ಪುಟ:ಮಿತ್ರ ದುಖಃ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೨೩ ---

ಕೈ ತಾಕಿ, ರಬರಧದ ಗಾಲಿಗಳ ಅಚ್ಚು ಕೊಂಕಬಾರದೆಂ ತ, ಇಲ್ಲವೆ ಆ ರಥವು ಒಗ್ಗಾಲಿಯಾಗಿ ಬೀಳಬಾರದೆ ತಲೂ, ನಮ್ಮ ಹಾದಿಯನ್ನು ಯಾವಾಗಲೂ ಸ್ವಚ್ಛ ಹಾಗು ನಿರ್ಧಾಸ್ಯವಾಗಿಡುವ ಕೆಲಸದ ಮೇಲೆ ನಿಯಮಿಸಿದ ಗಾಳಿದೇ ದನು ಆ ಮೇಘಗಳನ್ನು ತನ್ನ ಪರುಗಾಳಿಯೆಂಬ ಕಸಬೊರಿಗೆ ಯಿಂದಾಗಲಿ, ಸಂಕಿಯಿಂದಾಗಲಿ ದೂಡಿ ಬಿಡುವ ದಕ್ಷತೆ ಯನ್ನು ವಹಿಸಿರುತ್ತಾನೆ. ಆದರೆ ಅವನ ದೃಷ್ಟಿ ತಪ್ಪಿಸಿ ಯಾವ ದೊಂದು ಕಲ್ಲೆದೆಯು ಮೇಘವು ನಮ್ಮ ಸುದೈವದಿಂದ ನಮ್ಮ ದಾರಿಯಲ್ಲಿ ನಮಗೆ ಗಂಟು ಬಿದ್ದರೆ, ಹಾಗು ನಮ್ಮ ಸುದೈವ ದಿಂದ ನಮ್ಮ ಯಜಮಾನನ ದೃಷ್ಟಿಯು ಅದರ ಮೇಲೆ ಬೀಳದಿದ್ದರೆ, ಈ ನಮ್ಮ ರಥದ ಕುದುರೆಗಳು ಅತ್ಯಂತ ಹಸಿದ ಶಾಚಿಗಳಂತೆ ಆ ಮೇಘದ ಮೈ ಮೇಲೆ ಒಮ್ಮೆಲೆ ಏರಿ ಹೋಗುತ್ತವೆ; ಆ ಮೇಘದ ಶರೀರದಲ್ಲಿ ಸೇರುತ್ತವೆ; ಆದ ನ್ನು ತುಂಡು ತುಂಡಾಗಿ ಮಾಡಿಬಿಡುತ್ತವೆ; ಅದರೊಳಗಿನ ತಣ್ಣೀರನ್ನು ಗಟ ಗಟವೆಂದು ಕುಡಿಯುತ್ತವೆ; ಅದರಲ್ಲಿಯ ಆಣೇಕಲ್ಲುಗಳನ್ನು ಕೂಡ ಕಡವೆಂದು ಕಡಿದು ತಿನ್ನುತ್ತವೆ; ಮತ್ತು ಆ ಮೇಘದಿಂದ ಯವರೊಂದು ಕಾರಂಜಿಯ ತುಂ, ತುರವನಿಗಳಂತೆ ಬಹು ಎತ್ತರದಿಂದ ಸಳಸಳವೆಂದು ಸಾರುವ ಹಲವು ಜಲಧಾರೆಗಳ [ವಿರುದ್ಧ ಮಳೆಯ ಕೆಳಗೆ ಕ್ಷಣ ಹೊತ್ತು ನಿಂತು ಈ ಕುದುರೆಗಳು ತಮ್ಮ ಸಂತಸ್ತ ದೇಹಗಳಗೆ ಸಂತರ್ಪಣವನ್ನು ಮಾಡಿಸುತ್ತಿರುತ್ತವೆ! ಆ ವೇಳೆಯಲ್ಲಿ ಇವುಗಳ ಸಮಾಧಾನವಾಗುವದನ್ನು ನೋಡಿ, ನನಗೂ ಸಮಾ ಧಾನವಾಗುತ್ತದೆ. ಆಗ ಇವುಗಳ ವೇಗವು ತುಸು ಕಡಿಮೆ ಯಾದರೂ ನಾನು ಇವುಗಳಿಗೆ ಚ ಬಕದಿಂದ ಹೊಡೆಯುವದಿಲ್ಲ