ಪುಟ:ಮಿತ್ರ ದುಖಃ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೧೮ ---

ನಾನು ನನ್ನನ್ನು ಪ್ರನಃ ಸುಡಿಸಿಕೊಂಡು ದುಃಖಪಡಲೇನು? ಇದರ ಹೊರತು ನಿನಗೆ ಬೇಡೆನ್ನ ಲಿಕ್ಕೆ ಮತ್ತೂ ಒಂದು ಕಾರ ಣವಿರುತ್ತದೆ. ಅದೇನೆಂದರೆ, ನನ್ನ ಅಂತಃಶರೀರದಲ್ಲಿ ಈ ಮೊದಲೇ ಒಂದು ಅಗ್ನಿಯು ಸೇರಿಕೊಂಡಿರುತ್ತದೆ. ಆ ವಡವಾ ನಲದಿಂದ ನನ್ನ ಅಂತರಂಗವು ಸುಡುವದರಿಂದ ನಾನು ಪ್ರತಿ ನಿತ್ಯ ಎಷ್ಟು ವಿಹ್ವಲನಾಗುತ್ತೇನೆಂಬದು ಸರ್ವ ಶ್ರುತವಿದೆ. ಅಂದಮೇಲೆ ನಿನ್ನ ೦ಧ ಮತ್ತೊಂದು ಅಗ್ನಿ ಯ ಗುಂಡಿಗೆ ನನ್ನ ಅಂತರಂಗದಲ್ಲಿ ಇಂಬುಗೊಡಬೇಕೆಂಬದು ನನಗೆ ಕೊಂಚ ವೂ ಉಚಿತವೆನಿಸುವದಿಲ್ಲ.”

ಸಮುದ್ರಣಾಧನ ಈ ಪ್ರತ್ಯುತ್ತರವನ್ನು ಕೇಳಿ, ನಾನು ನಿರುತ್ತರನಾದೆನು. ನನ್ನಿಂದ ಪರರಿಗೆ ಈ ಪರಿ ಮರ ಣಾಂತ ದುಃಖವಾಗುತ್ತಿದ್ದರೆ, ನಾನು ಅವರನ್ನು ಆ ದುಃಖಕ್ಕೊಳಪಡಿಸದೆ, ನನ್ನ ದುಃಖವನ್ನು ನಾನೇ ಸಹಿಸುತ್ತ ಸುಮ್ಮನಿರುವದು ಲೇಸೆಂದು ಮನಸ್ಸಿನಲ್ಲಿ ಬಗೆದು, ಅಂದಿನಿಂದ ನಾನು ಸ್ನಾನದ ಆ ಉಸಾಬರಿಯನ್ನೇ ಬಿಟ್ಟು ಟ್ಟಿರುವೆನು, ಎಂದು ನುಡಿದ ಬಳಿಕ ದುಃಖಾತಿರೇಕದಿಂದ ಕೆಲಹೊತ್ತಿನವರೆಗೆ ಸೂರ್ಯನ ಬಾಯಿಂದ ಶಬ್ದಗಳೇ ಹೊರಡದಾದವು. ಆಗ ಅವನು ರಥದೊಳಗಿನ ತನ್ನ ಪೀಠದ ಲೋಡಿಗೆ ಒರೆದುಕೊಂಡು ಕುಳಿತು ತುಸು ವಿಶ್ರಾಂತಿಯನ್ನು ಅನುಭವಿಸಹತ್ತಿದನು.

iii

ಒಡೆಯನ ಆ ಅನುಕಂಪನೀಯ ಸ್ಥಿತಿಯನ್ನು ಕಂಡು ಅರುಣನು ಸೂರ್ಯನ ದುಃಸ್ಥಿತಿಯ ಆ ಕಥೆಯನ್ನು ಮುಂದೆ ಸಾಗಿಸಿದನು. ಆಗ ಅರುಣನು ಚಂದ್ರನನ್ನು ಕುರಿತು-----"ಶಶದ ರಾ, ಈ ಸಂಕಟಪರಂಪರೆಗಳಿಂದ ನಮ್ಮ ಒಡೆಯನ ಅವಸ್ಥೆ