ಪುಟ:ಮಿತ್ರ ದುಖಃ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೭ ---

ಪ್ರತಿ ದಿವಸ ಸಾಯಂಕಾಲದಲ್ಲಿ ಅರುಣಾಚಲ ಪರ್ವತದ ಎತ್ತ ರಪ್ರದೇಶದಿಂದ ನಾನು ಪಶ್ಚಿಮ ಸಮುದ್ರದಲ್ಲಿ ಹಾರಿಕೊಳ್ಳು ತೇನೆಂದೂ, ಹಾಗು ಸಂಪೂರ್ಣ ರಾತ್ರಿಯನ್ನು ಅ ಸಮುದ್ರ ದಲ್ಲಿ ವಿಹರಿಸುತ್ತ ಕಳೆದು ವಿಶ್ರಾಂತಿ ಹೊಂದಿ ಹರುಷಗೊಂಡು ಮರುದಿವಸ ಬೆಳಿಗ್ಗೆ ಉದಯಾಚಲದ ದಿನ್ನೆ ಯನ್ನೇರಿ ಮೇಲಕ್ಕೆ ಬರುತ್ತೇನೆಂದೂ ಅನ್ನು ತ್ತಾರೆ. ಆದರೆ ಈ ಕಲ್ಪನೆಯು ಅವರ ಬುದ್ಧಿ ಮಾಂದ್ಯತ್ವವನ್ನು ಮಾತ್ರ ವ್ಯಕ್ತಗೊಳಿಸುತ್ತದೆ. ವಿತ್ತಾ, ಅಂಥ ಸುದೈವವು ನನಗೆಲ್ಲಿಯದೆ? ಜಗತ್ತಿನೊಳಗಿನ ತೀರ ಕ್ಷುದ್ರ ಅಂತಃಕರಣದ ಜನರು ಸಹ ಅವಶ್ಯವಿದ್ದಾಗ ಹಾಗು ಪ್ರಸಂಗ ಎಶೇಷದಲ್ಲಿ ಒಬ್ಬರಿಗೊಬ್ಬರು ಸಹಾಯಮಾಡು ತಾರೆ; ಆದರೆ ಜಗತ್ತಿನಲ್ಲಿ ಮಹಾಭೂತಗಳೆಂದೆನಿಸಿಕೊಳ್ಳುವ ನಾವು ಎಂದೂ ಪರಸ್ಪರರಿಗೆ ಸಹಾಯ ಮಾಡುವಂತಿಲ್ಲ. ನಿನ್ನ ತಣ್ಣೀರಿನಲ್ಲಿ ಸ್ನಾನಮಾಡುವೆನೆಂದು ನಾನು ಒಮ್ಮೆ ಸಮುದ್ರವನ್ನು ಕುರಿತು ಕೇಳಿಕೊಂಡಿದ್ದೆನು; ಆದರೆ ಅದು ಬರಬೇಡರೆಂದು ಖಂಡಿ ತವಾಗಿ ಹೇಳಿಬಿಟ್ಟಿತು.ಲಗ ಸಮುದ್ರವು ನಿರ್ದಯವಾಗಿ ನುಡಿದ ದೈನಂದರೆ,-“ದೂರಿನಿಂದಲೇ ನೀನು ನನ್ನ ಜಲರಾಶಿಯನ್ನು ಶೋಷಿಸುತ್ತಿರುವದಷ್ಟು ಸಾಕಾಗಿದೆ. ಸ್ನಾನ ಮಾಡಲಿಕ್ಕೆಂದು ನೀನು ಒಮ್ಮೆ ನನ್ನ ಬಲ ಶರೀರದಲ್ಲಿ ಪ್ರವೇಶದೆಯೆಂದರೆ ತೀರಿತು; ಅಷ್ಟರಲ್ಲಿ ನೀನು ನನ್ನನ್ನು ಸುಟ್ಟ ಸೂರೆಂ ಡೇಬಿಡುವೆ. ಆದ್ದರಿಂದ ನೀನು ನನ್ನಿಂದ ದೂರಿರುವದೇ ಯೋ ಗ್ಯವು! ಅಗಸ್ತ್ರ ಖುಷಿಯು ಒಮ್ಮೆ ತನ್ನ ಒಂದು ಆಚಮ ನದಿಂದ ನನ್ನನ್ನು ಬತ್ತಿಸಿ ಬಿಟ್ಟದ್ದನು; ರಾಗು ಶ್ರೀ ರಾಮ ಚ೦ದ್ರನು ತನ್ನ ಬಾಣದಿಂದ ನನ್ನನ್ನು ಗಾಯಗೊಳಿಸಿದ್ದನು. ಆ ವೇದನೆಗಳನ್ನು ನಾನು ಇನ್ನೂ ಮರೆತಿರುವದಿಲ್ಲ. ಹೀಗಿ ದ್ದು, ಈಗ ನಿನಗೆ ನನ್ನ ಬಲದಲ್ಲಿ ಸ್ನಾನಕ್ಕೆ ಅಪ್ಪಣೆಕೊಟ್ಟು,