ರ ದುಖಃ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೪ ---

ಅದನ್ನು ಹಿಡಿಯುವ ಸಲುವಾಗಿ ಒಂದು ಸಂಬಳದ ಆಳನ್ನು ಸಹ ಗೊತ್ತು ಮಾಡಿದೆನು. ಆದರೆ ಮಿತ್ರಾ, ನನಗೆ ಶೀತಲತೆಯ ಸ್ಪರ್ಶವು ಕೂಡ ಆಜನ್ಮದಲ್ಲಾಗುವ ಯೋಗವಿಲ್ಲದ್ದರಿಂದ ಆ ಚಾಕರನಾದರೂ ನನಗೆ ಹೇಗೆ ಲಭಿಸಿಯಾನು? ಅವನು ಆ ಛತ್ರವನ್ನು ತಕ್ಕೊಂಡು ನನ್ನ ಸಮೀಪಕ್ಕೆ ಬರುತ್ತಿದ ಕೂಡ ಲೆ ಮೊದಲು ಆ ಛತ್ರವು ಸುಟ್ಟು ಬೂದಿಯಾಯಿತು; ಕ್ಷಣಾರ್ಧದಲ್ಲಿ ಅವನೂ ಸುಟ್ಟ ಬದನೇಕಾಯಂತಾಗಿ ಸತ್ತು ಹೋದನು.

“ಪರದುಃಖವು ಶೀತಲವಿರುತ್ತದೆ ೦ದು ಮಾನವರಲ್ಲಿ
ಒಂದು ನಾಣ್ಣುಡಿಯದೆ; ಆದರೆ ಛತ್ರ ಅಡಿಯುವ ಆ ಮನು ಷ್ಯನು ಸತ್ತದ್ದದರಿಂದ ಜಾಗೃತವಾದ ಈ ನಿನ್ನ ಮಿತ್ರ-ಸೂರ ನ ದುಃಖವು ಅವನಿಗೆ ಶೀತಲವಾಗಿ ತೋರಲಿಲ್ಲ. ಇಷ್ಟೇ ಅಲ್ಲ, ಆದರೆ ಪಾಪ! ಆ ಬಡವನ ಮರಣದಿಂದ ಈ ಸೂರ್ಯನಿಗೆ ಹೆಚ್ಚಾದ ಸಂತಾಪವಾಯಿತು.

ಈ ಪ್ರಕಾರದ ದುಃಖಾತಿರೇಕದ ಸ್ಮರಣದಿಂದ ಎಲ್ಲರಿ
ಗೂ ಸ್ವಾಭಾವಿಕವಾಗಿ ಉಂಟಾಗುವಂತೆ ಸೂರ್ಯನಿಗೂ ಒಂದು ತರದ ಬೆವರೂ ನಡುಗ ಹುಟ್ಟಿದವು; ಹಾಗು ಅವನ ಕಣ್ಣುಗಳಲ್ಲಿ ದುಃಖಾಶ್ರುಗಳು ಸಂಚರಿಸತೊಡಗಿದವು. ಆದರೆ ಸೂರ್ಯನ ಅತ್ಯುಷ್ಣ ಪ್ರಕೃತಿಯ ಮೂಲಕ ಆ ಬೆವರ ಹನಿಗಳೂ ಕಣ್ಣೀರುಗಳೂ ಅವನ ದೇಹದಿಂದ ಉದುರಿ ನೆಲಕ್ಕೆ ಬೀಳಲಿಲ್ಲ. ಅವು ಅಲ್ಲಿಂದಲೇ ಅಡಗಿಹೋದವು. ಮನದಣಿ ಕಣ್ಣೀರು ಹೋಗುವದರಿಂದ ದುಃಖವು ಕಡಿಮೆಯಾಗಿ ಸ್ವಾಭಾ ವಿಕವಾದ ಶಾಂತಿಯು ಮನುಷ್ಯರಿಗೆ ದೊರೆಯುತ್ತದೆ. ಆದರೆ ಆ ಸಾಧನವು ಕಡಸೂರ್ಯನಿಗೆ ಸಾಧ್ಯವಿಲ್ಲದ್ದರಿಂದ ಮಿತ್ರ 'ನ ಅಂತಃಕರಣ ವೃತ್ತಿಯು ಬೆಂದು ಬೆಂಡಾಯಿತು. ಅದನ್ನು